ಶಬಾನಾ ಅಜ್ಮಿ 
ದೇಶ

ತ್ರಿವಳಿ ತಲಾಕ್ ಸಂವಿಧಾನ ಬಾಹಿರ, ನಿಷೇಧ ಕಾನೂನು ಸ್ವಾಗತಾರ್ಹ: ಶಬಾನಾ ಅಜ್ಮಿ

ತ್ರಿವಳಿ ತಾಲಾಖ್ ಭಾರತೀಯ ಸಂವಿಧಾನದ ವಿರುದ್ಧ ಮತ್ತು ಪ್ರಸ್ತಾಪಿತ ಕಾನೂನು ಸ್ವಾಗತಾರ್ಹವಾಗಿದ್ದು ಇದರಿಂದಾಗಿ ತ್ವರಿತ ವಿಚ್ಚೇದನವ ಕಾನೂನು ಬಾಹಿರ....

ಜೌನ್ಪುರ್(ಉತ್ತರ ಪ್ರದೇಶ): ತ್ರಿವಳಿ ತಾಲಾಖ್ ಭಾರತೀಯ ಸಂವಿಧಾನದ ವಿರುದ್ಧ ಮತ್ತು ಪ್ರಸ್ತಾಪಿತ ಕಾನೂನು ಸ್ವಾಗತಾರ್ಹವಾಗಿದ್ದು ಇದರಿಂದಾಗಿ ತ್ವರಿತ ವಿಚ್ಚೇದನವ ಕಾನೂನು ಬಾಹಿರ ಎನಿಸಿಕೊಳ್ಳಲಿದೆ ಎಂದು ಖ್ಯಾತ ಚಲನಚಿತ್ರ ನಟಿ ಶಬಾನಾ ಅಜ್ಮಿ ಹೇಳಿದ್ದಾರೆ.
ಜೌನ್ಪುರದಲ್ಲಿನ ಮಹಮ್ಮದ್ ಹಸನ್ ಇಂಟರ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದ್ದಾರೆ.
"ತ್ರಿವಳಿ ತಲಾಕ್ ಮುಸ್ಲಿಮ್ ಮಹಿಳೆಯರ ಮೇಲೆ ನಡೆಸುವ ದೌರ್ಜನ್ಯವಾಗಿದ್ದು ಇದು ಭಾರತೀಯ ಸಂವಿಧಾನದ ವಿರುದ್ಧವಾಗಿದೆ ... ಈ ನಿಟ್ಟಿನಲ್ಲಿ ಸರ್ಕಾರವು ಜಾರಿಗೊಳಿಸಿದ ಕಾನೂನನ್ನು ನಾನು ಸ್ವಾಗತಿಸುತ್ತೇನೆ" ಮಾಜಿ ಸಂಸದ ಶಬಾನಾ ಅಜ್ಮಿ ಹೇಳಿದ್ದಾರೆ.
"ವಿಶ್ವದ 50 ಇಸ್ಲಾಮಿಕ್ ದೇಶಗಳಲ್ಲಿ 24 ರಾಷ್ಟ್ರಗಳು ಇದಾಗಲೇ ತ್ರಿವಳಿ ತಲಾಕ್ ಅನ್ನು ನಿಷೇಧಿಸಿದೆ. ಭಾರತದಲ್ಲಿ ಇದನ್ನು ವಿರೋಧಿಸುತ್ತಿರುವವರು ಇದರ ಕುರಿತಾಗಿ ತಪ್ಪು ತಿಳುವಳಿಕೆ ಹೊಂದಿದ್ದಾರೆ.ಭಾರತವು ಜಾತ್ಯತೀತ ರಾಷ್ಟ್ರ ಮತ್ತು ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಿದೆ.  ಮಹಿಳೆಯರಿಗೆ ದೌರ್ಜನ್ಯಕ್ಕೆ ಆಸ್ಪದ ನೀಡುವ ಯಾವ ಆಚರಣೆಗಳಿಗೆ ನಾವು ಬೆಂಬಲ ನಿಡುವುದಿಲ್ಲ." ಎಂದು ಅವರು ಹೇಳಿದರು.
ಕಠಿಣ ಕಾನೂನು ಇರುವ ಹೊರತಾಗಿಯೂ ಯುವತಿಯರ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚಳವಾಗುತ್ತಿರುವುದರ ಕುರಿತು ಅಜ್ಮಿ ಕಳವಳ ವ್ಯಕ್ತಪಡಿಸಿದ್ದಾರೆ. ಯಾವುದೇ ವಿಚಾರದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ.ಎಂದು ಅವರು ಅಭಿಪ್ರಾಯಪಟ್ಟಿದ್ದು ಸಮಾಜಕ್ಕೆ ಸ್ಪಷ್ಟ ಸಂದೇಶ ರವಾನಿಸುವ ನಿತ್ಟಿನಲ್ಲಿ ಇಂತಹಾ ಅಪರಾಧವೆಸಗಿದವರಿಗೆ ಕಠಿಣ ಶಿಕ್ಷೆ ವಿಧಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ ODI ಕ್ರಿಕೆಟ್ ನಲ್ಲಿ 1,000 ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟರ್!

ಯಾವುದೇ ಸಂಪರ್ಕ ಕಡಿತಗೊಳ್ಳದೇ ಎಲ್ಲಾ ಇ-ಮೇಲ್ ಗಳನ್ನು Gmail ನಿಂದ Zoho Mail ಗೆ ವರ್ಗಾವಣೆ ಮಾಡುವುದು ಹೇಗೆ? ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

SCROLL FOR NEXT