ಶಬಾನಾ ಅಜ್ಮಿ 
ದೇಶ

ತ್ರಿವಳಿ ತಲಾಕ್ ಸಂವಿಧಾನ ಬಾಹಿರ, ನಿಷೇಧ ಕಾನೂನು ಸ್ವಾಗತಾರ್ಹ: ಶಬಾನಾ ಅಜ್ಮಿ

ತ್ರಿವಳಿ ತಾಲಾಖ್ ಭಾರತೀಯ ಸಂವಿಧಾನದ ವಿರುದ್ಧ ಮತ್ತು ಪ್ರಸ್ತಾಪಿತ ಕಾನೂನು ಸ್ವಾಗತಾರ್ಹವಾಗಿದ್ದು ಇದರಿಂದಾಗಿ ತ್ವರಿತ ವಿಚ್ಚೇದನವ ಕಾನೂನು ಬಾಹಿರ....

ಜೌನ್ಪುರ್(ಉತ್ತರ ಪ್ರದೇಶ): ತ್ರಿವಳಿ ತಾಲಾಖ್ ಭಾರತೀಯ ಸಂವಿಧಾನದ ವಿರುದ್ಧ ಮತ್ತು ಪ್ರಸ್ತಾಪಿತ ಕಾನೂನು ಸ್ವಾಗತಾರ್ಹವಾಗಿದ್ದು ಇದರಿಂದಾಗಿ ತ್ವರಿತ ವಿಚ್ಚೇದನವ ಕಾನೂನು ಬಾಹಿರ ಎನಿಸಿಕೊಳ್ಳಲಿದೆ ಎಂದು ಖ್ಯಾತ ಚಲನಚಿತ್ರ ನಟಿ ಶಬಾನಾ ಅಜ್ಮಿ ಹೇಳಿದ್ದಾರೆ.
ಜೌನ್ಪುರದಲ್ಲಿನ ಮಹಮ್ಮದ್ ಹಸನ್ ಇಂಟರ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದ್ದಾರೆ.
"ತ್ರಿವಳಿ ತಲಾಕ್ ಮುಸ್ಲಿಮ್ ಮಹಿಳೆಯರ ಮೇಲೆ ನಡೆಸುವ ದೌರ್ಜನ್ಯವಾಗಿದ್ದು ಇದು ಭಾರತೀಯ ಸಂವಿಧಾನದ ವಿರುದ್ಧವಾಗಿದೆ ... ಈ ನಿಟ್ಟಿನಲ್ಲಿ ಸರ್ಕಾರವು ಜಾರಿಗೊಳಿಸಿದ ಕಾನೂನನ್ನು ನಾನು ಸ್ವಾಗತಿಸುತ್ತೇನೆ" ಮಾಜಿ ಸಂಸದ ಶಬಾನಾ ಅಜ್ಮಿ ಹೇಳಿದ್ದಾರೆ.
"ವಿಶ್ವದ 50 ಇಸ್ಲಾಮಿಕ್ ದೇಶಗಳಲ್ಲಿ 24 ರಾಷ್ಟ್ರಗಳು ಇದಾಗಲೇ ತ್ರಿವಳಿ ತಲಾಕ್ ಅನ್ನು ನಿಷೇಧಿಸಿದೆ. ಭಾರತದಲ್ಲಿ ಇದನ್ನು ವಿರೋಧಿಸುತ್ತಿರುವವರು ಇದರ ಕುರಿತಾಗಿ ತಪ್ಪು ತಿಳುವಳಿಕೆ ಹೊಂದಿದ್ದಾರೆ.ಭಾರತವು ಜಾತ್ಯತೀತ ರಾಷ್ಟ್ರ ಮತ್ತು ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಿದೆ.  ಮಹಿಳೆಯರಿಗೆ ದೌರ್ಜನ್ಯಕ್ಕೆ ಆಸ್ಪದ ನೀಡುವ ಯಾವ ಆಚರಣೆಗಳಿಗೆ ನಾವು ಬೆಂಬಲ ನಿಡುವುದಿಲ್ಲ." ಎಂದು ಅವರು ಹೇಳಿದರು.
ಕಠಿಣ ಕಾನೂನು ಇರುವ ಹೊರತಾಗಿಯೂ ಯುವತಿಯರ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚಳವಾಗುತ್ತಿರುವುದರ ಕುರಿತು ಅಜ್ಮಿ ಕಳವಳ ವ್ಯಕ್ತಪಡಿಸಿದ್ದಾರೆ. ಯಾವುದೇ ವಿಚಾರದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ.ಎಂದು ಅವರು ಅಭಿಪ್ರಾಯಪಟ್ಟಿದ್ದು ಸಮಾಜಕ್ಕೆ ಸ್ಪಷ್ಟ ಸಂದೇಶ ರವಾನಿಸುವ ನಿತ್ಟಿನಲ್ಲಿ ಇಂತಹಾ ಅಪರಾಧವೆಸಗಿದವರಿಗೆ ಕಠಿಣ ಶಿಕ್ಷೆ ವಿಧಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

Chhattisgarh: ಹೊಲದಿಂದ ಮನೆಗೆ ಮರಳುತ್ತಿದ್ದ ಮಹಿಳೆಗೆ ಸಿಡಿಲು ಬಡಿದು ಸಾವು, Video

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Viral ವಿಡಿಯೋದಲ್ಲಿರುವುದು ನಾನಲ್ಲ, ಒಂದು ವೇಳೆ ನಾನೇ ಆಗಿದ್ದರೂ ಏನು ಇವಾಗ? ತಮಿಳುನಾಡು ಸಚಿವೆ ಕೀರ್ತನಾ ಕಿಡಿ! ಮಲೇಷ್ಯಾ ಮಹಿಳೆ ದೂರು ದಾಖಲು!