ಪೋಷಕರಿಗೆ ಅಗೌರವ ತೋರುವ ಜನರಿಗೆ ಮಾದರಿಯಾದ ಆಧುನಿಕ ಶ್ರವಣಕುಮಾರರು! 
ದೇಶ

ಪೋಷಕರಿಗೆ ಅಗೌರವ ತೋರುವ ಜನರಿಗೆ ಮಾದರಿಯಾದ ಆಧುನಿಕ ಶ್ರವಣಕುಮಾರರು!

ಹೆತ್ತು ಹೊತ್ತ ತಂದೆ-ತಾಯಿಗಳನ್ನು ಪ್ರೀತಿಯಿಂದ ನೋಡದೆ, ಅಗೌರವದಿಂದ ನೋಡುವ ಜನರಿಗೆ ಈ ಆಧುನಿಕ ಶ್ರವಣ ಕುಮಾರರು ಮಾದರಿಯಾಗಿದ್ದಾರೆ...

ನವದೆಹಲಿ: ಹೆತ್ತು ಹೊತ್ತ ತಂದೆ-ತಾಯಿಗಳನ್ನು ಪ್ರೀತಿಯಿಂದ ನೋಡದೆ, ಅಗೌರವದಿಂದ ನೋಡುವ ಜನರಿಗೆ ಈ ಆಧುನಿಕ ಶ್ರವಣ ಕುಮಾರರು ಮಾದರಿಯಾಗಿದ್ದಾರೆ. 
ಜನ್ಮ ನೀಡಿದ ಪೋಷಕರನ್ನು ಬುಟ್ಟಿಯಲ್ಲಿಟ್ಟು, ಒಬ್ಬನೇ ಹೆಗಲ ಮೇಲೆ ಹೊತ್ತು ಪುಣ್ಯಕ್ಷೇತ್ರಗಳಿಗೆ ಕರೆದುಕೊಂಡು ಹೋಗಿದ್ದ ಶ್ರವಣನ ಭಕ್ತಿ ಎಲ್ಲರಿಗೂ ಗೊತ್ತಿರುವ ಕಥೆಯಾಗಿದೆ. ತಂದೆ-ತಾಯಿಯ ಮೇಲೆ ಆತನಿಗಿದ್ದ ಪ್ರೀತಿ ಎಲ್ಲರಿಗೂ ಮಾದರಿಯಾಗಿದೆ ಎಂಬುದನ್ನು ಪೌರಾಣಿಕ ಕಥೆಯಲ್ಲಿವೆ. 
ಇದರಂತೆಯೇ ಹರಿಯಾಣ ಮೂಲದ ನಾಲ್ವರು ಸಹೋದರರು ತಮ್ಮ ಪೋಷಕರನ್ನು ಹರಿಯಾಣದ ಪಲ್ವಾಲದಿಂದ ಹರಿದ್ವಾರದ ಮಾನಸದೇವಿವರೆಗೆ ಹೊತ್ತುಕೊಂಡು ಹೋಗಿ  ಮಾತಾ-ಪಿತೃ ಪ್ರೇಮ ಸಾರುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಪೋಷಕರೆಂದರೆ ಅಗೌರವ ತೋರುವ ಜನರಿಗೆ ಮಾದರಿಯಾಗಿದ್ದಾರೆ. 
ಪೌರಾಣಿಕ ಕಥೆಯಲ್ಲಿ ಶ್ರವಣನ ತಂದೆ ಹಾಗೂ ಅಸಹಾಯಕರೆಂದು ಹೇಳಲಾಗಿದೆ. ಆದರೆ, ಇಲ್ಲಿ ಮಾದರಿಯಾಗಿರುವ ಸಹೋದರರ ಪೋಷಕರನೇರು ಅಸಹಾಯರೇನೂ ಅಲ್ಲ. ನಡೆದಾಡಲು ಶಕ್ತರಾಗಿದ್ದರೂ ಕೂಡ ಪೋಷಕರ ಹಾಗೂ ಮಕ್ಕಳ ಪ್ರೀತಿ ಎಂತಹದ್ದು ಎಂಬುದನ್ನು ಸಾರಲು ಈ ರೀತಿಯ ಪ್ರಯಾಣ ಬೆಳೆಸಿದ್ದಾರೆಂದು ತಿಳಿದುಬಂದಿದೆ. 
ಶ್ರವಣ ಕುಮಾರನ ಪೋಷಕರಂತೆ ನಮಗೆ ಯಾವುದೇ ರೀತಿಯ ಸಮಸ್ಯೆಗಳಿಲ್ಲ. ಆದರೆ, ಪೋಷಕರನ್ನು ಅಗೌರವದಿಂದ ನೋಡುವವರಿಗೆ ಸಂದೇಶ ರವಾನಿಸುವುದು ನಮ್ಮ ಉದ್ದೇಶವಾಗಿದೆ ಎಂದು ಪೋಷಕರು ಹೇಳಿದ್ದಾರೆ. 
ಪೋಷಕರ ಪ್ರಾಮುಖ್ಯತೆ ಏನು ಎಂಬುದು ಜನರಿಗೆ ಮನದಟ್ಟು ಮಾಡುವ ಸಲುವಾಗಿ ಈ ರೀತಿಯ ನಿರ್ಧಾರ ಕೈಗೊಳ್ಳಲಾಯಿತು ಮಹೆಂದರ್ ಹೇಳಿದ್ದಾರೆ. 
ಇತ್ತೀಚಿನ ದಿನಗಳಲ್ಲಿ ಮಕ್ಕಳು ಪೋಷಕರನ್ನು ಅತ್ಯಂತ ಕೆಟ್ಟದಾಗಿ ನೋಡುತ್ತಿದ್ದಾರೆ. ನೆರೆಮನೆಯವರು ತಮ್ಮ ಪೋಷಕರನ್ನು ಹೀನಾಯವಾಗಿ ನೋಡುತ್ತಿದ್ದುದ್ದನ್ನು ನಾವು ನೋಡಿದ್ದೇವೆ. ಹೀಗಾಗಿ ಇತರರಿಗೆ ಉದಾಹರಣೆಯಾಗಲಿ ಎಂದು ಈ ನಿರ್ಧಾರ ಕೈಗೊಂಡೆವು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT