ಅಧಿಕಾರ ಸ್ವೀಕರಿಸಿದ ಕಾರ್ಗಿಲ್ ಹೀರೋ ವೈಕೆ ಜೋಷಿ 
ದೇಶ

ಸೇನೆಯ 14ನೇ ಕಾರ್ಪೋರೇಷನ್ ನ ಕಮಾಂಡಿಂಗ್ ಚೀಫ್ ಆಗಿ ಕಾರ್ಗಿಲ್ ಹೀರೋ ನೇಮಕ

1999ರ ಕಾರ್ಗಿಲ್ ಯುದ್ಧದ ವೇಳೆ ತಮ್ಮ ಪ್ರಾಣದ ಹಂಗು ತೊರೆದು ಭಾರತೀಯ ಸೇನೆಗೆ ಟೈಗರ್ ಹಿಲ್ ಗೆದ್ದುಕೊಟ್ಟಿದ್ದ ವೀರ ಯೋಧ ಈಗ ಸೇನೆಯ 14ನೇ ಕಾರ್ಪೋರೇಷನ್ ನ ಕಮಾಂಡಿಂಗ್ ಚೀಫ್ ಆಗಿ ನೇಮಕವಾಗಿದ್ದಾರೆ.

ನವದೆಹಲಿ: 1999ರ ಕಾರ್ಗಿಲ್ ಯುದ್ಧದ ವೇಳೆ ತಮ್ಮ ಪ್ರಾಣದ ಹಂಗು ತೊರೆದು ಭಾರತೀಯ ಸೇನೆಗೆ ಟೈಗರ್ ಹಿಲ್ ಗೆದ್ದುಕೊಟ್ಟಿದ್ದ ವೀರ ಯೋಧ ಈಗ ಸೇನೆಯ 14ನೇ ಕಾರ್ಪೋರೇಷನ್ ನ ಕಮಾಂಡಿಂಗ್ ಚೀಫ್ ಆಗಿ ನೇಮಕವಾಗಿದ್ದಾರೆ.
1999ರ ಕಾರ್ಗಿಲ್ ಯುದ್ಧದ ವೇಳೆ ಸೇನೆಯ 13ನೇ ಜಮ್ಮು ಮತ್ತು ಕಾಶ್ನೀರ ರೈಫಲ್ಸ್ ತಂಡವನ್ನು ಟೈಗರ್ ಹಿಲ್ ನಲ್ಲಿ ಯಶಸ್ವಿಯಾಗಿ ಮುನ್ನಡೆಸಿದ್ದ ಲೆಫ್ಟಿನೆಂಟ್  ಜನರಲ್ ವೈಕೆ ಜೋಷಿ ಅವರು ಇಂದು ಸೇನೆಯ 14ನೇ ಕಾರ್ಪೋರೇಷನ್ ನ ಕಮಾಂಡಿಂಗ್ ಚೀಫ್ ಆಗಿ ಅಧಿಕಾರ ಸ್ವೀಕರಿಸಿದರು. ವೈಕೆ ಜೋಷಿ ಅವರು ಲಡಾಖ್ ವ್ಯಾಪ್ತಿಯಲ್ಲಿ ಇನ್ನು ಮುಂದೆ ಸೇನೆಯನ್ನು ಮುನ್ನಡೆಸಲಿದ್ದು, ವಿಶೇಷ ಅಂಶವೆಂದರೆ ಎಂದರೆ ವೈಕೆ ಜೋಷಿ ಇಂದು ಅಧಿಕಾರ ಸ್ವೀಕರಿಸಿರುವ ಲಡಾಖ್ ಕಾರ್ಯವ್ಯಾಪ್ತಿಗೆ ಅವರು ಕಾರ್ಗಿಲ್ ಯುದ್ಧದ ವೇಳೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದ ಕಾರ್ಗಿಲ್ ಬೆಟ್ಟ ಕೂಡ ಸೇರುತ್ತದೆ.
1999ರಲ್ಲಿ ಮೇ ತಿಂಗಳಿನಲ್ಲಿ ಆರಂಭವಾಗಿದ್ದ ಕಾರ್ಗಿಲ್ ಯುದ್ಧ ಜುಲೈ ವರೆಗೂ ನಡೆದಿತ್ತು. ಭಾರತೀಯ ಸೇನೆಯ ಬಂಕರ್ ಗಳನ್ನು ವಶಪಡಿಸಿಕೊಂಡಿದ್ದ ಪಾಕ್ ಸೇನೆ ಉದ್ಧಟತನ ಮೆರೆದು ಭಾರತಕ್ಕೆ ಯುದ್ಧಾಹ್ವಾನ ನೀಡಿತ್ತು. ಅಂದು ಪಾಕಿಸ್ತಾನದ ಪಂಥಾಹ್ವಾನವನ್ನು ಸ್ವೀಕರಿಸಿದ್ದ ಭಾರತ ಯಶಸ್ವಿಯಾಗಿ ಕಾರ್ಗಿಲ್ ಬೆಟ್ಟವನ್ನು ತನ್ನ ವಶಕ್ಕೆ ಪಡೆದಿತ್ತು. ಆದರೆ ಅಂದು ಸೇನಾಧಿಕಾರಿಗಳಾದ ವಿಕ್ರಮ ಬಾತ್ರಾ, ಮನೋಜ್ ಕುಮಾರ್ ಪಾಂಡೆ, ಯೋಗೇಂದ್ರ ಸಿಂಗ್ ಯಾದವ್, ಪದ್ಮಪನಿ ಆಚಾರ್ಯ, ಸಂಜಯ್ ಕುಮಾರ್, ಸೌರಭ್ ಕಾಲಿಯಾ, ಅನೂಜ್ ನಾಯರ್ ಸೇರಿದಂತೆ ಒಟ್ಟು 453 ಭಾರತೀಯ ಯೋಧರು ಹುತಾತ್ಮರಾಗಿ, 1500ಕ್ಕೂ ಅಧಿಕ ಸೈನಿಕರ ಗಾಯಗೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT