ರಾಷ್ಟ್ರಪತಿ ರಾಮ ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ 
ದೇಶ

ಲಾಲ ಬಹಾದುರ್ ಶಾಸ್ತ್ರಿ ಜನ್ಮ ದಿನ: ರಾಷ್ಟ್ರಪತಿ, ಪ್ರಧಾನಿಯಿಂದ ಗೌರವ ನಮನ

ಭಾರತದ ದ್ವಿತೀಯ ಪ್ರಧಾನಿ ಲೆಫ್ಟಿನೆಂಟ್ ಲಾಲ ಬಹಾದುರ್ ಶಾಸ್ತ್ರಿ ಅವರ ....

ನವದೆಹಲಿ: ಭಾರತದ ದ್ವಿತೀಯ ಪ್ರಧಾನಿ ಲೆಫ್ಟಿನೆಂಟ್ ಲಾಲ ಬಹಾದುರ್ ಶಾಸ್ತ್ರಿ ಅವರ 113ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರಪತಿ ರಾಮ ನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನ ಮಂತ್ರಿ ನರೇಂದ್ರ ಮೋದಿ ದೆಹಲಿಯ ವಿಜಯಾಘಾಟ್ ನಲ್ಲಿರುವ ಅವರ ಸಮಾಧಿ ಬಳಿ ತೆರಳಿ ಪುಷ್ಜ ನಮನ ಸಲ್ಲಿಸಿದರು.
ದೇಶದ ರೈತರು ಮತ್ತು ಯೋಧರಿಗೆ ಲಾಲ ಬಹಾದುರ್ ಶಾಸ್ತ್ರಿಯವರು ಸ್ಪೂರ್ತಿಯಾಗಿದ್ದರು ಎಂದು ಪ್ರಧಾನಿ ಇದಕ್ಕೂ ಮುನ್ನ ಟ್ವಿಟ್ಟರ್ ನಲ್ಲಿ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದರು.
ಲಾಲ ಬಹಾದುರ್ ಶಾಸ್ತ್ರಿ 1904, ಅಕ್ಟೋಬರ್ 2ರಂದು ಉತ್ತರ ಪ್ರದೇಶದ ಮುಗಲ್ ಸರಾಯಿ ಜಿಲ್ಲೆಯಲ್ಲಿ ಜನಿಸಿದ್ದರು. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸತ್ಯಾಗ್ರಹಿಯಾಗಿ ಸಣ್ಣ ವಯಸ್ಸಿನಲ್ಲಿಯೇ ಅವರು ರಾಜಕೀಯಕ್ಕೆ ಸೇರಿದರು.
ಭಾರತದಲ್ಲಿ ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ಹಸಿರು ಕ್ರಾಂತಿಗೆ ಮತ್ತು ಹಾಲಿನ ಪೂರೈಕೆಯನ್ನು ಹೆಚ್ಚಿಸಲು ಶ್ವೇತ ಕ್ರಾಂತಿಯನ್ನು ಪ್ರಚುರಪಡಿಸಲು ಲಾಲ ಬಹಾದುರ್ ಶಾಸ್ತ್ರಿ ಕೊಡುಗೆ ಸಲ್ಲಿಸಿದ್ದಾರೆ.
1964ರಲ್ಲಿ ಭಾರತದ ಪ್ರಧಾನಿಯಾದ ಲಾಲ ಬಹಾದುರ್ ಶಾಸ್ತ್ರಿ 1965ರ ಭಾರತ-ಪಾಕಿಸ್ತಾನ ಯುದ್ಧವನ್ನು ಮುನ್ನಡೆಸಿದ್ದರು. 1966, ಜನವರಿ 11ರಂದು ತಾಷ್ಕೆಂಟ್ ನಲ್ಲಿ ಕೊನೆಯುಸಿರೆಳೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಾಂತ್ರಿಕ ಕಾರಣಗಳಿಂದ SIR ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಸಾಧ್ಯವಿಲ್ಲ: ಅಮಿತ್ ಶಾ

ಭಾರತದಲ್ಲಿ ಹೆಚ್ಚುವರಿಯಾಗಿ 3 ಲಕ್ಷ ಕೋಟಿ ಹೂಡಿಕೆ ಯೋಜನೆ ಪ್ರಕಟಿಸಿದ Amazon: 10 ಲಕ್ಷ ಉದ್ಯೋಗ ಸೃಷ್ಠಿ!

EVMs ಅಲ್ಲವೇ ಅಲ್ಲ, ಪ್ರಧಾನಿ ಮೋದಿ ಇದನ್ನೇ 'ಹ್ಯಾಕ್' ಮಾಡಿದ್ದಾರೆ! ಲೋಕಸಭೆಯಲ್ಲಿ ಕಂಗನಾ

Calm isn't silence: 'ಬ್ರೇಕಪ್' ಸುತ್ತ ಅನುಮಾನ ಹುಟ್ಟು ಹಾಕಿದ ಸ್ಮೃತಿ ಮಂಧಾನ ಪೋಸ್ಟ್! ವೈರಲ್

ಸಮಾಧಿಯಲ್ಲೂ ನೆಮ್ಮದಿ ಇಲ್ಲ: Devil ರಿಲೀಸ್‌ಗೂ ಮುನ್ನ ದಿನ ರೇಣುಕಾಸ್ವಾಮಿ ಸಮಾಧಿ ನಾಮಫಲಕ ಧ್ವಂಸಗೊಳಿಸಿದ ಕಿಡಿಗೇಡಿಗಳು!

SCROLL FOR NEXT