ಹೈದರಾಬಾದ್: ಇಸ್ಲಾಮಿಕ್ ಬ್ಯಾಂಕಿಂಗ್ ಪ್ರಾರಂಭಿಸುವ ಉದ್ದೇಶ ಭಾರತ ಸರ್ಕಾರಕ್ಕೆ ಇಲ್ಲ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಭಾರತ ಜಾತ್ಯಾತೀತ, ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಈಗಾಗಲೇ ಇರುವ ಸರ್ಕಾರಿ, ಖಾಸಗಿ ಬ್ಯಾಂಕಿಂಗ್ ವ್ಯವಸ್ಥೆ ಎಲ್ಲರಿಗೂ ಮುಕ್ತವಾಗಿದೆ. ಆದ್ದರಿಂದ ಇಸ್ಲಾಮಿಕ್ ಬ್ಯಾಂಕಿಂಗ್ ನ್ನು ಪ್ರಾರಂಭಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಅಲ್ಪಸಂಖ್ಯಾತ ಇಲಾಖೆ ನಖ್ವಿ ತಿಳಿಸಿದ್ದಾರೆ.
ಕೆಲವು ಸಂಘಟನೆಗಳು ಇಸ್ಲಾಮಿಕ್ ಬ್ಯಾಂಕಿಂಗ್ ಪ್ರಾರಂಭ ಮಾಡುವಂತೆ ಸಲಹೆ ನೀಡಿದ್ದವು, ಆದರೆ ಭಾರತ ಸರ್ಕಾರ ಇಸ್ಲಾಮಿಕ್ ಬ್ಯಾಂಕಿಂಗ್ ಪ್ರಾರಂಭಿಸುವುದಿಲ್ಲ ಎಂದು ನಖ್ವಿ ತಿಳಿಸಿದ್ದಾರೆ.