ಸಾಂದರ್ಭಿಕ ಚಿತ್ರ 
ದೇಶ

ಈಗ, ಐಆರ್‏ಸಿಟಿಸಿ ವೆಬ್ ಸೈಟ್ ಮೂಲಕ ವಿಶೇಷ ರೈಲುಗಳು, ರೈಲು ಬೋಗಿಗಳನ್ನು ಬುಕ್ ಮಾಡಿ!

ಧಾರ್ಮಿಕ ಯಾತ್ರೆ ಹಾಗೂ ವಿವಾಹ ಕಾರ್ಯಕ್ರಮಗಳಿಗೆ ಕೋಚ್ ಬುಕ್ಕಿಂಗ್ ಮಾಡಲು ಈಗ ಹೆಚ್ಚಿನ ಸಮಸ್ಯೆಯಾಗುವುದಿಲ್ಲ, ಏಕೆಂದರೇ ರೈಲ್ವೆ ಮಂಡಳಿಯ ಸೂಚನೆ ...

ನವದೆಹಲಿ: ಧಾರ್ಮಿಕ ಯಾತ್ರೆ ಹಾಗೂ ವಿವಾಹ ಕಾರ್ಯಕ್ರಮಗಳಿಗೆ ಬೋಗಿ  ಬುಕ್ಕಿಂಗ್ ಮಾಡಲು ಈಗ ಹೆಚ್ಚಿನ ಸಮಸ್ಯೆಯಾಗುವುದಿಲ್ಲ, ಏಕೆಂದರೇ ರೈಲ್ವೆ ಮಂಡಳಿಯ ಸೂಚನೆ ಮೇರೆಗೆ ಆನ್ ಲೈನ್ ನಲ್ಲೇ ಇನ್ನು ಮುಂದೆ ಬುಕ್ಕಿಂಗ್ ಮಾಡಬಹುದಾಗಿದೆ.
ರೈಲ್ವೆ ಮಂಡಳಿಯ ಸುತ್ತೋಲೆ ಪ್ರಕಾರ, ವಿಶೇಷ ರೈಲು,  ಬೋಗಿ , ಸಲೂನ್ ಗಳನ್ನು ಪೂರ್ಣ ದರದಲ್ಲಿ ಏಕಗವಾಕ್ಷಿ ಬುಕ್ಕಿಂಗ್ ವ್ಯವಸ್ಥೆ ಮೂಲಕ ಕಾಯ್ದಿರಿಸಬಹುದಾಗಿದೆ. ವಿಶೇಷ ರೈಲು ಹಾಗೂ ಕೋಚ್ ಗಳ ಅಗತ್ಯವಿರುವವರು ಎಫ್ ಟಿಆರ್ ಮೂಲಕ  ಆನ್ ಲೈನ್ ನಲ್ಲಿ ಐಆರ್ ಸಿಟಿಸಿಯಲ್ಲಿ ಬುಕಿಂಗ್ ಮಾಡಬಹುದಾಗಿದೆ ಎಂದು ಸುತ್ತೊಲೆ ಹೊರಡಿಸಲಾಗಿದೆ.
ಈ ಮೊದಲು ಇಂತ  ಬೋಗಿ ಗಳು ಹಾಗೂ ವಿಶೇಷ ರೈಲು  ಬೇಕಾದಾಗ, ಸ್ಟೇಷನ್ ಮಾಸ್ಟರ್, ಅಥವ್ ಮುಖ್ಯ ಬುಕ್ಕಿಂಗ್ ಮೇಲ್ವಿಚಾರಕರಿಂದ ಮಾಡಿಸಬೇಕಿತ್ತು, ಎಲ್ಲಿಂದ ಪ್ರಯಾಣ, ಎಲ್ಲಿಗೆ ಪ್ರಯಾಣಿಸಬೇಕು ಎಂಬ ಮಾಹಿತಿಯನ್ನು ಬರೆದು ಬರೆದು ಬುಕ್ಕಿಂಗ್ ಮಾಡಿಸಲು ಮನವಿ ಮಾಡಲಾಗುತ್ತಿತ್ತು.
ಹಣ ಡಿಪಾಸಿಟ್ ಮಾಡಿದ ನಂತರ, ಅವರು ರಸೀದಿ ನೀಡುತ್ತಿದ್ದು ಅದರಲ್ಲಿ ಎಫ್ ಟಿ ಆರ್ ನಂಬರ್ ಮುದ್ರಿಸಿಕೊಡಲಾಗುತ್ತಿತ್ತು.ಈ ಪ್ರಕ್ರಿಯೆ ತೀರ ವಿಳಂಬವಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಹು ರಾಷ್ಚ್ರೀಯ ಕಂಪನಿಗಳ ಸಿಬ್ಬಂದಿಯ ಪ್ರವಾಸ, ಧಾರ್ಮಿಕ ಯಾತ್ರೆ, ವಿವಾಹ ಕಾರ್ಯಕ್ರಮ,  ಶೈಕ್ಷಣಿಕ ಪ್ರವಾಸಗಳಿಗೆ ವಿಶೇಷ ಟ್ರೈನ್ ಮತ್ತು  ಬೋಗಿ ಗಳನ್ನು ಟ್ರಾವೆಲ್ ಏಜೆನ್ಸಿ ಮೂಲಕ ಬುಕ್ಕಿಂಗ್ ಮಾಡಿಸಲಾಗುತ್ತಿತ್ತು.
ಶೇ. 5ರಷ್ಟು ಸೇವಾಶುಲ್ಕವನ್ನು ಈಗ ಕಡಿತಗೊಳಿಸಲಾಗಿದೆ, ಇಂಥಹ ಬುಕ್ಕಿಂಗ್  ಮೇಲೆ ಶೇ 30 ರಷ್ಟು ಸೇವಾ ಶುಲ್ಕ ವಿಧಿಸಲಾಗುತ್ತಿತ್ತು.
ಇಂಥಹ ಬುಕ್ಕಿಂಗ್ ಗೆ ರೈಲ್ವೆ ಇಲಾಖೆ ಭದ್ರತೆಗಾಗಿ 50 ಸಾವಿರ ರು ಡೆಪಾಸಿಟ್ ನಿಗದಿ ಪಡಿಸಿದೆ. ಎಲ್ಲಾ ವ್ಯವಹಾರಗಳು ಆನ್ ಲೈನ್ ನಲ್ಲಿ ನಡೆಯಲಿದ್ದು ಹೊಸ ಆನ್ ಲೈನ್ ವ್ಯವಸ್ಥೆ ಶೀಘ್ರವೇ ಡಿಜಿಟಲೀಕರಣ ಗೊಳ್ಳಲಿದೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT