ಭಕ್ತಾದಿಗಳಿಂದ ಹಣ ಪಡೆದ ಆರೋಪ: ಟಿಟಿಡಿಯಿಂದ 243 ಕ್ಷೌರಿಕರ ವಜಾ 
ದೇಶ

ಭಕ್ತಾದಿಗಳಿಂದ ಹಣ ಪಡೆದ ಆರೋಪ: ಟಿಟಿಡಿಯಿಂದ 243 ಕ್ಷೌರಿಕರ ವಜಾ

ತಿರುಪತಿ ದೇವಾಲಯದ ಆಡಳಿತ ಹೊಣೆ ಹೊತ್ತಿರುವ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಭಕ್ತಾದಿಗಳ ಸಲಹೆ ಮೆರೆಗೆ 243 ಕ್ಷೌರಿಕರನ್ನು ವಜಾಗೊಳಿಸಿದೆ.

ತಿರುಮಲ: ತಿರುಪತಿ ದೇವಾಲಯದ ಆಡಳಿತ ಹೊಣೆ ಹೊತ್ತಿರುವ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಭಕ್ತಾದಿಗಳಿಂದ ಹಣ ಪಡೆದಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ 243 ಕ್ಷೌರಿಕರನ್ನು ವಜಾಗೊಳಿಸಿದೆ. 
ದರ್ಶನ ಪಡೆಯುವುದಕ್ಕೂ ಮುನ್ನ ಮುಡಿ ಕೊಡಲು ಇಚ್ಛಿಸುವ ಭಕ್ತಾದಿಗಳಿಗೆ ಉಚಿತ ಸೌಲಭ್ಯ ನೀಡುವುದು ಟಿಟಿಡಿ ನಿಯಮವಾಗಿದೆ. ಆದರೆ ಮುಡಿ ಕೊಡುವ ಭಕ್ತಾದಿಗಳಿಂದ ಕ್ಷೌರಿಕರು 10 ರಿಂದ 50 ರೂಪಾಯಿ ಹಣ ಪಡೆಯುತ್ತಿದ್ದರೆಂದು ಭಕ್ತಾದಿಗಳು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಟಿಟಿಡಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ಷೌರಿಕರಿಗೆ ನೋಟೀಸ್ ಜಾರಿ ಮಾಡಿತ್ತು. 
ನೋಟಿಸ್ ಜಾರಿಗೊಳಿಸಿದ ಬೆನ್ನಲ್ಲೇ, ಟಿಟಿಡಿ 243 ಕ್ಷೌರಿಕರನ್ನು ವಜಾಗೊಳಿಸಿದೆ. ಟಿಟಿಡಿ ಆದೇಶವನ್ನು ಪ್ರಶ್ನಿಸಿ ಕ್ಷೌರಿಕರು ಪ್ರತಿಭಟನೆ ನಡೆಸುತ್ತಿದ್ದು, ಈ ಕ್ರಮದಿಂದಾಗಿ ತಮ್ಮ ಜೀವನ ನಿರ್ವಹಣೆ ಕಷ್ಟವಾಗಲಿದೆ, ಆದ್ದರಿಂದ ಮಾನವೀಯತೆ ದೃಷ್ಟಿಯಿಂದ ಆದೇಶವನ್ನು ವಾಪಸ್ ಪಡೆಯಬೇಕೆಂದು ಪ್ರತಿಭಟನಾ ನಿರತರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್