ಸಂಗ್ರಹ ಚಿತ್ರ 
ದೇಶ

ಎದೆಮಟ್ಟ ನೀರಿನಲ್ಲಿ ನಿಂತು ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ಹೊಡೆದಿದ್ದ ಬಾಲಕನ ಹೆಸರು ಎನ್‌ಆರ್‌ಸಿ ಪಟ್ಟಿಯಲ್ಲಿಲ್ಲ!

ಪ್ರವಾಹದ ನೀರು ಎದೆಮಟ್ಟಕ್ಕೆ ಬಂದಿದ್ದರೂ ಪುಟ್ಟ ಮಕ್ಕಳಿಬ್ಬರು ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಿದ್ದ ಫೋಟೋವೊಂದು ಕಳೆದ ವರ್ಷ ಸ್ವಾತಂತ್ರ್ಯೋತ್ಸವ ದಿನ ವೈರಲ್ ಆಗಿತ್ತು. ಈ ಚಿತ್ರ ಮತ್ತೆ ಗಮನ ಸೆಳೆದಿದೆ...

ನವದೆಹಲಿ: ಪ್ರವಾಹದ ನೀರು ಎದೆಮಟ್ಟಕ್ಕೆ ಬಂದಿದ್ದರೂ ಪುಟ್ಟ ಮಕ್ಕಳಿಬ್ಬರು ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಿದ್ದ ಫೋಟೋವೊಂದು ಕಳೆದ ವರ್ಷ ಸ್ವಾತಂತ್ರ್ಯೋತ್ಸವ ದಿನ ವೈರಲ್ ಆಗಿತ್ತು. ಈ ಚಿತ್ರ ಮತ್ತೆ ಗಮನ ಸೆಳೆದಿದೆ. 
ಕಳೆದ ಸ್ವಾತಂತ್ರೋತ್ಸವದ ದಿನ ಅಸ್ಸಾಂ ಪ್ರವಾಹದಿಂದ ತತ್ತರಿಸಿತ್ತು. ಇನ್ನು ಧುಬ್ರಿ ಜಿಲ್ಲೆಯ ಬರ್ ಕಾಲಿಯಾ ನಕ್ಸರಾ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯೊಂದರ ಮುಖ್ಯೋಪಾಧ್ಯಾಯ ತಾಜೆನ್ ಸಿಕ್ ದೆರ್, ಸಹಾಯಕ ಶಿಕ್ಷಕ ನೃಪೆನ್ ರಬ್ಬಾ ಹಾಗೂ ಇಬ್ಬರು ಪುಟಾಣಿ ಮಕ್ಕಳು ಪ್ರವಾಹದ ನೀರು ಎದೆಮಟ್ಟಕ್ಕೆ ಬಂದಿದ್ದರೂ ಧೃತಿಗೆಡದೆ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಿದ್ದರು. ಈ ಚಿತ್ರದಲ್ಲಿನ ಒಬ್ಬ ಬಾಲಕನ ಹೆಸರು ಎನ್‌ಆರ್‌ಸಿ ಪಟ್ಟಿಯಲ್ಲಿಲ್ಲ ಎಂದು ವರದಿಯಾಗಿದೆ. 
ಇಬ್ಬರು ಮಕ್ಕಳ ಪೈಕಿ 9 ವರ್ಷದ ಹೈದರ್ ಖಾನ್ ಹೆಸರು ಎನ್‌ಆರ್‌ಸಿ ಪಟ್ಟಿಯಲ್ಲಿಲ್ಲ ಮತ್ತೊಬ್ಬ ಬಾಲಕ ಹೈದರ್ ನ ಸಂಬಂಧಿ ಜೈರುಲ್ ಖಾನ್. ಹೈದರ್ ನ ಕುಟುಂಬದ ಇತರ ಸದಸ್ಯರ ಹೆಸರುಗಳು ಪಟ್ಟಿಯಲ್ಲಿದ್ದರೂ ಆತನ ಹೆಸರಿಲ್ಲ. ಹೈದರ್ ನ ತಾಯಿ ಜ್ಯೊಗೊನ್ ಖಾತುನ್ ಮನೆಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. 
ಇನ್ನು ಹೈದರ್ ನನ್ನು ಭಾರತೀಯ ಎಂದು ಘೋಷಿಸುವಂತೆ ಆತನ ತಾಯಿ ಮತ್ತು ಗ್ರಾಮಸ್ಥರು ಸರ್ಕಾರವನ್ನು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT