ಸಂಗ್ರಹ ಚಿತ್ರ 
ದೇಶ

ಕೊಚ್ಚಿ: ಮೀನುಗಾರಿಕಾ ದೋಣಿಗೆ ಹಡಗು ಡಿಕ್ಕಿ, ಮೂವರ ಸಾವು, 9 ಮಂದಿ ನಾಪತ್ತೆ

ಮೀನುಗಾರಿಕಾ ದೋಣಿಗೆ ಅಪರಿಚಿತ ಹಡಗೊಂದು ಡಿಕ್ಕಿಯಾದ ಪರಿಣಾಮ ಮೂವರು ಮೀನುಗಾರರು ಕೊಲ್ಲಲ್ಪಟ್ಟು ಒಂಬತ್ತು ಮಂದಿ ನಾಪತ್ತೆಯಾಗಿರುವ ಘಟನೆ ಕೇರಳದ ಕೊಚ್ಚಿ ನಲ್ಲಿ ನಡೆದಿದೆ.

ಕೊಚ್ಚಿನ್: ಮೀನುಗಾರಿಕಾ ದೋಣಿಗೆ ಅಪರಿಚಿತ ಹಡಗೊಂದು ಡಿಕ್ಕಿಯಾದ ಪರಿಣಾಮ ಮೂವರು ಮೀನುಗಾರರು ಕೊಲ್ಲಲ್ಪಟ್ಟು ಒಂಬತ್ತು ಮಂದಿ ನಾಪತ್ತೆಯಾಗಿರುವ ಘಟನೆ ಕೇರಳದ ಕೊಚ್ಚಿ ನಲ್ಲಿ ನಡೆದಿದೆ.
ಮಂಗಳವಾರ ಬೆಳಗಿನ ಜಾವ 3.30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಮೀನುಗಾರಿಕೆ ದೋಣಿಯಲ್ಲಿ ಒತ್ಟು 14 ಮಂದಿ ಇದ್ದರೆನ್ನಲಾಗಿದೆ.ಎರ್ನಾಕುಲಂ ಜಿಲ್ಲೆಯ ಮುನಂಬಾಮ್‌ ಪ್ರದೇಶದವರಾಗಿದ್ದ ಇವರು ಚೆತ್ತುವಾ ಕರಾವಳಿಯ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು.
ಮೀನುಗಾರಿಕಾ ಉಪನಿರ್ದೇಶಕ ಎಸ್. ಮಹೇಶ್ ಹೇಳುವಂತೆ ದೋಣಿಯು ಅವಘಡದ ಕಾರಣ ಸಂಪೂರ್ಣ ಹಾನಿಗೊಂಡಿದೆ.ಅಲ್ಲದೆ ಮೀನುಗಾರರ ಪೈಕಿ 11 ಮಂದಿ ತಮಿಳುನಾಡು ಮೂಲದವರಾದರೆ ಇಬ್ಬರು ಪಶ್ಚಿಮ ಬಂಗಾಳ ಮೂಲದವರಾಗಿದ್ದು ಓರ್ವ ಕೇರಳದವನಿದ್ದಾರೆ. ಅಪಘಾತದ ಬಳಿಕ ನಾಪತ್ತೆಯಾಗಿರುವ ಅಪರಿಚಿತ ಹಡಗಿನ ಪತ್ತೆಗಾಗಿ ಕೋಸ್ಟ್ ಗಾರ್ಡ್ (ಕರಾವಳಿ ರಕ್ಷಣಾ ಪಡೆ) ಹುಡುಕಾಟ ಪ್ರಾರಂಭಿಸಿದೆ.
ಕೇರಳ ಮೀನುಗಾರಿಕಾ ಸಚಿವ ಜೆ ಮರ್ಸಿಕುಟ್ಟಿ ಅಮ್ಮ ಮಾದ್ಯಮಕ್ಕೆ ನೀಡಿದ್ದ ಹೇಳಿಕೆಯಲ್ಲಿ ಮೂವರು ಮೀನುಗಾರರು ಸಾವನ್ನಪ್ಪಿದ್ದಾಗಿ ಹೇಳಿದ್ದಾರೆ. ಪೋಲೀಸ್ ಹಾಗೂ ರಕ್ಷಣಾ ಪಡೆ ಕಾರ್ಯಾಚರಣೆ ಬಳಿಕವೇ ಸ್ಪಷ್ಟ ಮಾಹಿತಿ ದೊರಕಬೇಕಿದೆ.
ಇದಕ್ಕೂ ಹಿಂದೆ ಕಳೆದ ಜೂನ್ 7ರಂದು  ವಿದೇಶೀ ನಾವೆಯು ಮೀನುಗಾರಿಕಾ ದೋಣೆಗೆ ಡಿಕ್ಕಿಯಾದ ಪರಿಣಾಮ ಇಬ್ಬರು ಮೀನುಗಾರರು ಗಾಯಗೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT