ಗಾಂಧಿಧಾಮ: ಗುಜರಾತ್ ಕಚ್ ಜಿಲ್ಲೆಯ ಶಿಕ್ರಾ ಗ್ರಾಮದ ಬಳಿ ಭಾನುವಾರ ಟ್ರಾಕ್ಟರ್ ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಏಳು ಮಹಿಳೆಯರು ಸೇರಿದಂತೆ 10 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಒಂದೇ ಕುಟುಂಬಕ್ಕೆ ಸೇರಿದ ಸುಮಾರು 25 ಮಂದಿ ಟ್ರಾಕ್ಟರ್ ನಲ್ಲಿ ಮದುವೆಗೆ ತೆರಳುತ್ತಿದ್ದ ವೇಳೆ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದಿದೆ ಎಂದು ಭಚುವ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟ್ರಾಕ್ಟರ್ ರಾಷ್ಟ್ರೀಯ ಹೆದ್ದಾರಿಗೆ ಆಗಮಿಸುತ್ತಿದ್ದಂತೆ ಗಾಂಧಿಧಾಮದಿಂದ ಕುಂಭರಡಿಗೆ ತೆರಳುತ್ತಿದ್ದ ಬಸ್ ಡಿಕ್ಕೆ ಹೊಡೆದ ಪರಿಣಾಮ 10 ವರ್ಷದ ಓರ್ವ ಬಾಲಕ ಸೇರಿದಂತೆ 10 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಮತ್ತು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೃತರನ್ನು ಕಂಕುಬೆನ್ ಅನವಾಡಿಯಾ(60), ಪಮಿಬೆನ್ ಅನವಾಡಿಯಾ(55), ಜಿಗ್ಯಾಬೆನ್ ಅನವಾಡಿಯಾ (25), ದಯಾಬೆನ್ ಅನವಾಡಿಯಾ(35), ಮನಬೆನ್ ಅನವಾಡಿಯಾ(50), ನಿಶಾಬೆನ್ ಅನವಾಡಿಯಾ (17), ರಮಾಬೆನ್ ಅನವಾಡಿಯಾ(60), ಕಿಶೋರ್ ಅನವಾಡಿಯಾ (10), ವಿಶಾಲ್ ಅನವಾಡಿಯಾ (20) ಎಂದು ಗುರುತಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos