ಕೊಚ್ಚಿ: ಪ್ರವಾಹ ಪೀಡಿತ ಕೇರಳದಲ್ಲಿ 14 ದಿನಗಳಿಂದಲೂ ರಕ್ಷಣಾ ಕಾರ್ಯಾಚರಣೆ ನಡೆಸಿದ ದಕ್ಷಿಣ ನೌಕಪಡೆ ರಕ್ಷಣಾ ಕಾರ್ಯಾಚರಣೆಯನ್ನು ಅಂತ್ಯಗೊಳಿಸಿದೆ.
ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಸ್ಥಳಾಂತರಿಸುವಿಕೆಗೆ ಹೆಚ್ಚಿನ ಮನವಿ ಬರುತ್ತಿಲ್ಲ ಎಂದು ನೌಕಪಡೆ ಹೇಳಿಕೆಯಲ್ಲಿ ತಿಳಿಸಿದೆ.
ಕೇರಳ ಸರ್ಕಾರದ ಸಹಯೋಗದಲ್ಲಿ ಆಗಸ್ಟ್ 9 ರಿಂದಲೂ ಆಪರೇಷನ್ ಮ್ಯಾಡದ್ ಕಾರ್ಯಾಚರಣೆ ಕೈಗೊಂಡು ಒಟ್ಟಾರೇ, ಸುಮಾರು 16, 005 ಜನರನ್ನು ರಕ್ಷಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೇರಳ ವಿಪತ್ತು ನಿರ್ವಹಣಾ ನಿಯಂತ್ರಣ ಕೇಂದ್ರದ ಮಾಹಿತಿ ಪ್ರಕಾರ ಆಗಸ್ಟ್ 8 ರಿಂದಲೂ ಉಂಟಾದ ಭೀಕರ ಪ್ರವಾಹದಿಂದಾಗಿ 231 ಜನರು ಮೃತಪಟ್ಟಿದ್ದು, 32 ಜನರು ನಾಪತ್ತೆಯಾಗಿದ್ದಾರೆ. 3.91 ಲಕ್ಷ ಕುಟುಂಬಕ್ಕೆ ಸೇರಿದ ಸುಮಾರು 14.50 ಲಕ್ಷ ಜನರು ಇಂದಿಗೂ ರಾಜ್ಯದಾದ್ಯಂತ ತೆರಿದಿರುವ 3 879 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos