ಕಳಪೆ ಬೀಚುಗಳು: ಕರ್ನಾಟಕಕ್ಕೆ ಎರಡನೇ ಸ್ಥಾನ:, ಸಂಶೋಧನಾ ವರದಿ 
ದೇಶ

ಕಳಪೆ ಬೀಚುಗಳು, ಕರ್ನಾಟಕಕ್ಕೆ ಎರಡನೇ ಸ್ಥಾನ: ಸಂಶೋಧನಾ ವರದಿ

ಭಾರತದಲ್ಲಿ ಗೋವಾ ಬೀಚ್ ಗಳ ಬಳಿಕ ಅತ್ಯಂತ ಕಳಪೆ ಗುಣಮಟ್ಟದ ಬೀಚ್ ಗಳು ಕರ್ನಾಟಕದಲ್ಲಿದೆ ಎನ್ನುವ ಕಳವಳಕಾರಿ ಅಂಶವೊಂದು ಸಂಶೋಧನಾ ವರದಿಯಿಂದ ಬಹಿರಂಗವಾಗಿದೆ.

ಮುಂಬೈ: ಭಾರತದಲ್ಲಿ ಗೋವಾ ಬೀಚ್ ಗಳ ಬಳಿಕ ಅತ್ಯಂತ ಕಳಪೆ ಗುಣಮಟ್ಟದ ಬೀಚ್ ಗಳು ಕರ್ನಾಟಕದಲ್ಲಿದೆ ಎನ್ನುವ ಕಳವಳಕಾರಿ ಅಂಶವೊಂದು ಸಂಶೋಧನಾ ವರದಿಯಿಂದ ಬಹಿರಂಗವಾಗಿದೆ. ಬೀಚ್ ಗಳಲ್ಲಿ ಅತಿ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯಗಳು ಸಂಗ್ರಹವಾಗಿರುವ ಎರಡನೇ ರಾಜ್ಯ ಕರ್ನಾಟಕವೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೇರಳ ಕೊಚ್ಚಿಯ ಕೇಂದ್ರ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ಸಿಎಂಎಫ್‍ಆರ್ ಐ) ಈ ವರದಿ ತಯಾರಿಸಿದ್ದು ದೇಶದ ಹನ್ನೊಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದೆ.
ಕರ್ನಾಟಕದ 33 ಬೀಚುಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯಗಳಿದೆ. ಇಲ್ಲಿನ ಒಂದು ಮೀಟರ್ ಮರಳಿನಲ್ಲಿ 21.91 ಗ್ರಾಂ ಪ್ಲಾಸ್ಟಿಕ್ ಅವಶೇಷಗಳಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇನ್ನು ರಾಷ್ಟ್ರದಲ್ಲಿ ಅತ್ಯಂತ ಕಳಪೆಯಾಗಿರುವ ಗೋವಾ ಬೀಚ್ ಗಳಲ್ಲಿ ಒಂದು ಮೀಟರ್ ಮರಳಿನಲ್ಲಿ 25.47 ಗ್ರಾಂ ಪ್ಲಾಸ್ಟಿಕ್ ತ್ಯಾಜ್ಯ ದೊರೆಯುತ್ತದೆ. ಗೋವಾದ ಬೀಚ್ ನಲ್ಲಿ  ನೈಲಾನ್ ಫಿಶಿಂಗ್ ನೆಟ್, ಗ್ಲಾಸ್, ಇ-ತ್ಯಾಜ್ಯ, ಥರ್ಮೋಕೋಲ್  ನಂತಹಾ ಹಾನಿಕಾರಕ ವಸ್ತುಗಳು ಕಂಡುಬಂದಿದೆ.
ಕರ್ನಾಟಕದ ಬೀಚ್ ಗಳಲ್ಲಿ ಕಸ ಅತ್ಯಧಿಕವಾಗಿದ್ದು ಪ್ರತಿ ಮೀಟರ್ ಗೆ 178.44 ಗ್ರಾಂ ಕಸ ಕಂಡುಬರುತ್ತದೆ.
ಇನ್ನು ಗೋವಾ ಹಾಗೂ ಕರ್ನಾಟಕದ ಬಳಿಕ ಗುಜರಾತ್ ರಾಜ್ಯದ ಕರಾವಳಿ ತೀರಗಳು ಅತ್ಯಂತ ಕಳಪೆಯಾಗಿದೆ ಎಂದಿರುವ ವರದಿ ಗುಜರಾತ್ ನಲ್ಲಿ ಕಸದ ಪ್ರಮಾಣ ಪ್ರತಿ ಮೀಟರ್ ಗೆ 90.56 ಗ್ರಾಂನಷ್ಟಿದೆ ಎಂದಿದೆ. ಇಷ್ಟೇ ಅಲ್ಲದೆ ಗುಜರಾತ್ ಕಡಲ ತೀರದಲ್ಲಿ ಪ್ರತಿ ಮೀಟರ್ ಮರಳಿನಲ್ಲಿ 12.62 ಗ್ರಾಂ ಪ್ಲಾಸ್ಟಿಕ್ ಕಂಡುಬರುತ್ತದೆ ಎಂದು ಉಲ್ಲೇಖಿಸಲಾಗಿದೆ.
ಒಟ್ಟು ಹನ್ನೆರಡು ಮಂದಿ ತಂಡವು ದೇಶದ 254 ಬೀಚ್ ಗಳಲ್ಲಿ ಈ ಸಮೀಕ್ಷೆ  ನಡೆಸಿ ವರದಿ ಪ್ರಕಟಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?