ನವದೆಹಲಿ: ಲೋಕ್ ಪಾಲ್ ಆಯ್ಕೆ ಸಮಿತಿ ಸಭೆ ಆ.21 ರಂದು ನಡೆಯಲಿದ್ದು, ಸಭೆಯಲ್ಲಿ ಭಾಗವಹಿಸದೇ ಇರಲು ಕಾಂಗ್ರೆಸ್ ನ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಿರ್ಧರಿಸಿದ್ದಾರೆ.
"ನನ್ನನ್ನು ವಿಶೇಷ ಆಹ್ವಾನಿತನ ಪಟ್ಟಿಗೆ ಸೇರಿಸಲಾಗಿದೆ. ಲೋಕ್ ಪಾಲ್ ಆಯ್ಕೆ ಸಮಿತಿಗೆ ಪೂರ್ಣಪ್ರಮಾಣದ ಸದಸ್ಯನನ್ನಾಗಿ ಪರಿಗಣಿಸುವವರೆಗೂ ನಾನು ಸಭೆಯಲ್ಲಿ ಭಾಗವಹಿಸುವುದಿಲ್ಲ" ಎಂದು ಖರ್ಗೆ ತಿಳಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿರುವ ಖರ್ಗೆ, ಸಂಸದೀಯ ಪ್ರಜಾಪ್ರಭುತ್ವದಲ್ಲಿ ವಿರೋಧಪಕ್ಷದ ಧ್ವನಿಯನ್ನು ಬಹಿಷ್ಕರಿಸುವುದು, ಸಂಸತ್ ನ್ನು ಬಹಿಷ್ಕರಿಸಿ ವಶಪಡಿಸಿಕೊಂಡಂತಾಗುತ್ತದೆ ಎಂದು ಹೇಳಿದ್ದಾರೆ.
ನನ್ನನ್ನು ವಿಶೇಷ ಆಹ್ವಾನಿತನನ್ನಾಗಿ ಪರಿಗಣಿಸಿರುವುದರ ಬಗ್ಗೆ ಈ ಹಿಂದೆಯೂ ಸರ್ಕಾರಕ್ಕೆ ಸಾಕಷ್ಟು ಬಾರಿ ಪತ್ರ ಬರೆದಿದ್ದೇನೆ, ಆದರೂ ಮತ್ತೆ ಅದೇ ಮುಂದುವರೆದಿದೆ ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.