ನವದೆಹಲಿ: 11 ಸಾವಿರ ಕೋಟಿ ರುಪಾಯಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ರೂವಾರಿ ನೀರವ್ ಮೋದಿಯನ್ನು ಕಾಂಗ್ರೆಸ್ 'ಛೋಟಾ ಮೋದಿ' ಎಂದು ಕರೆದಿರುವುದು ಸರಿಯಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಕಾಂಗ್ರೆಸ್ ಛೋಟಾ ಮೋದಿ ಎಂಬಂತಹ ಪದಗಳನ್ನು ಬಳಸುತ್ತಿರುವುದು ಸ್ವೀಕಾರಾರ್ಹವಲ್ಲ. ಇಂತಹ ಪದಗಳನ್ನು ಬಳಸಿದವರ ವಿರುದ್ಧ ಬಿಜೆಪಿ ಕಠಿಣ ಕ್ರಮಕೈಗೊಳ್ಳುತ್ತದೆ ಹಾಗೂ ಇದು ಅವಹೇಳನಕಾರಿ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರ ಹಲವು ಚಿತ್ರೀಣಗಳು ನಮ್ಮ ಬಳಿ ಇವೆ. ಆದರೆ ನಾವು ಕೆಳ ಮಟ್ಟಕ್ಕೆ ಇಳಿಯಲು ಬಯಸುವುದಿಲ್ಲ. ಛೋಟಾ ಮೋದಿ ಎಂದರೆ ಏನು? ದೇಶದಲ್ಲಿ ಆ ಉಪನಾಮದಿಂದ ಬಹಳಷ್ಟು ಜನರಿದ್ದಾರೆ.
ನಿರಾವ್ ಮೋದಿ ಅವರ 13 ಸಾವಿರ ಕೋಟಿ ರುಪಾಯಿ ಮೌಲ್ಯದ ಆಸ್ತಿ ಇದೆ. ಅವರ ಪಾಸ್ ಪೋರ್ಟ್ ಹಿಂತೆಗೆದುಕೊಳ್ಳಬೇಕು. ಕಾಂಗ್ರೆಸ್ ಫೋಟೋ ರಾಜಕೀಯ ನಿಲ್ಲಿಸಬೇಕು ಎಂದರು.
ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಒಕ್ಕೂಟದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿರಾವ್ ಮೋದಿ ಅವರನ್ನು ಭೇಟಿ ಮಾಡಿರಲಿಲ್ಲ. ನಿರಾವ್ ಮೋದಿ ಅವರು ದಾವೋಸ್ಗೆ ಹೋಗಿದಿದ್ದು ಅವರ ಸ್ವಂತ ಉದ್ದೇಶಕ್ಕಾಗಿ ಅಷ್ಟೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos