ಮತಗಳಿಗಾಗಿ ಬಿಜೆಪಿ ವಾಜಪೇಯಿ ಚಿತಾಭಸ್ಮ ಹಿಡಿದು ದೇಶಾದ್ಯಂತ ತಿರುಗುತ್ತಿದೆ: ಮಾಜಿ ಪ್ರಧಾನಿಯ ಸೋದರ ಸಂಬಂಧಿ 
ದೇಶ

ಮತಗಳಿಗಾಗಿ ಬಿಜೆಪಿ ವಾಜಪೇಯಿ ಚಿತಾಭಸ್ಮ ಹಿಡಿದು ದೇಶಾದ್ಯಂತ ತಿರುಗುತ್ತಿದೆ: ಮಾಜಿ ಪ್ರಧಾನಿ ಸೋದರ ಸಂಬಂಧಿ

ಬಿಜೆಪಿ ನಾಯಕರು ಮತಗಳಿಗಾಗಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಹಿಡಿದು ದೇಶಾದ್ಯಂತ ತಿರುಗುತ್ತಿದ್ದಾರೆ ಎಂದು ಅಟಲ್ ಬಿಹಾರಿ ವಾಜಪೇಯಿ ಅವರ ಸೋದರ ಸಂಬಂಧಿ

ಬಿಜೆಪಿ ನಾಯಕರು ಮತಗಳಿಗಾಗಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಹಿಡಿದು ದೇಶಾದ್ಯಂತ ತಿರುಗುತ್ತಿದ್ದಾರೆ ಎಂದು ಅಟಲ್ ಬಿಹಾರಿ ವಾಜಪೇಯಿ ಅವರ ಸೋದರ ಸಂಬಂಧಿ ಹಾಗೂ ಕಾಂಗ್ರೆಸ್ ನಾಯಕಿ ಕರುಣಾ ಶುಕ್ಲಾ ಆರೋಪಿಸಿದ್ದಾರೆ. 
ಪ್ರಮುಖವಾಗಿ ಚತ್ತೀಸ್ ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ವಿರುದ್ಧ ಅಸಮಾಧಾವ ವ್ಯಕ್ತಪಡಿಸಿರುವ ಕರುಣಾ ಶುಕ್ಲಾ, ವಾಜಪೇಯಿ ಅವರ ಚಿತಾಭಸ್ಮದ ವಿಷಯದಲ್ಲೂ ಚತ್ತೀಸ್ ಗಢ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. 
ವಾಜಪೇಯಿ ಅವರು ಚತ್ತೀಸ್ ಗಢವನ್ನು ಪ್ರತ್ಯೇಕ ರಾಜ್ಯವನ್ನಾಗಿಸಿದಾಗಿನಿಂದ ಹಿಡಿದು ಈ ವರೆಗೂ ರಮಣ್ ಸಿಂಗ್ ಹಾಗೂ ಅವರ ಸಚಿವ ಸಂಪುಟ ವಾಜಪೇಯಿ ಅವರನ್ನು ಎಂದಿಗೂ ಸ್ಮರಿಸಿಲ್ಲ. ರಮಣ್ ಸಿಂಗ್ ತಮ್ಮ ಭಾಷಣದಲ್ಲಿ ಒಮ್ಮೆಯೂ ಅಟಲ್ ಜೀ ಅವರ ಹೆಸರನ್ನು ಉಲ್ಲೇಖಿಸಿಲ್ಲಆದರೆ ಈಗ ರಾಜಕೀಯ ಲಾಭಕ್ಕಾಗಿ ವಾಜಪೇಯಿ ಅವರ ಚಿತಾ ಭಸ್ಮವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕರುಣಾ ಶುಕ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT