ಜೂನಿಯರ್ ಎನ್‍ಟಿಆರ್-ಜಾನಕಿರಾಮ್-ನಂದಮೂರಿ ಹರಿಕೃಷ್ಣ 
ದೇಶ

ವಿಧಿಯಾಟ: ಹಿರಿಯ ಮಗನಂತೆಯೇ ತಂದೆ ನಂದಮೂರಿ ಹರಿಕೃಷ್ಣ ಸಹ ಅಪಘಾತಕ್ಕೀಡಾಗಿ ದುರ್ಮರಣ!

ವಿಧಿಯಾಟ ಅಂದರೆ ಇದೇ ಇರಬೇಕೇನೋ. ಮಗನಂತೆ ತಂದೆ ನಂದಮೂರಿ ಹರಿಕೃಷ್ಣ ಸಹ ಅಪಘಾಕ್ಕೀಡಾಗಿ ದುರ್ಮರಣ ಹೊಂದಿದ್ದಾರೆ...

ಹೈದರಾಬಾದ್: ವಿಧಿಯಾಟ ಅಂದರೆ ಇದೇ ಇರಬೇಕೇನೋ. ಮಗನಂತೆ ತಂದೆ ನಂದಮೂರಿ ಹರಿಕೃಷ್ಣ ಸಹ ಅಪಘಾಕ್ಕೀಡಾಗಿ ದುರ್ಮರಣ ಹೊಂದಿದ್ದಾರೆ. 
2014ರ ಡಿಸೆಂಬರ್ 6ರಂದು ನಂದಮೂರಿ ಹರಿಕೃಷ್ಣ ಅವರ ಹಿರಿಯ ಪುತ್ರ ಜಾನಕಿರಾಮ್ ಸಹ ನಲ್ಗೊಂಡದಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಮೃತಪಟ್ಟಿದ್ದರು. ಈಗ ಅದೇ ರೀತಿ ಹರಿಕೃಷ್ಣ ಸಹ ನಲ್ಗೊಂಡದ ಹೆದ್ದಾರಿಯ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. 
ಆಂಧ್ರಪ್ರದೇಶದ ನಲ್ಗೊಂಡದ ನಾರ್ಕಟ್ ಪಲ್ಲಿ-ಅದ್ದಂಕಿ ಹೆದ್ದಾರಿ ಹರಿಕೃಷ್ಣ ಕುಟಂಬಕ್ಕೆ ಕಂಟಕವಾಗಿ ಪರಿಣಮಿಸಿದೆ. ಇದೇ ಹೆದ್ದಾರಿಯಲ್ಲಿ ಹರಿಕೃಷ್ಣ ಕುಟಂಬದವರಿಗೆ ಅಪಘಾತಗಳಾಗುತ್ತಿವೆ. 2009ರಲ್ಲಿ ಜೂನಿಯರ್ ಎನ್‍ಟಿಆರ್ ಕಾರು ಅಪಘಾತಗೊಂಡು ಜೂನಿಯರ್ ಎನ್‍ಟಿಆರ್ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಅವರಿಗೆ ಆಗ ಗಂಭೀರ ಗಾಯಗಳಾಗಿತ್ತು. 
ನಂತರ 2014ರಲ್ಲಿ ಜಾನಕಿರಾಮ್ ಕಾರು ಅಪಘಾತವಾಗಿ ಜಾನಕಿರಾಮ್ ಮೃತಪಟ್ಟಿದ್ದರು. ಅದೇ 2018ರಲ್ಲಿ ನಂದಮೂರಿ ಹರಿಕೃಷ್ಣ ಅವರ ಕಾರು ಅಪಘಾತಗೊಂಡು ದುರ್ಮರಣ ಹೊಂದಿದ್ದಾರೆ. 
ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ನಟ ದಿವಂಗತ ನಂದಮೂರಿ ತಾರಕ ರಾಮರಾವ್ ಹಿರಿಯ ಪುತ್ರ ನಟ ನಂದಮೂರಿ ಹರಿಕೃಷ್ಣ ಅವರು ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅನ್ನೇಪರ್ತಿ ಬಳಿ ನಂದಮೂರಿ ಹರಿಕೃಷ್ಣ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಅಪಘಾತದಲ್ಲಿ ಹರಿಕೃಷ್ಣ ಅವರು ಭೀಕರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾಮಿನೇನಿ ಆಸ್ಪತ್ರೆಯಲ್ಲಿ ಹರಿಕೃಷ್ಣ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT