ಸಿಜೆಐ ದೀಪಕ್ ಮಿಶ್ರಾ 
ದೇಶ

ನ್ಯಾಯಾಂಗ ಕೆಲಸ ಹಾಗೂ ಆಡಳಿತದಿಂದ ಸಿಜೆಐ ತನನ್ನು ತಾನೂ ರಕ್ಷಿಸಿಕೊಳ್ಳುವಂತಿಲ್ಲ

ಸುಪ್ರೀಂಕೋರ್ಟಿನ ನ್ಯಾಯಾಂಗ ಕೆಲಸ ಹಾಗೂ ಆಡಳಿತದಿಂದ ತನ್ನನ್ನು ತಾನೂ ರಕ್ಷಿಸಿಕೊಳ್ಳುವಂತಿಲ್ಲ ಎಂಬುದನ್ನು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಅರಿತಿದ್ದಾರೆ ಎಂಬಂತಹ ಮಾಹಿತಿ ತಿಳಿದುಬಂದಿದೆ.

ನವದೆಹಲಿ :  ಸುಪ್ರೀಂಕೋರ್ಟಿನ ನ್ಯಾಯಾಂಗ ಕೆಲಸ ಹಾಗೂ ಆಡಳಿತದಿಂದ ತನ್ನನ್ನು ತಾನೂ ರಕ್ಷಿಸಿಕೊಳ್ಳುವಂತಿಲ್ಲ ಎಂಬುದನ್ನು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಅರಿತಿದ್ದಾರೆ ಎಂಬಂತಹ ಮಾಹಿತಿ ತಿಳಿದುಬಂದಿದೆ.

ಕಾಂಗ್ರೆಸ್ ನೇತೃತ್ವದ ಮಿತ್ರ  ಪಕ್ಷಗಳು ರಾಜ್ಯಸಭೆಯಲ್ಲಿ ಸಿಜೆಐ ವಿರುದ್ಧ ಮಂಡಿಸಿರುವ ಮಹಾಭೀಯೋಗ ನಿಲುವಳಿ ಸೂಚನೆ ವಿರುದ್ಧ ಹಲವು ಹಿರಿಯ ವಕೀಲರು ದೀಪಕ್ ಮಿಶ್ರಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬಂತಹ ಮಾಹಿತಿ ಸುಪ್ರೀಂಕೋರ್ಟ್ ಮೂಲಗಳಿಂದ ತಿಳಿದುಬಂದಿದೆ.

ತಮ್ಮ ವಿರುದ್ಧದ ಆರೋಪಗಳು ನಿರಾಧಾರಾವಾದದ್ದು, ರಾಜಕೀಯ ಹಿತಸಕ್ತಿಯಿಂದ ಸಿಜೆಐ  ಹುದ್ದೆಯಿಂದ ತೆರವುಗೊಳಿಸಲು ಯತ್ನಿಸಲಾಗುತ್ತಿದೆ,ಸಂಶಯಾಸ್ಪದ ರೀತಿಯಲ್ಲಿ ತಮ್ಮನ್ನು ತೆರವುಗೊಳಿಸುವ ಕ್ರಮಕ್ಕೆ ವಿಧೇಯರಾಗಲಿದರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್ ಮೈತ್ರಿಯ ವಕೀಲರಾದ ಮಾಜಿ ಅಟಾರ್ನಿ ಜನರಲ್ ಕೆ, ಪರಸರನ್, ಅವರ ಮಗ ಮೋಹನ್,  ಮಾಜಿ ಸಾಲಿಸಿಟರ್ ಜನರಲ್  ಮಹಾಲಕ್ಷ್ಮಿ ಪವಾನಿ, ಮತ್ತಿತರರು ದೀಪಕ್ ಮಿಶ್ರಾ ಅವರನ್ನು ಬೆಂಬಲಿಸಿದ್ದು, ಅವರು ಯಾವುದೇ ರೀತಿಯ ತಪ್ಪು ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ.

ಒಂದು ವೇಳೆ  ಮಹಾಭಿಯೋಗ ನಿಲುವಳಿ ಸೂಚನೆಯಡಿ ರಾಜ್ಯಸಭೆ ಸಭಾಪತಿಗಳು ಸಿಜಿಐನ ನಿಲುವನ್ನು ಬದಲಿಸಬಹುದು. ಆದರೆ. ಅವರ ಅಧಿಕಾರವಧಿ ಮುಗಿಯುವವರೆಗೂ ನ್ಯಾಯಾಂಗ ಕಾರ್ಯ ಹಾಗೂ ಆಡಳಿತವನ್ನು ಮುಂದುವರೆಸಿಕೊಂಡು ಹೋಗಲಿದ್ದಾರೆ ಎಂದು ಮೂಲಗಳು ಹೇಳುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT