ನವದೆಹಲಿ: ಅಮರನಾಥ ಯಾತ್ರಿಕರ ಮೇಲಿನ ದಾಳಿ ಪ್ರಕರಣ ಪ್ರಮುಖ ರುವಾರಿಯಾಗಿದ್ದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಅಬು ಇಸ್ಮಾಯಿಲ್ ನನ್ನು ಹತ್ಯೆ ಮಾಡಿರುವ ಭಾರತೀಯ ಸೇನೆಯನ್ನು ರಕ್ಷಣಾ ತಜ್ಞರು ಶುಕ್ರವಾರ ಕೊಂಡಾಡಿದ್ದಾರೆ.
ಅಬು ಇಸ್ಮಾಯಿಲ್ ಹತ್ಯೆ ಮಾಡಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಕ್ಷಣಾ ತಜ್ಞ ಪಿ.ಕೆ. ಸೆಹ್ಗಲ್ ಅವರು, ಇಸ್ಮಾಯಿಲ್ ಹತ್ಯೆ ಭಾರತೀಯ ಸೇನೆಗೆ ದೊರಕಿರುವ ದೊಡ್ಡ ಯಶಸ್ಸಾಗಿದೆ. ಅಮರನಾಥ ಯಾತ್ರಾರ್ಥಿಗಳ ಮೇಲೆ ನಡೆದ ದಾಳಿಯಲ್ಲಿ ಇಸ್ಮಾಯಿಲ್ ಭಾಗಿಯಾಗಿದ್ದ. ಹೀಗಾಗಿ ಆತನಿಗಾಗಿ ಸಾಕಷ್ಟು ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿತ್ತು. ಇಸ್ಮಾಯಿಲ್ ಹತ್ಯೆ, ಬಂಧನ ಪ್ರಮುಖವಾಗಿತ್ತು. ಆತನ ಹತ್ಯೆಯಿಂದಾಗಿ ಕಾಶ್ಮೀರದಲ್ಲಿ ಉಗ್ರರಿಗೆ ನೀಡಲಾಗುತ್ತಿದ್ದ ನೈತಿಕರೆ ಹಾಗೂ ಪ್ರೇರಣಗಳು ನೆಲ ಕಚ್ಚಲಿದೆ ಎಂದು ಹೇಳಿದ್ದಾರೆ.
ಇದರಂತೆ ಮತ್ತೊಬ್ಬ ರಕ್ಷಣಾ ತಜ್ಞ ಖ್ವಾಮರ್ ಅಘಾ ಅವರು ಮಾತನಾಡಿ. ಇಸ್ಮಾಯಿಲ್ ಹತ್ಯೆ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸುತ್ತಿರುವ ಕಾರ್ಯಾಚರಣೆಗೆ ದೊರಕಿರುವ ದೊಡ್ಡ ಯಶಸ್ಸಾಗಿದೆ. ಆತನ ಹತ್ಯೆಯಿಂದಾಗಿ ಭದ್ರತಾ ಪಡೆಗಳಿಗೆ ನಿರಾಳ ದೊರಕಿದೆ ಎಂದು ತಿಳಿಸಿದ್ದಾರೆ.