ಅಟಲ್ ಬಿಹಾರಿ ವಾಜಪೇಯಿ 
ದೇಶ

ನಾನು ನನ್ನ ತಂದೆಯನ್ನೇ ಕಳೆದುಕೊಂಡಿದ್ದೇನೆ: ಅಟಲ್ ನಿಧನಕ್ಕೆ ಮೋದಿ ಸಂತಾಪ

ಅಟಲ್ ಬಿಹಾರಿ ವಾಜಪೇಯಿ ಖ್ಯಾತ ರಾಜಕೀಯ ಪಟುವಾಗಿದ್ದರು. ಅವರ ಮರಣವು ಒಂದು ಯುಗದ ಅಂತ್, ಇಂದು ಅವರು ನಮ್ಮ ಜತೆ ಇಲ್ಲ, ನಾನು ನನ್ನ ತಂದೆ ಕಳೆದುಕೊಂಡಿದ್ದೇನೆ.

ನವದೆಹಲಿ: ಅಟಲ್ ಬಿಹಾರಿ ವಾಜಪೇಯಿ ಖ್ಯಾತ ರಾಜಕೀಯ ಪಟುವಾಗಿದ್ದರು. ಅವರ ಮರಣವು ಒಂದು ಯುಗದ ಅಂತ್ಯ, ಇಂದು ಅವರು ನಮ್ಮ ಜತೆ ಇಲ್ಲ,  ನಾನು ನನ್ನ ತಂದೆ ಕಳೆದುಕೊಂಡಿದ್ದೇನೆ. ಅವರು ಬಿಟ್ಟು ಹೋದ ಶೂನ್ಯವನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
"ನನಗೆ ಯಾವುದೇ ಮಾತುಗಳು ಬರುತ್ತಿಲ್ಲ, ನಾನೀಗ ಭಾವುಕನಾಗಿದ್ದೇನೆ. ಅವರು ತನ್ನ ಜೀವನದ ಪ್ರತಿ ಕ್ಷಣವನ್ನೂ ದೇಶಕ್ಕೆ ಸಮರ್ಪಿಸಿಕೊಂಡಿದ್ದರು." ಮೋದಿ ಹೇಳಿದ್ದಾರೆ.
 "ನಿಜವಾದ ಭಾರತೀಯ ರಾಜಕಾರಣಿಯಾಗಿದ್ದ ವಾಜಪೇಯಿ ಇನ್ನಿಲ್ಲ ಎನ್ನುವುದನ್ನು ಕೇಳಲು "ಅತ್ಯಂತ ದುಃಖ"ವಾಗುತ್ತಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ.
ಬಡವರು ತಮ್ಮ ಧ್ವನಿಯನ್ನು ಕಳೆದುಕೊಂಡಿದ್ದಾರೆ ಎಂದು ಅಮಿತ್ ಷಾ ಹೇಳಿದ್ದಾರೆ.
"ನಾನು ಅಟಲ್ ಬಿಹಾರಿ ವಾಜಪೇಯಿ ಅವರ ಅಗಲಿಕೆಯಿಂದ ತೀವ್ರ ದುಃಖಿತಳಾಗಿದ್ದೇನೆ.ನಮ್ಮ ರಾಷ್ಟ್ರೀಯ ಜೀವನದಲ್ಲಿವಾಜಪೇಯಿ ಅವರು ಅತ್ಯುನ್ನತ ವ್ಯಕ್ತಿಯಾಗಿದ್ದರು.ತನ್ನ ಜೀವನದುದ್ದಕ್ಕೂ ಅವರು ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗೆ ಕಟಿಬದ್ದರಾಗಿದ್ದರು. ತ್ತು ಅವರ ಎಲ್ಲ ಕಾರ್ಯಗಳಲ್ಲಿ ಈ ಬದ್ಧತೆಯನ್ನು ಪ್ರದರ್ಶಿಸಿದರು, ಸಂಸತ್ ಸದಸ್ಯರಾಗಿ, ಸಚಿವ ಸಂಪುಟ ಸಚಿವ ಅಥವಾ ಭಾರತದ ಪ್ರಧಾನಿಯಾಗಿ ಅವರು ಉತ್ತಮ ಕೆಲಸ ಮಾಡಿದ್ದಾರೆ" ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಅವರು ಸ್ನೇಹಜೀವಿ, ಅವರ ಸುತ್ತಲೂ ಅಭಿಮಾನಿಗಳಿರುತ್ತಿದ್ದರು.ವಾಕ್ಚಾತುರ್ಯದಿಂದ  ಎದುರಿಗಿದ್ದವರನ್ನು ಮೋಡಿ ಮಾಡುವ ಕಲೆ ಅವರಲ್ಲಿತ್ತು. ವಾಜಪೇಯಿ ಅವರ "ಮರಣವು ಒಂದು ದೊಡ್ಡ ಅಂತರವನ್ನು ಸೃಷ್ಟಿಸಿದೆ."ನಾನು ನಮ್ಮ ಲಕ್ಷಾಂತರ ಸಹ ಭಾರತೀಯರಂತೆಯೇ ಅವರ ಮರಣಕ್ಕಾಗಿ ಮರುಗುತ್ತೇನೆ.ಅಟಲ್ ಅವರ ಆತ್ಮಕ್ಕೆ ಶಾಂತಿಗಾಗಿ ಪ್ರಾರ್ಥಿಸುತ್ತೇನೆ" ಸೋನಿಯಾ ಹೇಳಿದ್ದಾರೆ.

"ಆಧುನಿಕ ಭಾರತದ ಅತಿ ಎತ್ತರದ ನಾಯಕರು" ಅಟಲ್ ಅವರಾಗಿದ್ದರೆಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.ನಮ್ಮ ದೇಶವರ ಸೇವೆಗಳನ್ನು ದೀರ್ಘಕಾಲದವರೆಗೆ ನೆನಪಿನಲ್ಲಿಟ್ಟುಕೊಳ್ಳಲಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT