ಬಿಪ್ಲವ್ ದೇವ್ 
ದೇಶ

ಮೆಕ್ಯಾನಿಕಲ್ ಎಂಜಿನಿಯರ್‌ಗಳಲ್ಲ, ಸಿವಿಲ್ ಎಂಜಿನಿಯರ್‌ಗಳು ಉತ್ತಮ ನಿರ್ವಾಹಕರು: ತ್ರಿಪುರಾ ಸಿಎಂ ಬಿಪ್ಲಾಬ್ ದೇವ್

ಮಹಾಭಾರತ ಕಾಲದಲ್ಲಿಯೇ ಇಂಟರ್ ನೆಟ್ ಇತ್ತು ಎಂದು ಹೇಳಿ ಭಾರಿ ಟ್ರೋಲ್ ಗೆ ಗುರಿಯಾಗಿದ್ದ ತ್ರಿಪುರ ಮುಖ್ಯಮುಂತ್ರಿ ಬಿಪ್ಲವ್ ಕುಮಾರ್ ದೇವ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ...

ಗುವಾಹಟಿ(ತ್ರಿಪುರಾ): ಮಹಾಭಾರತ ಕಾಲದಲ್ಲಿಯೇ ಇಂಟರ್ ನೆಟ್ ಇತ್ತು ಎಂದು ಹೇಳಿ ಭಾರಿ ಟ್ರೋಲ್ ಗೆ ಗುರಿಯಾಗಿದ್ದ ತ್ರಿಪುರ ಮುಖ್ಯಮುಂತ್ರಿ ಬಿಪ್ಲವ್ ಕುಮಾರ್ ದೇವ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಮೆಕ್ಯಾನಿಕಲ್ ಎಂಜಿನಿಯರ್‌ಗಳಿಗಿಂತ ಸಿವಿಲ್ ಎಂಜಿನಿಯರ್‌ಗಳು ಉತ್ತಮ ನಿರ್ವಾಹಕರು ಎಂದು ಬಿಪ್ಲವ್ ಕುಮಾರ್ ದೇವ್ ಹೇಳಿದ್ದಾರೆ. 
ಕಲಾ ವಿಭಾಗದಿಂದ ಬಂದಿರುವ ಜನರು ಸೇವಾ ಪರೀಕ್ಷೆಗಳನ್ನು ಬರೆದು ಐಎಎಸ್, ಐಎಫ್ಎಸ್, ಐಪಿಎಸ್ ಮತ್ತು ಸಹಾಯಕ ಸೇವಾ ಅಧಿಕಾರಿಗಳಾಗಿದ್ದಾರೆ. ನಂತರ ವೈದ್ಯರು ಮತ್ತು ಎಂಜಿನಿಯರ್ ಗಳು ಕೂಡ ಪರೀಕ್ಷೆಗಳನ್ನು ನೀಡಲಾರಂಭಿಸಿದರು ಎಂದು ಹೇಳಿದ್ದಾರೆ. 
ಮೆಕ್ಯಾನಿಕಲ್ ಎಂಜಿನಿಯರ್ ಗಳು ಸೇವಾ ಪರೀಕ್ಷೆಗಳನ್ನು ತೆಗೆದುಕೊಳ್ಳಬಾರದು. ಸಿವಿಲ್ ಇಂಜಿನಿಯರ್ ಗಳು ಕಟ್ಟಡ ನಿರ್ಮಾಣದಲ್ಲಿನ ದೋಷಗಳನ್ನು ಕಂಡುಹಿಡಿಯಬಹುದು. ವ್ಯಕ್ತಿಯು ಸಿವಿಲ್ ಎಂಜಿನಿಯರಿಂಗ್ ಅನುಭವವನ್ನು ಪಡೆದಿದ್ದರೆ ಅವನು ಅಥವಾ ಅವಳು ಆಡಳಿತದಲ್ಲಿರುವ ಜನರನ್ನು ನಿರ್ಮಿಸಬಹುದು. ಸಿವಿಲ್ ಇಂಜಿನಿಯರ್ ಗಳು ಸಮಾಜವನ್ನು ನಿರ್ಮಿಸಲು ಜ್ಞಾನವನ್ನು ಪಡೆದವರು ಎಂದು ಬಿಪ್ಲವ್ ದೇವ್ ಅವರು ಅಗರ್ತಲಾದಲ್ಲಿ ನಡೆದ ನಾಗರಿಕಾ ಸೇವೆ ದಿನದಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT