ಸಂಗ್ರಹ ಚಿತ್ರ 
ದೇಶ

ಸಿಆರ್ ಪಿಎಫ್ ಯೋಧರ ಸಾವಿಗೆ ನಕ್ಸಲರಲ್ಲದೆ ಈ ಕಾರಣಗಳೂ ಇದೆ!

ನಕ್ಸಲ್-ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಆರ್ ಪಿಎಫ್ ಸೈನಿಕರು ನಕ್ಸಲರ ಗುಂಡಿಗೆ ಬಲಿಯಾಗಿ ಸಾವನ್ನಪ್ಪುವದಕ್ಕಿಂತ ಬೇರೆಯ ಸಮಸ್ಯಾತ್ಮಕ ಕಾರಣಗಳಿಗೆ ಸಾವನ್ನಪ್ಪುತ್ತಿದ್ದಾರೆ

ನವದೆಹಲಿ: ನಕ್ಸಲ್-ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಆರ್ ಪಿಎಫ್ ಸೈನಿಕರು ನಕ್ಸಲರ ಗುಂಡಿಗೆ ಬಲಿಯಾಗಿ ಸಾವನ್ನಪ್ಪುವದಕ್ಕಿಂತ ಬೇರೆಯ ಸಮಸ್ಯಾತ್ಮಕ ಕಾರಣಗಳಿಗೆ ಸಾವನ್ನಪ್ಪುತ್ತಿದ್ದಾರೆ. ಈ ರೀತಿ ಸಾಯುವವರ ಸಂಖ್ಯೆ ನಕ್ಸಲ್ ಕಾರ್ಯಾಚರಣೆ ವೇಳೆ ಸಾಯುವವರ ಸಂಖ್ಯೆಗಿಂತ ಹದಿನೈದು ಪಟ್ಟು ಹೆಚ್ಚಾಗಿದೆ!
ಕಳೆದ ಎರಡು ವರ್ಷಗಳಲ್ಲಿ ನಕ್ಸಲ್-ವಿರೋಧಿ ಕಾರ್ಯಾಚರಣೆಗಿಂತ 15 ಪಟ್ಟು ಹೆಚ್ಚು ಸೈನಿಕರು ಹೃದಯಾಘಾತ, ಖಿನ್ನತೆ ಮತ್ತು ಆತ್ಮಹತ್ಯೆಗಳ ಕಾರಣಕ್ಕಾಗಿ ಸಾವನ್ನಪುತ್ತಿದ್ದಾರೆ ಎಂದು ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ.
ಗೃಹ ಇಲಾಖೆ ರಾಜ್ಯ ಸಚಿವರಾದ ಹನ್ಸರಾಜ್ ಜಿ. ಅಹಿರ್ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ. 2016 ರಿಂದ ಈ ವರ್ಷ ಜುಲೈ ವರೆಗೆ  ಒಟ್ಟು 1,294 ಸೈನಿಕರು ಸಾವನ್ನಪ್ಪಿದ್ದಾರೆ . ಇದರಲ್ಲಿ ಬಿಹಾರ, ಛತ್ತೀಸ್ ಘರ್, ಮಹಾರಾಷ್ಟ್ರ ಸೇರಿ ಎಡಪಂಥೀಯ ತೀವ್ರವಾದಿಗಳು ಪ್ರಬಲರಾಗಿರುವ ರಾಜ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸತ್ತ ಸೈನಿಕರ ಸಂಖ್ಯೆ 85. 
ದಾಖಲೆಗಳ ಪ್ರಕಾರ ಕಳೆದ ವರ್ಷ 156 ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ (ಸಿಆರ್ ಪಿಎಫ್೦ ಸಿಬ್ಬಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ, ಮಲೇರಿಯಾ ಮತ್ತು ಡೆಂಗ್ಯೂ ಕಾರಣದಿಂದಾಗಿ ಆರು ಮಂದಿ ಸಾವನ್ನಪ್ಪಿದ್ದಾರೆ, ಖಿನ್ನತೆ ಮತ್ತು ಆತ್ಮಹತ್ಯಾ ಕಾರಣದಿಂದಾಗಿ 38 ಮಂದಿ ಸಾವನ್ನಪ್ಪಿದ್ದರೆ ನಕ್ಸಲ್ ಕಾರ್ಯಾಚರಣೆ ಅಥವ ಇನ್ನಿತರೆ ಕಾರ್ಯಾಚರಣೆಗಳಿಲ್ಲದೆ ಇತರೆ ಕಾರಣಗಳಿಂದ  435 ಜನರು ಮೃತಪಟ್ಟಿದ್ದಾರೆ.
ಇದೇ ರೀತಿ  2016 ರ ಅಂಕಿ-ಅಂಶಗಳು ಹೇಳುವ ಪ್ರಕಾರ ಹೃದಯಾಘಾತದಿಂದಾಗಿ 92 ಮಂದಿ ಸಾವನ್ನಪ್ಪಿದ್ದರೆ ಡೆಂಗ್ಯೂ ಅಥವಾ ಮಲೇರಿಯಾದಿಂದಾಗಿ ಐದು ಜನರು, ಖಿನ್ನತೆ ಮತ್ತು ಆತ್ಮಹತ್ಯೆಗಳ ಕಾರಣಕ್ಕೆ 26 ಜನ, ಸೈನಿಕರು, 353 ಸೈನಿಕರು ಇತರ ಕಾರಣಗಳಿಂದಾಗಿ ತಮ್ಮಪ್ರಾಣ ಕಳೆದುಕೊಂಡಿದ್ದಾರೆ. ಈ ವರ್ಷದ ಜುಲೈ ವರೆಗೆ 39 ಸೈನಿಕರು ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ.ಐವರು ಡೆಂಗ್ಯೂ, ಮಲೇರಿಯಾಗಳಿಗೆ ಬಲಿಯಾದರೆ 19 ಮಂದಿ ಖಿನ್ನತೆಯಿಂದ ಜೀವ ಕಳೆದುಕೊಂಡಿದ್ದಾರೆ. ಇನ್ನೂ 124 ಮಂದುಇ ಇತರೆ ಕಾರಣಕ್ಕಾಗಿ ಬ್ಲಿಯಾಗಿದಾರೆ ಎಂದು ಮಾಹಿತಿ ದೊರಕಿದೆ.. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: 48 ಗಂಟೆಗಳಲ್ಲಿ ಹೋರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನ್‌ನಲ್ಲಿ ನರಕ ಸೃಷ್ಟಿಸುತ್ತೇವೆ; Trump ಕೊನೇಯ ಎಚ್ಚರಿಕೆ!

IPL 2026: ಅಹಮದಾಬಾದ್ ಮೈದಾನದಲ್ಲಿ RR ವಿರುದ್ಧ ಅತ್ಯಧಿಕ ರನ್ ಚೇಸ್‌ನಲ್ಲಿ ಕೊನೆಯ ಓವರ್‌ನಲ್ಲಿ ಸೋತ Gujarat Titans

ವಿದೇಶಗಳ Mk-84 ಗೆ ಪರ್ಯಾಯ, ಆತ್ಮನಿರ್ಭರತೆಗೆ ಉತ್ತೇಜನ: ದೇಶೀಯವಾಗಿ 1000-kg ವಾಯುಬಾಂಬ್‌ ತಯಾರಿಸಲಿರುವ ಭಾರತ!

ಮಾಗಡಿ Congress ಶಾಸಕ ಹೆಚ್​​.ಸಿ ಬಾಲಕೃಷ್ಣಗೆ ಕೋರ್ಟ್ ಶಾಕ್​​: ಜಾಮೀನು ರಹಿತ ವಾರೆಂಟ್ ಜಾರಿ

'ನೀವೇನು ಸುರಕ್ಷಿತ ಅಲ್ಲ': ಟ್ರಂಪ್ 48 ಗಂಟೆಗಳ ಕೊನೆ ಎಚ್ಚರಿಕೆ ಬೆನ್ನಲ್ಲೆ CIA Station ಗೆ ಡ್ರೋನ್ ನುಗ್ಗಿಸಿ ಇರಾನ್; 1 ನಿಮಿಷದ ಅಂತರದಲ್ಲಿ 2 ಸ್ಫೋಟ!

SCROLL FOR NEXT