ಪೋರ್ನ್ ವಿಡಿಯೋ ಹುಡುಕಿದರೆ, ಭಕ್ತಿಗೀತೆ ಪ್ರಸಾರ: ಇದು ಬಿಹೆಚ್ ಯು ಪ್ರೊಫೆಸರ್ ಅಭಿವೃದ್ಧಿಪಡಿಸಿರುವ ಆ್ಯಪ್ ನ ಮಹಿಮೆ! 
ದೇಶ

ಪೋರ್ನ್ ಹುಡುಕಿದರೆ, ಭಕ್ತಿಗೀತೆ ಸಿಗುತ್ತೆ: ಇದು ಬಿಹೆಚ್ ಯು ಪ್ರೊಫೆಸರ್ ಆ್ಯಪ್ ಮಹಿಮೆ!

ಯುವಜನತೆ ಇಂಟರ್ ನೆಟ್ ನಲ್ಲಿ ಹೆಚ್ಚು ಪೋರ್ನ್ ವೀಕ್ಷಿಸುತ್ತಿರುವುದರ ಬಗ್ಗೆ ಆತಂಕಗಿಂಡಿದ್ದೀರಾ? ಚಿಂತೆ ಬಿಡಿ ಏಕೆಂದರೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಒಬ್ಬರು ಪೋರ್ನ್ ಗಾಗಿ ಹುಡುಕಿದರೆ

ಯುವಜನತೆ ಇಂಟರ್ ನೆಟ್ ನಲ್ಲಿ ಹೆಚ್ಚು ಪೋರ್ನ್ ವೀಕ್ಷಿಸುತ್ತಿರುವುದರ ಬಗ್ಗೆ ಆತಂಕಗಿಂಡಿದ್ದೀರಾ? ಚಿಂತೆ ಬಿಡಿ ಏಕೆಂದರೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಒಬ್ಬರು ಪೋರ್ನ್ ಗಾಗಿ ಹುಡುಕಿದರೆ ಭಕ್ತಿಗೀತೆ ಸಿಗುವಂತಹ ಆಪ್ ನ್ನು ಅಭಿವೃದ್ಧಿಪಡಿಸಿದ್ದಾರೆ. 
ಬಿಹೆಚ್ ಯು ನ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ವಿಭಾಗದ ಫೊಫೆಸರ್ ಆಗಿರುವ ನರಶಾಸ್ತ್ರಜ್ಞ ಡಾ.ವಿಜಯ್ ನಾಥ್ ಮಿಶ್ರಾ ಹರ್ ಹರ್ ಮಹದೇವ್ ಎಂಬ ಆಪ್ ನ್ನು ಅಭಿವೃದ್ಧಿಪಡಿಸಿದ್ದು, ಪೋರ್ನೋಗ್ರಫಿ ಇರುವ ವೆಬ್ ಸೈಟ್ ಗಳನ್ನು ಬ್ಲಾಕ್ ಮಾಡುತ್ತದೆ. 
ಬಳಕೆದಾರರು ಪೋರ್ನ್ ವೆಬ್ ಸೈಟ್ ಗಳಿಗಾಗಿ ಹುಡುಕಿದರೆ ಪೋರ್ನ್ ವೆಬ್ ಸೈಟ್ ಗಳು ತೆರೆದುಕೊಳ್ಳುವುದರ ಬದಲು ಭಕ್ತಿಗೀತೆಗಳು ಪ್ರಸಾರವಾಗುತ್ತದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಡಾ.ವಿಜಯ್ ನಾಥ್ ಮಿಶ್ರಾ ಹೇಳಿದ್ದಾರೆ. 
ಇಂಟರ್ ನೆಟ್ ನಲ್ಲಿ ಪೋರ್ನ್ ಸುಲಭವಾಗಿ ಸಿಗುವುದರಿಂದ ಮನುಷ್ಯರ ಮನಸು ಹಿಂಸಾಚಾರ, ಅಶ್ಲೀಲತೆಯತ್ತ ತಿರುಗುತ್ತದೆ. ಇದನ್ನು ತಪ್ಪಿಸಲು ಆಪ್ ನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಡಾ.ಮಿಶ್ರಾ ಹೇಳಿದ್ದಾರೆ. ಆಪ್ ಪ್ರಾರಂಭದ ಹಂತದಲ್ಲಿದ್ದು, ಈಗ ಹಿಂದೂ ಭಕ್ತಿಗೀತೆಗಳಷ್ಟೇ ಇದೆ. ಮುಂದಿನ ದಿನಗಳಲ್ಲಿ ಇತರ ಧರ್ಮಗಳ ಭಕ್ತಿಗೀತೆಗಳನ್ನೂ ಸೇರಿಸಲಾಗುತ್ತದೆ ಎಂದು ಮಿಶ್ರಾ ತಿಳಿಸಿದ್ದಾರೆ. ಪರೀಕ್ಷಾರ್ಥವಾಗಿ ಬಿಡುಗಡೆ ಮಾಡಲಾಗಿರುವ ಆಪ್ ನ್ನು ಈ ವರೆಗೂ 238 ಜನರು ಡೌನ್ ಲೋಡ್ ಮಾಡಿದ್ದಾರೆ. ಒಟ್ಟು 3,000 ಆಕ್ಷೇಪಾರ್ಹ ವೆಬ್ ಸೈಟ್ ಗಳನ್ನು ಗುರುತಿಸಿದೆ ಎಂದು ಡಾ. ಮಿಶ್ರಾ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

SCROLL FOR NEXT