ಪೋಷಕರಿಗೆ ಅಗೌರವ ತೋರುವ ಜನರಿಗೆ ಮಾದರಿಯಾದ ಆಧುನಿಕ ಶ್ರವಣಕುಮಾರರು!
ನವದೆಹಲಿ: ಹೆತ್ತು ಹೊತ್ತ ತಂದೆ-ತಾಯಿಗಳನ್ನು ಪ್ರೀತಿಯಿಂದ ನೋಡದೆ, ಅಗೌರವದಿಂದ ನೋಡುವ ಜನರಿಗೆ ಈ ಆಧುನಿಕ ಶ್ರವಣ ಕುಮಾರರು ಮಾದರಿಯಾಗಿದ್ದಾರೆ.
ಜನ್ಮ ನೀಡಿದ ಪೋಷಕರನ್ನು ಬುಟ್ಟಿಯಲ್ಲಿಟ್ಟು, ಒಬ್ಬನೇ ಹೆಗಲ ಮೇಲೆ ಹೊತ್ತು ಪುಣ್ಯಕ್ಷೇತ್ರಗಳಿಗೆ ಕರೆದುಕೊಂಡು ಹೋಗಿದ್ದ ಶ್ರವಣನ ಭಕ್ತಿ ಎಲ್ಲರಿಗೂ ಗೊತ್ತಿರುವ ಕಥೆಯಾಗಿದೆ. ತಂದೆ-ತಾಯಿಯ ಮೇಲೆ ಆತನಿಗಿದ್ದ ಪ್ರೀತಿ ಎಲ್ಲರಿಗೂ ಮಾದರಿಯಾಗಿದೆ ಎಂಬುದನ್ನು ಪೌರಾಣಿಕ ಕಥೆಯಲ್ಲಿವೆ.
ಇದರಂತೆಯೇ ಹರಿಯಾಣ ಮೂಲದ ನಾಲ್ವರು ಸಹೋದರರು ತಮ್ಮ ಪೋಷಕರನ್ನು ಹರಿಯಾಣದ ಪಲ್ವಾಲದಿಂದ ಹರಿದ್ವಾರದ ಮಾನಸದೇವಿವರೆಗೆ ಹೊತ್ತುಕೊಂಡು ಹೋಗಿ ಮಾತಾ-ಪಿತೃ ಪ್ರೇಮ ಸಾರುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಪೋಷಕರೆಂದರೆ ಅಗೌರವ ತೋರುವ ಜನರಿಗೆ ಮಾದರಿಯಾಗಿದ್ದಾರೆ.
ಪೌರಾಣಿಕ ಕಥೆಯಲ್ಲಿ ಶ್ರವಣನ ತಂದೆ ಹಾಗೂ ಅಸಹಾಯಕರೆಂದು ಹೇಳಲಾಗಿದೆ. ಆದರೆ, ಇಲ್ಲಿ ಮಾದರಿಯಾಗಿರುವ ಸಹೋದರರ ಪೋಷಕರನೇರು ಅಸಹಾಯರೇನೂ ಅಲ್ಲ. ನಡೆದಾಡಲು ಶಕ್ತರಾಗಿದ್ದರೂ ಕೂಡ ಪೋಷಕರ ಹಾಗೂ ಮಕ್ಕಳ ಪ್ರೀತಿ ಎಂತಹದ್ದು ಎಂಬುದನ್ನು ಸಾರಲು ಈ ರೀತಿಯ ಪ್ರಯಾಣ ಬೆಳೆಸಿದ್ದಾರೆಂದು ತಿಳಿದುಬಂದಿದೆ.
ಶ್ರವಣ ಕುಮಾರನ ಪೋಷಕರಂತೆ ನಮಗೆ ಯಾವುದೇ ರೀತಿಯ ಸಮಸ್ಯೆಗಳಿಲ್ಲ. ಆದರೆ, ಪೋಷಕರನ್ನು ಅಗೌರವದಿಂದ ನೋಡುವವರಿಗೆ ಸಂದೇಶ ರವಾನಿಸುವುದು ನಮ್ಮ ಉದ್ದೇಶವಾಗಿದೆ ಎಂದು ಪೋಷಕರು ಹೇಳಿದ್ದಾರೆ.
ಪೋಷಕರ ಪ್ರಾಮುಖ್ಯತೆ ಏನು ಎಂಬುದು ಜನರಿಗೆ ಮನದಟ್ಟು ಮಾಡುವ ಸಲುವಾಗಿ ಈ ರೀತಿಯ ನಿರ್ಧಾರ ಕೈಗೊಳ್ಳಲಾಯಿತು ಮಹೆಂದರ್ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಪೋಷಕರನ್ನು ಅತ್ಯಂತ ಕೆಟ್ಟದಾಗಿ ನೋಡುತ್ತಿದ್ದಾರೆ. ನೆರೆಮನೆಯವರು ತಮ್ಮ ಪೋಷಕರನ್ನು ಹೀನಾಯವಾಗಿ ನೋಡುತ್ತಿದ್ದುದ್ದನ್ನು ನಾವು ನೋಡಿದ್ದೇವೆ. ಹೀಗಾಗಿ ಇತರರಿಗೆ ಉದಾಹರಣೆಯಾಗಲಿ ಎಂದು ಈ ನಿರ್ಧಾರ ಕೈಗೊಂಡೆವು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos