ಭಾರತೀಯ ವಾಯುಪಡೆ ಕಡಲ್ಗಳ್ಳರನ್ನು ತಡೆಯುತ್ತಿರುವ ದೃಶ್ಯ. 
ದೇಶ

ಗಲ್ಫ್ ಆಫ್ ಏಡೆನ್: ಕಡಲ್ಗಳ್ಳರಿಂದ ಹಡಗು ರಕ್ಷಿಸಿದ ಭಾರತೀಯ ನೌಕಾಪಡೆ

ಗಲ್ಫ್ ಆಫ್ ಏಡೆನ್ ನಲ್ಲಿ ಕಡಲ್ಗಳ್ಳರು ಭಾರತೀಯ ಹಡಗಿನ ಮೇಲೆ ದಾಳಿ ನಡೆಸಲು ಯತ್ನಿಸಿದ್ದು, ತಕ್ಷಣವೇ ಎಚ್ಚೆತ್ತ ಭಾರತೀಯ ನೌಕಾಪಡೆ ಕಡಲ್ಗಳ್ಳರಿಂದ ಹಡಗನ್ನು ರಕ್ಷಿಸಿದೆ.

ನವದೆಹಲಿ: ಗಲ್ಫ್ ಆಫ್ ಏಡೆನ್ ನಲ್ಲಿ ಕಡಲ್ಗಳ್ಳರು ಭಾರತೀಯ ಹಡಗಿನ ಮೇಲೆ ದಾಳಿ ನಡೆಸಲು ಯತ್ನಿಸಿದ್ದು, ತಕ್ಷಣವೇ ಎಚ್ಚೆತ್ತ ಭಾರತೀಯ ನೌಕಾಪಡೆ ಕಡಲ್ಗಳ್ಳರಿಂದ ಹಡಗನ್ನು ರಕ್ಷಿಸಿದೆ. 
ತ್ರಿಶೂಲ್ ನೌಕಾ ಹಡಗಿನ ಮೂಲಕ ರಕ್ಷಣೆ ಮಾಡಲಾಗಿದ್ದು, ಭಾರತೀಯ ಧ್ವಜವನ್ನು ಹೊಂದಿದ್ದ ಹಡಗನ್ನು ರಕ್ಷಿಸಲಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ. ನೌಕಾಪಡೆಯ ಮಾಹಿತಿ ಪ್ರಕಾರ ನೌಕಾಪಡೆಯ ವಿಶೇಷ ತಂಡ 12 ಜನರನ್ನು ವಶಕ್ಕೆ ಪಡೆದಿದೆ.
ಇಂದು ಮಧ್ಯಾಹ್ನ 12.30ರ ಸುಮಾರಿಗೆ ಕಡಲ್ಗಳ್ಳರು ಎಂವಿ ಜಾಗ್ ಅಮರ್ ಭಾರತೀಯ ಹಡಗಿನ ಮೇಲೆ ದಾಳಿ ನಡೆಸಲು ಮುಂದಾದಾಗ ಐಎನ್ಎಸ್ ತ್ರಿಶೂಲ್ ನಲ್ಲಿದ್ದ ನೌಕಾಪಡೆ ಸಿಬ್ಬಂದಿ ಕಡಲ್ಗಳ್ಳರನ್ನು ಹಿಮ್ಮೆಟ್ಟಿಸಿದರು ಎಂದು ನೌಕಾದಳ ವಕ್ತಾರ ಕ್ಯಾಪ್ಟನ್ ಡಿಕೆ ಶರ್ಮಾ ಅವರು ಟ್ವೀಟ್ ಮಾಡಿದ್ದಾರೆ. 
ಈ ಹಿಂದೆ ಮೇ ನಲ್ಲಿ ಇದೇ ರೀತಿ ಕಡಲ್ಗಳ್ಳರು ಲಿಬೇರಿಯನ್ ವ್ಯಾಪಾರಿ ಹಡಗು ಲಾರ್ಡ್ ಮೌಂಟ್ಬ್ಯಾಟನ್ ಮೇಲೆ ದಾಳಿಗೆ ಮುಂದಾದಾಗ ಎಚ್ಚೆತ್ತ ಐಎನ್ಎಸ್ ಶರ್ದಾ ಕಡಲ್ಗಳ್ಳರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಒಪ್ಪಿಕೊಂಡಿದೆ; ನಾವು ನಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ: CJP; Video

ಐರ್ಲೆಂಡ್, ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಸೋಲಿನ ಕಹಿ ಬಳಿಕ ಈಗ ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದ ಭಾರತ!

NEET ವಿವಾದದ ಪ್ರತಿಭಟನೆ ಬೆನ್ನಲ್ಲೇ ಮೋದಿ ಸರ್ಕಾರಕ್ಕೆ ಟ್ಯಾಕ್ಸಿ ಸಂಘದ protest ತಲೆಬಿಸಿ!

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ: ಗೃಹ ಸಚಿವ ಅಮಿತ್ ಶಾ ನೇರ ಹೊಣೆ- ರಾಹುಲ್ ಗಾಂಧಿ ಆರೋಪ!

A proud moment for every Indian: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಳಿಕ ಪ್ರಧಾನಿ ಮೋದಿಯ ಮೊದಲ ಪೋಸ್ಟ್!