ರಾಯಪುರ್: ಛತ್ತೀಸ್ ಗಢದ ದಂಗೆ ಪೀಡಿತ ಕೊಂಡಗಾವ್ ಜಿಲ್ಲೆಯಲ್ಲಿ ಮೂವರು ನಕ್ಸಲರನ್ನು ಬಂಧಿಸಿರಿವುದಾಗಿ ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಮೂವರು ನಕ್ಸಲರ ಪೈಕಿ ಓರ್ವ ನಕ್ಸಲನ ತೆಲೆಗೆ ಬಹುಮಾನ ಘೋಷಿಸಲಾಗಿತ್ತು. ನಕ್ಸಲರ ವಿರುದ್ಧ ಐಟಿಬಿಪಿ ಪೊಲೀಸರು ಹಾಗೂ ಜಿಲ್ಲಾ ಪೊಲೀಸ್ ಪಡೆ ಜಂಟಿ ಕಾರ್ಯಾಚರಣೆ ನಡೆಸಿ ಮರ್ದಪಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಮೂವರು ನಕ್ಸಲರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ್ವರ್ ನಾಗ್ ಅವರು ಪಿಟಿಐಗೆ ತಿಳಿಸಿದ್ದಾರೆ.
ಬಂಧಿತ ನಕ್ಸಲರು ನಿಲ್ಧಾರ್ ಅಲಿಯಾಸ್ ಗುಡ್ಡು(25), ಗಿನ್ನು(25) ಮತ್ತು ಘಸ್ಸುರಾಮ್(30) ಎಂದು ಗುರುತಿಸಲಾಗಿದೆ.
ಗುಡ್ಡು ತಲೆಗೆ ಮೂರು ಲಕ್ಷ ರುಪಾಯಿ ಬಹುಮಾನ ಘೋಷಿಸಲಾಗಿತ್ತು ಎಂದು ನಾಗ್ ಅವರು ಹೇಳಿದ್ದಾರೆ.