ದೇಶ

ಕಾಂಗ್ರೆಸ್ ರ್ಯಾಲಿಯಲ್ಲಿ ಸಿಲುಕಿದ ಆ್ಯಂಬುಲೇನ್ಸ್; ನವಜಾತ ಶಿಶು ಸಾವು, ಕೋಮಾಗೆ ಜಾರಿದ ತಾಯಿ!

Vishwanath S
ಸೋನಿಪತ್(ಹರಿಯಾಣ): ಹರಿಯಾಣ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ತನ್ವಾರ್ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸೈಕಲ್ ರ್ಯಾಲಿಯಿಂದಾಗಿ ನವಜಾತ ಶಿಶು ಸಾವನ್ನಪ್ಪಿದ್ದು ತಾಯಿ ಕೋಮಾಗೆ ಜಾರಿರುವ ಹೃದಯವಿದ್ರಾವಕ ಘಟನೆ ಸೋನಿಪತ್ ನಲ್ಲಿ ನಡೆದಿದೆ. 
ಎರಡು ದಿನಗಳ ಹಿಂದೆ ಮಗುವಿನ ಜನನವಾಗಿತ್ತು. ಆದರೆ ನವಜಾತ ಶಿಶುವಿನ ಪರಿಸ್ಥಿತಿ ಗಂಭೀರವಾಗಿದ್ದರಿಂದ ಕುಟುಂಬಸ್ಥರು ತಾಯಿ ಮತ್ತು ಮಗುವನ್ನು ಆ್ಯಂಬುಲೇನ್ಸ್ ನಲ್ಲಿ ಸೋನಿಪತ್ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರುವಾಗ ಕಾಂಗ್ರೆಸ್ ನ ಸೈಕಲ್ ರ್ಯಾಲಿ ಮಧ್ಯೆ ಸಿಕ್ಕಿಹಾಕಿಕೊಂಡಿದ್ದಾರೆ. 
ಸೈಕಲ್ ರ್ಯಾಲಿಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದಾಗಿ 30 ನಿಮಿಷಗಳ ಕಾಲ ಆ್ಯಂಬುಲೇನ್ಸ್ ರ್ಯಾಲಿ ಮಧ್ಯೆ ಸಿಕ್ಕಿಹಾಕಿಕೊಂಡಿದ್ದರಿಂದ ನವಜಾತ ಶಿಶುವಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆಯದ ಕಾರಣ ಮೃತಪಟ್ಟಿದ್ದು ತಾಯಿ ಕೋಮಾಗೆ ಜಾರಿದ್ದಾರೆ. 
ಅಶೋಕ್ ತನ್ವಾರ್ ಹರಿಯಾಣ ಬಜಾವೋ ಪರಿವರ್ತನ್ ಲಾವೋ ಅಭಿಯಾನ ಆರಂಭಿಸಿದ್ದು ಸೈಕಲ್ ರ್ಯಾಲಿಗೆ ಕರೆ ನೀಡಿದ್ದರು. ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 1ನ್ನು ಬ್ಲಾಕ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.
SCROLL FOR NEXT