ರಜನಿಕಾಂತ್ ಡಿಎಂಕೆ ನಾಯಕ ಕರುಣಾನಿಧಿ ಭೇಟಿ 
ದೇಶ

ತಮಿಳುನಾಡು ರಾಜಕೀಯದಲ್ಲಿ ಆಧ್ಯಾತ್ಮಕ್ಕೆ ಅವಕಾಶವಿಲ್ಲ: ರಜಿನಿಗೆ ಸ್ಟ್ಯಾಲಿನ್ ಟಾಂಗ್

ತಮಿಳುನಾಡು ರಾಜಕೀಯದಲ್ಲಿ ಆಧ್ಯಾತ್ಮಕ್ಕೆ ಅವಕಾಶವಿಲ್ಲ ಎಂದು ಡಿಎಂಕೆ ನಾಯಕ ಸ್ಟ್ಯಾಲಿನ್ ಇತ್ತೀಚೆಗಷ್ಟೇ ರಾಜಕಾರಣಕ್ಕೆ ಪ್ರವೇಶಿಸಿರುವ ರಜಿನಿಕಾಂತ್ ಗೆ ಟಾಂಗ್ ನೀಡಿದ್ದಾರೆ.

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಆಧ್ಯಾತ್ಮಕ್ಕೆ ಅವಕಾಶವಿಲ್ಲ ಎಂದು ಡಿಎಂಕೆ ನಾಯಕ ಸ್ಟ್ಯಾಲಿನ್ ಇತ್ತೀಚೆಗಷ್ಟೇ ರಾಜಕಾರಣಕ್ಕೆ ಪ್ರವೇಶಿಸಿರುವ ರಜಿನಿಕಾಂತ್ ಗೆ ಟಾಂಗ್ ನೀಡಿದ್ದಾರೆ. 
ರಜನಿಕಾಂತ್ ಡಿಎಂಕೆ ನಾಯಕ ಕರುಣಾನಿಧಿ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಸ್ಟ್ಯಾಲಿನ್ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. ತಮಿಳುನಾಡು ದ್ರಾವಿಡ ಚಳುವಳಿಯ ನಾಡು, ಇಲ್ಲಿ ಆಧ್ಯಾತ್ಮಕ್ಕೆ ಅವಕಾಶವಿಲ್ಲ ಎಂದು ಸ್ಟ್ಯಾಲಿನ್ ಹೇಳಿದ್ದಾರೆ. 
ತಮಿಳುನಾಡು ದ್ರಾವಿಡ ಚಳುವಳಿಯ, ಪೆರಿಯಾರ್ ನ ಭೂಮಿ, ಇಲ್ಲಿನ ರಾಜಕಾರಣದಲ್ಲಿ ಆಧ್ಯಾತ್ಮ ಕೆಲಸ ಮಾಡುವುದಿಲ್ಲ ಎಂದು ಸ್ಟ್ಯಾಲಿನ್ ಅಭಿಪ್ರಾಯಪಟಿದ್ದಾರೆ. ಕರುಣಾನಿಧಿ ಭೇಟಿ ವೇಳೆ ರಜಿನಿಕಾಂತ್ ಡಿಎಂಕೆ ಬೆಂಬಲ ಕೇಳಿದರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಸ್ಟ್ಯಾಲಿನ್ ಅವೆಲ್ಲಾ ಚುನಾವಣೆಯ ಸಂದರ್ಭದಲ್ಲಿ ನಿರ್ಧಾರವಾಗುವ ವಿಷಯಗಳಷ್ಟೇ ಎಂದಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತ್ರಿಶಾ ವಿರುದ್ಧ ಡಬಲ್ ಮೀನಿಂಗ್ ಹೇಳಿಕೆ: ವಿಚಾರಣೆ ಬಳಿಕ ಠಾಣೆಯಿಂದ ಉದಯನಿಧಿ ಬಿಡುಗಡೆ, ಅಭಿಮಾನಿಗಳಿಂದ ಸಂಭ್ರಮ!

585.72 ಕೋಟಿ ರೂ. ಬೆಳೆ ವಿಮೆ ಪರಿಹಾರ ವಿತರಣೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಗಜಿನಿ, ಲಗಾನ್ ಚಿತ್ರದಲ್ಲಿ ನಟಿಸಿದ್ದ ಖ್ಯಾತ ಖಳನಾಯಕ ಪ್ರದೀಪ್ ರಾವತ್‌ ನಿಧನ

ಅಶ್ಲೀಲ ಜೋಕ್‌ಗಳು ಸ್ವೀಕಾರಾರ್ಹವಲ್ಲ; ಉದಯನಿಧಿ ವಿರುದ್ಧದ ಪೊಲೀಸರ ಕ್ರಮ ಸರಿಯಾಗಿದೆ: ನಟಿ ಕಂಗನಾ ರಣಾವತ್

ದ್ವೇಷ ಭಾಷಣ: ಪಿಎಫ್‌ಐ ನಾಯಕನಿಗೆ ಆರು ತಿಂಗಳು ಜೈಲು ಶಿಕ್ಷೆ