ದೇಶ

ಕುಲಭೂಷನ್ ಗಲ್ಲಿಗೆ ತಡೆ: ತಮ್ಮ ಕಾಲೆಳೆದ ಪಾಕ್ ಪ್ರಜೆಗೆ ಸೆಹ್ವಾಗ್ ತಿರುಗೇಟು

Vishwanath S
ನವದೆಹಲಿ: ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲ್ ಭೂಷಣ್ ಜಾಧವ್ ಅವರ ಗಲ್ಲುಶಿಕ್ಷೆಗೆ ಅಂತಾರಾಷ್ಟ್ರೀಯ ಕೋರ್ಟ್ ತಡೆ ನೀಡಿದ ಹಿನ್ನೆಲೆಯಲ್ಲಿ ಟ್ವೀಟರ್ ನಲ್ಲಿ ಸಂತಸ ವ್ಯಕ್ತಪಡಿಸಿದ್ದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಕಾಲೆಳೆದ ಪಾಕಿಸ್ತಾನ ಪ್ರಜೆಗೆ ತಿರುಗೇಟು ನೀಡಿದ್ದಾರೆ. 
ಟ್ವೀಟರ್ ನಲ್ಲಿ ಸೆಹ್ವಾಗ್ ಸತ್ಯಮೇವ ಜಯತೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಸಿಟ್ಟುಕೊಂಡ ಪಾಕ್ ಅಭಿಮಾನಿ ಸೆಹ್ವಾಗ್ ಗೆ ಟ್ವೀಟ್ ಗೆ ಪ್ರತಿಕ್ರಿಯಿಸಿ ಇದು ತಾತ್ಕಾಲಿಕ ತೀರ್ಪಷ್ಟೇ. ನಾವು ಆತನನ್ನು ಗಲ್ಲಿಗೇರಿಸಿಯೇ ತೀರುತ್ತೇವೆ ಎಂದು ಹೇಳಿದ್ದ ಇದಕ್ಕೆ ಸೆಹ್ವಾಗ್ ಅದು ನಿನ್ನ ಕನಸಿನಲ್ಲಿ ಸಾಧ್ಯವಾಗಬಹುದೇನೋ, ಅದೇ ನೀವು ನಮ್ಮ ವಿರುದ್ಧ ವಿಶ್ವಕಪ್ ಪಂದ್ಯ ಗೆದ್ದಂತೆ. ನೀವು ನಾಯಿಯನ್ನು ಸಾಕಿರಿ, ಬೆಕ್ಕನ್ನಾದರೂ ಸಾಕಿರಿ. ಆದರೆ ತಪ್ಪು ಕಲ್ಪನೆಗಳನ್ನು ಮಾತ್ರ ಬೆಳೆಸಿಕೊಳ್ಳಬೇಡಿ ಎಂದು ಉತ್ತರಿಸಿದ್ದಾರೆ. 
ಪಾಕ್ ಪ್ರಜೆಗೆ ದಿಟ್ಟ ಉತ್ತರ ನೀಡಿದ ವೀರೇಂದ್ರ ಸೆಹ್ವಾಗ್ ಅವರಿಗೆ ಟ್ವೀಟರಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
SCROLL FOR NEXT