ಸಂಗ್ರಹ ಚಿತ್ರ 
ದೇಶ

ಒಬ್ಬ ತಂದೆ ತನ್ನ ಮಗಳನ್ನ ಪ್ರೀತಿಯಿಂದ ಮುಟ್ಟಬಾರದೇ?: ಹನಿಪ್ರೀತ್ ಇನ್ಸಾನ್

ಅತ್ಯಾಚಾರಿ ಬಾಬಾ ರಾಮ್ ರಹೀಂ ಜೊತೆಗಿನ ಸಂಬಂಧದ ಕುರಿತ ಮಾತನಾಡಿರುವ ಆತನ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್, ಒಬ್ಬ ತಂದೆ ತನ್ನ ಮಗಳನ್ನ ಪ್ರೀತಿಯಿಂದ ಮುಟ್ಟಬಾರದೇ? ಎಂದು ಪ್ರಶ್ನಿಸಿದ್ದಾರೆ.

ನವದೆಹಲಿ: ಅತ್ಯಾಚಾರಿ ಬಾಬಾ ರಾಮ್ ರಹೀಂ ಜೊತೆಗಿನ ಸಂಬಂಧದ ಕುರಿತ ಮಾತನಾಡಿರುವ ಆತನ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್, ಒಬ್ಬ ತಂದೆ ತನ್ನ ಮಗಳನ್ನ ಪ್ರೀತಿಯಿಂದ ಮುಟ್ಟಬಾರದೇ? ಎಂದು ಪ್ರಶ್ನಿಸಿದ್ದಾರೆ.
ಅತ್ಯಾಚಾರ ಪ್ರಕರಣ ಸಂಬಂಧ ಬಾಬಾ ರಾಮ್ ರಹೀಂ ಬಂಧನವಾದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಹನಿಪ್ರೀತ್ ಇನ್ಸಾನ್, ತಮ್ಮ ಮತ್ತು ಬಾಬಾ ರಾಮ್ ರಹೀಂ ಕುರಿತಾದ ಅಕ್ರಮ  ಸಂಬಂಧದ ಆರೋಪದ ಕುರಿತು ಕಿಡಿಕಾರಿದ್ದಾರೆ. ನ್ಯೂಸ್ 24 ಸುದ್ದಿವಾಹಿನಿಯೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ಹನಿಪ್ರೀತ್ ಇನ್ಸಾನ್, ನನ್ನ ಮತ್ತು ಬಾಬಾ ರಾಮ್ ರಹೀಂ ರ ನಡುವೆ ಯಾವುದೇ ರೀತಿಯ ಅಕ್ರಮ  ಸಂಬಂಧಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ನನ್ನ ಮತ್ತು ಬಾಬಾ ನಡುವೆ ದೈಹಿಕ ಸಂಪರ್ಕವಿತ್ತು ಎಂಬ ತನ್ನ ಮಾಜಿ ಪತಿ ವಿಶ್ವಾಸ್ ಗುಪ್ತಾ ಅವರ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ. ಪದೇ ಪದೇ ಸುಳ್ಳು ಹೇಳುವ ಮೂಲಕ ಜನಕ ಭಾವನೆಯಲ್ಲಿ  ಅದೇ ಸತ್ಯ ಎಂಬಂತಾಗಿದೆ. ಇದರಿಂದ ತಾನು ತೀವ್ರ ಮುಜುಗರಕ್ಕೊಳಗಾಗಿದ್ದು, ನೋವು ತಾಳಲಾರದೇ ಇದೀಗ ಬಹಿರಂಗವಾಗಿ ಹೇಳಿಕೆ ನೀಡಲು ಮುಂದೆ ಬಂದಿದ್ದೇನೆ. ನನ್ನ ಮತ್ತು ಬಾಬಾ ನಡುವೆ ಯಾವುದೇ ರೀತಿಯ ಅಕ್ರಮ  ಸಂಬಂಧವಿಲ್ಲ. ಒಬ್ಬ ತಂದೆಯೊಂದಿಗೆ ಮಗಳ ಸಲುಗೆಯಿಂದ ಇರಬಾರದೇ? ಅಥವಾ ಒಬ್ಬ ತಂದೆ ತನ್ನ ಮಗಳನ್ನು ಪ್ರೀತಿಯಿಂದ ಮುಟ್ಟಬಾರದೇ..? ಹಾಗೆಂದ ಮಾತ್ರಕ್ಕೆ ಅವರಿಬ್ಬರ ನಡವೆ ಅಕ್ರಮ ಸಂಬಂಧ ಕಲ್ಪಿಸುವುದು ತಪ್ಪು  ಎಂದು ಹನಿಪ್ರೀತ್ ಹೇಳಿದ್ದಾರೆ.

ಇದೇ ವೇಳೆ ತಮ್ಮ ವಿರುದ್ಧದ ಆರೋಪಗಳೆಲ್ಲಾ ಸುಳ್ಳು ಎಂದು ಹೇಳಿರುವ ಹನಿಪ್ರೀತ್, ನಾನು ಯಾವ ನೇಪಾಳಕ್ಕೆ ಪರಾರಿಯಾಗಿರಲಿಲ್ಲ. ದೇಶ ಬಿಡುವ ಪರಿಸ್ಥಿತಿ ನನಗೆ ಬಂದಿಲ್ಲ. ಭಾರತೀಯ ನ್ಯಾಯಾಂಗ ವ್ಯವಸ್ಥೆ ಮೇಲೆ ನನಗೆ  ನಂಬಿಕೆ ಇದೆ. ಹರ್ಯಾಣ ಮತ್ತು ಪಂಜಾಬ್ ಹೈ ಕೋರ್ಟ್ ಗೆ ನಾನು ತೆರಳುತ್ತೇನೆ ಎಂದು ಹನಿಪ್ರೀತ್ ಹೇಳಿದ್ದಾರೆ. ನನ್ನ ವಕೀಲರೊಂದಿಗೆ ಮಾತನಾಡಿ ಅವರಿಂದ ಕಾನೂನು ಸಲಹೆ ಪಡೆದ ಬಳಿಕ ಶರಣಾಗುತ್ತೇನೆ ಎಂದು  ಹನಿಪ್ರೀತ್ ಹೇಳಿದ್ದಾರೆ.

ನಾಳೆ ಹನಿಪ್ರೀತ್ ಶರಣಾಗತಿ ಸಾಧ್ಯತೆ
ಇದೇ ವೇಳೆ ಹನಿಪ್ರೀತ್ ಇನ್ಸಾನ್ ನಾಳೆ ಅಂದರೆ ಬುಧವಾರ ಹರ್ಯಾಣ ಮತ್ತು ಪಂಜಾಬ್ ಹೈ ಕೋರ್ಟ್ ಗೆ ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪ್ರಸ್ತುತ ತಮ್ಮ ವಕೀಲರೊಂದಿಗೆ ಕಾನೂನು ಸಲಹೆ ಪಡೆಯುತ್ತಿರುವ  ಹನಿಪ್ರೀತ್ ನಾಳೆ ಬೆಳಗ್ಗೆ ಅಥವಾ ಸಂಜೆ ನ್ಯಾಯಾಲಯಕ್ಕೆ ತೆರಳಿ ಶರಣಾಗಲಿದ್ದಾರೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT