ಪೋಷಕರಿಗೆ ಅಗೌರವ ತೋರುವ ಜನರಿಗೆ ಮಾದರಿಯಾದ ಆಧುನಿಕ ಶ್ರವಣಕುಮಾರರು! 
ದೇಶ

ಪೋಷಕರಿಗೆ ಅಗೌರವ ತೋರುವ ಜನರಿಗೆ ಮಾದರಿಯಾದ ಆಧುನಿಕ ಶ್ರವಣಕುಮಾರರು!

ಹೆತ್ತು ಹೊತ್ತ ತಂದೆ-ತಾಯಿಗಳನ್ನು ಪ್ರೀತಿಯಿಂದ ನೋಡದೆ, ಅಗೌರವದಿಂದ ನೋಡುವ ಜನರಿಗೆ ಈ ಆಧುನಿಕ ಶ್ರವಣ ಕುಮಾರರು ಮಾದರಿಯಾಗಿದ್ದಾರೆ...

ನವದೆಹಲಿ: ಹೆತ್ತು ಹೊತ್ತ ತಂದೆ-ತಾಯಿಗಳನ್ನು ಪ್ರೀತಿಯಿಂದ ನೋಡದೆ, ಅಗೌರವದಿಂದ ನೋಡುವ ಜನರಿಗೆ ಈ ಆಧುನಿಕ ಶ್ರವಣ ಕುಮಾರರು ಮಾದರಿಯಾಗಿದ್ದಾರೆ. 
ಜನ್ಮ ನೀಡಿದ ಪೋಷಕರನ್ನು ಬುಟ್ಟಿಯಲ್ಲಿಟ್ಟು, ಒಬ್ಬನೇ ಹೆಗಲ ಮೇಲೆ ಹೊತ್ತು ಪುಣ್ಯಕ್ಷೇತ್ರಗಳಿಗೆ ಕರೆದುಕೊಂಡು ಹೋಗಿದ್ದ ಶ್ರವಣನ ಭಕ್ತಿ ಎಲ್ಲರಿಗೂ ಗೊತ್ತಿರುವ ಕಥೆಯಾಗಿದೆ. ತಂದೆ-ತಾಯಿಯ ಮೇಲೆ ಆತನಿಗಿದ್ದ ಪ್ರೀತಿ ಎಲ್ಲರಿಗೂ ಮಾದರಿಯಾಗಿದೆ ಎಂಬುದನ್ನು ಪೌರಾಣಿಕ ಕಥೆಯಲ್ಲಿವೆ. 
ಇದರಂತೆಯೇ ಹರಿಯಾಣ ಮೂಲದ ನಾಲ್ವರು ಸಹೋದರರು ತಮ್ಮ ಪೋಷಕರನ್ನು ಹರಿಯಾಣದ ಪಲ್ವಾಲದಿಂದ ಹರಿದ್ವಾರದ ಮಾನಸದೇವಿವರೆಗೆ ಹೊತ್ತುಕೊಂಡು ಹೋಗಿ  ಮಾತಾ-ಪಿತೃ ಪ್ರೇಮ ಸಾರುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಪೋಷಕರೆಂದರೆ ಅಗೌರವ ತೋರುವ ಜನರಿಗೆ ಮಾದರಿಯಾಗಿದ್ದಾರೆ. 
ಪೌರಾಣಿಕ ಕಥೆಯಲ್ಲಿ ಶ್ರವಣನ ತಂದೆ ಹಾಗೂ ಅಸಹಾಯಕರೆಂದು ಹೇಳಲಾಗಿದೆ. ಆದರೆ, ಇಲ್ಲಿ ಮಾದರಿಯಾಗಿರುವ ಸಹೋದರರ ಪೋಷಕರನೇರು ಅಸಹಾಯರೇನೂ ಅಲ್ಲ. ನಡೆದಾಡಲು ಶಕ್ತರಾಗಿದ್ದರೂ ಕೂಡ ಪೋಷಕರ ಹಾಗೂ ಮಕ್ಕಳ ಪ್ರೀತಿ ಎಂತಹದ್ದು ಎಂಬುದನ್ನು ಸಾರಲು ಈ ರೀತಿಯ ಪ್ರಯಾಣ ಬೆಳೆಸಿದ್ದಾರೆಂದು ತಿಳಿದುಬಂದಿದೆ. 
ಶ್ರವಣ ಕುಮಾರನ ಪೋಷಕರಂತೆ ನಮಗೆ ಯಾವುದೇ ರೀತಿಯ ಸಮಸ್ಯೆಗಳಿಲ್ಲ. ಆದರೆ, ಪೋಷಕರನ್ನು ಅಗೌರವದಿಂದ ನೋಡುವವರಿಗೆ ಸಂದೇಶ ರವಾನಿಸುವುದು ನಮ್ಮ ಉದ್ದೇಶವಾಗಿದೆ ಎಂದು ಪೋಷಕರು ಹೇಳಿದ್ದಾರೆ. 
ಪೋಷಕರ ಪ್ರಾಮುಖ್ಯತೆ ಏನು ಎಂಬುದು ಜನರಿಗೆ ಮನದಟ್ಟು ಮಾಡುವ ಸಲುವಾಗಿ ಈ ರೀತಿಯ ನಿರ್ಧಾರ ಕೈಗೊಳ್ಳಲಾಯಿತು ಮಹೆಂದರ್ ಹೇಳಿದ್ದಾರೆ. 
ಇತ್ತೀಚಿನ ದಿನಗಳಲ್ಲಿ ಮಕ್ಕಳು ಪೋಷಕರನ್ನು ಅತ್ಯಂತ ಕೆಟ್ಟದಾಗಿ ನೋಡುತ್ತಿದ್ದಾರೆ. ನೆರೆಮನೆಯವರು ತಮ್ಮ ಪೋಷಕರನ್ನು ಹೀನಾಯವಾಗಿ ನೋಡುತ್ತಿದ್ದುದ್ದನ್ನು ನಾವು ನೋಡಿದ್ದೇವೆ. ಹೀಗಾಗಿ ಇತರರಿಗೆ ಉದಾಹರಣೆಯಾಗಲಿ ಎಂದು ಈ ನಿರ್ಧಾರ ಕೈಗೊಂಡೆವು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

SCROLL FOR NEXT