ನವದೆಹಲಿ: ನ.08 500, 1000 ರೂ ನೋಟುಗಳು ನಿಷೇಧಗೊಂಡು ಒಂದು ವರ್ಷವಾಗಲಿದ್ದು, ಬಿಜೆಪಿ ನ.8 ನ್ನು ಕಪ್ಪುಹಣ ವಿರೋಧಿ ದಿನಾಚರಣೆಯನ್ನಾಗಿ ಆಚರಿಸಲು ನಿರ್ಧರಿಸಿದೆ.
ನೋಟು ನಿಷೇಧವನ್ನು ವಿರೋಧಿಸಿ ವಿಪಕ್ಷಗಳು ನ.8 ರಂದು ಕರಾಳ ದಿನ ಆಚರಿಸುತ್ತಿದ್ದು, ಪ್ರತಿಪಕ್ಷಗಳ ತಂತ್ರಕ್ಕೆ ಪ್ರತಿಯಾಗಿ ಬಿಜೆಪಿ ನ.8 ರಂದು ಕಪ್ಪುಹಣ ವಿರೋಧಿ ದಿನವನ್ನು ಆಚರಿಸಲು ನಿರ್ಧರಿಸಿದೆ. ದೇಶದಲ್ಲಿ ಪರ್ಯಾಯ ಕಪ್ಪುಹಣವಿತ್ತು, ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿ ಕಪ್ಪುಹಣ ನಿರ್ಮೂಲನೆಗೆ ಕ್ರಮ ಕೈಗೊಂಡರು, ಆದ್ದರಿಂದ ನ.8 ರಂದು ಬಿಜೆಪಿ ಕಪ್ಪುಹಣ ವಿರೋಧಿ ದಿನವನ್ನು ಆಚರಣೆ ಮಾಡಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಕಪ್ಪುಹಣ ವಿರೋಧಿ ದಿನಾಚರಣೆಯಲ್ಲಿ ಕೇಂದ್ರ ಸಚಿವರು, ಬಿಜೆಪಿ ಮುಖ್ಯಮಂತ್ರಿಗಳು, ಪಕ್ಷದ ನಾಯಕರು ಭಾಗವಹಿಸಲಿದ್ದಾರೆ ಎಂದು ಜೇಟ್ಲಿ ತಿಳಿಸಿದ್ದಾರೆ. ಕಾಂಗ್ರೆಸ್ ಗೆ ಕಪ್ಪುಹಣ ನಿಯಂತ್ರಿಸಲು ಹಾಗೂ ಹೊರತೆಗೆಯಲು ಸಾಕಷ್ಟು ಅವಕಾಶ ಇತ್ತು, ಆದರೆ ಮಾಡಲಿಲ್ಲ. ಕಪ್ಪುಹಣ ಹೊರಗೆಳೆಯುವುದಕ್ಕಾಗಿ ಈಗ ಎನ್ ಡಿಎ ಸರ್ಕಾರ ಕೈಗೊಂಡಿರುವ ಕ್ರಮಗಳೂ ಕಡಿಮೆಯದ್ದಲ್ಲ ಎಂದು ಜೇಟ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos