ಮತಗಳಿಗಾಗಿ ಬಿಜೆಪಿ ವಾಜಪೇಯಿ ಚಿತಾಭಸ್ಮ ಹಿಡಿದು ದೇಶಾದ್ಯಂತ ತಿರುಗುತ್ತಿದೆ: ಮಾಜಿ ಪ್ರಧಾನಿಯ ಸೋದರ ಸಂಬಂಧಿ
ಬಿಜೆಪಿ ನಾಯಕರು ಮತಗಳಿಗಾಗಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಹಿಡಿದು ದೇಶಾದ್ಯಂತ ತಿರುಗುತ್ತಿದ್ದಾರೆ ಎಂದು ಅಟಲ್ ಬಿಹಾರಿ ವಾಜಪೇಯಿ ಅವರ ಸೋದರ ಸಂಬಂಧಿ ಹಾಗೂ ಕಾಂಗ್ರೆಸ್ ನಾಯಕಿ ಕರುಣಾ ಶುಕ್ಲಾ ಆರೋಪಿಸಿದ್ದಾರೆ.
ಪ್ರಮುಖವಾಗಿ ಚತ್ತೀಸ್ ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ವಿರುದ್ಧ ಅಸಮಾಧಾವ ವ್ಯಕ್ತಪಡಿಸಿರುವ ಕರುಣಾ ಶುಕ್ಲಾ, ವಾಜಪೇಯಿ ಅವರ ಚಿತಾಭಸ್ಮದ ವಿಷಯದಲ್ಲೂ ಚತ್ತೀಸ್ ಗಢ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ವಾಜಪೇಯಿ ಅವರು ಚತ್ತೀಸ್ ಗಢವನ್ನು ಪ್ರತ್ಯೇಕ ರಾಜ್ಯವನ್ನಾಗಿಸಿದಾಗಿನಿಂದ ಹಿಡಿದು ಈ ವರೆಗೂ ರಮಣ್ ಸಿಂಗ್ ಹಾಗೂ ಅವರ ಸಚಿವ ಸಂಪುಟ ವಾಜಪೇಯಿ ಅವರನ್ನು ಎಂದಿಗೂ ಸ್ಮರಿಸಿಲ್ಲ. ರಮಣ್ ಸಿಂಗ್ ತಮ್ಮ ಭಾಷಣದಲ್ಲಿ ಒಮ್ಮೆಯೂ ಅಟಲ್ ಜೀ ಅವರ ಹೆಸರನ್ನು ಉಲ್ಲೇಖಿಸಿಲ್ಲಆದರೆ ಈಗ ರಾಜಕೀಯ ಲಾಭಕ್ಕಾಗಿ ವಾಜಪೇಯಿ ಅವರ ಚಿತಾ ಭಸ್ಮವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕರುಣಾ ಶುಕ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos