ಪೋರ್ನ್ ವಿಡಿಯೋ ಹುಡುಕಿದರೆ, ಭಕ್ತಿಗೀತೆ ಪ್ರಸಾರ: ಇದು ಬಿಹೆಚ್ ಯು ಪ್ರೊಫೆಸರ್ ಅಭಿವೃದ್ಧಿಪಡಿಸಿರುವ ಆ್ಯಪ್ ನ ಮಹಿಮೆ! 
ದೇಶ

ಪೋರ್ನ್ ಹುಡುಕಿದರೆ, ಭಕ್ತಿಗೀತೆ ಸಿಗುತ್ತೆ: ಇದು ಬಿಹೆಚ್ ಯು ಪ್ರೊಫೆಸರ್ ಆ್ಯಪ್ ಮಹಿಮೆ!

ಯುವಜನತೆ ಇಂಟರ್ ನೆಟ್ ನಲ್ಲಿ ಹೆಚ್ಚು ಪೋರ್ನ್ ವೀಕ್ಷಿಸುತ್ತಿರುವುದರ ಬಗ್ಗೆ ಆತಂಕಗಿಂಡಿದ್ದೀರಾ? ಚಿಂತೆ ಬಿಡಿ ಏಕೆಂದರೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಒಬ್ಬರು ಪೋರ್ನ್ ಗಾಗಿ ಹುಡುಕಿದರೆ

ಯುವಜನತೆ ಇಂಟರ್ ನೆಟ್ ನಲ್ಲಿ ಹೆಚ್ಚು ಪೋರ್ನ್ ವೀಕ್ಷಿಸುತ್ತಿರುವುದರ ಬಗ್ಗೆ ಆತಂಕಗಿಂಡಿದ್ದೀರಾ? ಚಿಂತೆ ಬಿಡಿ ಏಕೆಂದರೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಒಬ್ಬರು ಪೋರ್ನ್ ಗಾಗಿ ಹುಡುಕಿದರೆ ಭಕ್ತಿಗೀತೆ ಸಿಗುವಂತಹ ಆಪ್ ನ್ನು ಅಭಿವೃದ್ಧಿಪಡಿಸಿದ್ದಾರೆ. 
ಬಿಹೆಚ್ ಯು ನ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ವಿಭಾಗದ ಫೊಫೆಸರ್ ಆಗಿರುವ ನರಶಾಸ್ತ್ರಜ್ಞ ಡಾ.ವಿಜಯ್ ನಾಥ್ ಮಿಶ್ರಾ ಹರ್ ಹರ್ ಮಹದೇವ್ ಎಂಬ ಆಪ್ ನ್ನು ಅಭಿವೃದ್ಧಿಪಡಿಸಿದ್ದು, ಪೋರ್ನೋಗ್ರಫಿ ಇರುವ ವೆಬ್ ಸೈಟ್ ಗಳನ್ನು ಬ್ಲಾಕ್ ಮಾಡುತ್ತದೆ. 
ಬಳಕೆದಾರರು ಪೋರ್ನ್ ವೆಬ್ ಸೈಟ್ ಗಳಿಗಾಗಿ ಹುಡುಕಿದರೆ ಪೋರ್ನ್ ವೆಬ್ ಸೈಟ್ ಗಳು ತೆರೆದುಕೊಳ್ಳುವುದರ ಬದಲು ಭಕ್ತಿಗೀತೆಗಳು ಪ್ರಸಾರವಾಗುತ್ತದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಡಾ.ವಿಜಯ್ ನಾಥ್ ಮಿಶ್ರಾ ಹೇಳಿದ್ದಾರೆ. 
ಇಂಟರ್ ನೆಟ್ ನಲ್ಲಿ ಪೋರ್ನ್ ಸುಲಭವಾಗಿ ಸಿಗುವುದರಿಂದ ಮನುಷ್ಯರ ಮನಸು ಹಿಂಸಾಚಾರ, ಅಶ್ಲೀಲತೆಯತ್ತ ತಿರುಗುತ್ತದೆ. ಇದನ್ನು ತಪ್ಪಿಸಲು ಆಪ್ ನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಡಾ.ಮಿಶ್ರಾ ಹೇಳಿದ್ದಾರೆ. ಆಪ್ ಪ್ರಾರಂಭದ ಹಂತದಲ್ಲಿದ್ದು, ಈಗ ಹಿಂದೂ ಭಕ್ತಿಗೀತೆಗಳಷ್ಟೇ ಇದೆ. ಮುಂದಿನ ದಿನಗಳಲ್ಲಿ ಇತರ ಧರ್ಮಗಳ ಭಕ್ತಿಗೀತೆಗಳನ್ನೂ ಸೇರಿಸಲಾಗುತ್ತದೆ ಎಂದು ಮಿಶ್ರಾ ತಿಳಿಸಿದ್ದಾರೆ. ಪರೀಕ್ಷಾರ್ಥವಾಗಿ ಬಿಡುಗಡೆ ಮಾಡಲಾಗಿರುವ ಆಪ್ ನ್ನು ಈ ವರೆಗೂ 238 ಜನರು ಡೌನ್ ಲೋಡ್ ಮಾಡಿದ್ದಾರೆ. ಒಟ್ಟು 3,000 ಆಕ್ಷೇಪಾರ್ಹ ವೆಬ್ ಸೈಟ್ ಗಳನ್ನು ಗುರುತಿಸಿದೆ ಎಂದು ಡಾ. ಮಿಶ್ರಾ ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

SCROLL FOR NEXT