ಸಂಗ್ರಹ ಚಿತ್ರ 
ದೇಶ

ರಾಫೆಲ್ ಜೆಟ್ ಒಪ್ಪಂದ: ಅರುಣ್ ಜೇಟ್ಲಿ ಸುಳ್ಳು ಸಾಬೀತು ಎಂದ ರಾಹುಲ್ ಗಾಂಧಿ

ತೀವ್ರ ಸುದ್ದಿಗೆ ಗ್ರಾಸವಾಗಿರುವ ಫ್ರಾನ್ಸ್ ನೊಂದಿಗಿನ ರಾಫೆಲ್ ಜೆಟ್ ಯುದ್ಧ ವಿಮಾನ ಖರೀದಿ ಒಪ್ಪಂದ ಸಂಬಂಧ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಸುಳ್ಳು ಸಾಬೀತಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ನವದೆಹಲಿ: ತೀವ್ರ ಸುದ್ದಿಗೆ ಗ್ರಾಸವಾಗಿರುವ ಫ್ರಾನ್ಸ್ ನೊಂದಿಗಿನ ರಾಫೆಲ್ ಜೆಟ್ ಯುದ್ಧ ವಿಮಾನ ಖರೀದಿ ಒಪ್ಪಂದ ಸಂಬಂಧ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಸುಳ್ಳು ಸಾಬೀತಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಹಿಂದಿನ ಯುಪಿಎ ಸರಕಾರ ರಕ್ಷಣಾ ಖರೀದಿಯ ಮೊತ್ತ ಬಹಿರಂಗಪಡಿಸಿರಲಿಲ್ಲ ಎಂಬ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಪ್ರತಿಪಾದನೆ ಸುಳ್ಳು ಎಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ತಾನು ಈ ಹಿಂದೆ ರಾಫೆಲ್  ವ್ಯವಹಾರದ ಕುರಿತು ಅವರನ್ನು ‘ಅರುಣ್ ಜೇಟ್ ಲೈ (ಸುಳ್ಳು)’ ಎಂದು ವಾಗ್ದಾಳಿ ನಡೆಸಿರುವುದನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ ರಾಫೆಲ್ ಜೆಟ್ ಖರೀದಿಗೆ ಆಗಿರುವ ವೆಚ್ಚವನ್ನು ಬಹಿರಂಗಪಡಿಸಲು ರಕ್ಷಣಾ ಸಚಿವೆ ನಿರ್ಮಲಾ  ಸೀತಾರಾಮನ್ ಅವರಿಗೆ ಸೂಚಿಸುವಂತೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಸವಾಲು ಹಾಕಿದ್ದಾರೆ. 
ಅಂತೆಯೇ ‘ಇಲ್ಲಿ ಏನೋ ಅವ್ಯವಹಾರ ನಡೆಯುತ್ತಿದೆ’ (#DealMeinKuchKalaHai) ಎಂಬ ಹ್ಯಾಶ್ ಟ್ಯಾಗ್ ಬಳಸುವ ಮೂಲಕ ರಾಹುಲ್ ಗಾಂಧಿ ರಾಫೆಲ್‌ ಒಪ್ಪಂದ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ. 
ರಾಫೆಲ್ ಜೆಟ್ ಒಪ್ಪಂದ ಸಂಬಂಧ ಇಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "‘ಆತ್ಮೀಯ ಜೇಟ್ಲಿ ಅವರೇ, ರಕ್ಷಣಾ ಖರೀದಿಯ ಮೊತ್ತವನ್ನು ಯುಪಿಎ ಸರ್ಕಾರ ಎಂದಿಗೂ ಬಿಡುಗಡೆ ಮಾಡಿರಲಿಲ್ಲ ಎಂದು ನೀವು ಸುಳ್ಳು ಹೇಳಿದ್ದೀರಿ.  ರಕ್ಷಣಾ ಖರೀದಿಯಲ್ಲಿ ಯುಪಿಎ ಪಾರದರ್ಶಕವಾಗಿತ್ತು ಎಂಬುದನ್ನು ದೃಢಪಡಿಸಲು ಸಂಸತ್ತಿನ ಮೂರು ಪ್ರತಿಕ್ರಿಯೆ ಇಲ್ಲಿದೆ. ನಿಮ್ಮ ಸುಳ್ಳನ್ನು ಇದು ಬಯಲು ಮಾಡಿದೆ. ಈಗ ಪ್ರತಿ ರಾಫೆಲ್ ಜೆಟ್‌ ನ ವೆಚ್ಚ ಎಷ್ಟು ಎಂಬುದನ್ನು ನಿಮ್ಮ  ರಕ್ಷಣಾ ಸಚಿವರು ದೇಶಕ್ಕೆ ತಿಳಿಸಲು ಹೇಳಿ’’ ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೆ ಟ್ವೀಟ್‌ ನೊಂದಿಗೆ ಲಗತ್ತಿಸಿರುವ ಈ ಮೂರು ಪ್ರತಿಕ್ರಿಯೆ ಯುಪಿಎ ತನ್ನ ಅಧಿಕಾರಾವಧಿಯಲ್ಲಿ ರಷ್ಯಾದಿಂದ ಸುಖೋಯ್ ವಿಮಾನ, ಐಎನ್‌ಎಸ್ ವಿಕ್ರಮಾದಿತ್ಯ ಖರೀದಿಸಲು ಹಾಗೂ ಮಿರೇಜ್ ವಿಮಾನವನ್ನು ಮೇಲ್ದರ್ಜೆಗೆ  ಏರಿಸಲು ಆದ ವೆಚ್ಚವನ್ನು ಸಂಸತ್ತಿಗೆ ತಿಳಿಸಿರುವುದನ್ನು ಬಹಿರಂಗಗೊಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಏನೇ ಆದ್ರೂ, ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

SCROLL FOR NEXT