ಸಾಂದರ್ಭಿಕ ಚಿತ್ರ 
ದೇಶ

ತಮಿಳುನಾಡು: ಪೊಂಗಲ್ ಗೆ ಮಧುರೈಯಲ್ಲಿ ಜಲ್ಲಿಕಟ್ಟು ಕ್ರೀಡೆ ಆರಂಭ

ಸಂಕ್ರಾಂತಿ ಕಾಲದಲ್ಲಿ ತಮಿಳು ನಾಡಿನ ಖ್ಯಾತ ಗೂಳಿಯ ಜಲ್ಲಿಕಟ್ಟು ಮೂರು ದಿನಗಳ ...

ಮಧುರೈ: ಸಂಕ್ರಾಂತಿ ಕಾಲದಲ್ಲಿ ತಮಿಳು ನಾಡಿನ ಖ್ಯಾತ ಗೂಳಿಯ ಜಲ್ಲಿಕಟ್ಟು ಮೂರು ದಿನಗಳ ಕ್ರೀಡೆ ಆರಂಭಗೊಂಡಿದೆ.
ಈ ವರ್ಷ ಜಲ್ಲಿಕಟ್ಟಿನಲ್ಲಿ ಸುಮಾರು 1000 ಗೂಳನ್ನು ಪಳಗಿಸುವವರು ಮತ್ತು 3,000 ಗೂಳಿಗಳು ಭಾಗವಹಿಸುವ ನಿರೀಕ್ಷೆಯಿದೆ.
ತಮಿಳುನಾಡಿನ ಮಧುರೈಯಲ್ಲಿ ಪ್ರತಿವರ್ಷ ಪೊಂಗಲ್ ಹಬ್ಬದ ಸಮಯದಲ್ಲಿ ಜಲ್ಲಿಕಟ್ಟು ಕ್ರೀಡೆ ನಡೆಯುತ್ತದೆ.
ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸುವವರು ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಕಳೆದ ವಾರ ಮಧುರೈ ಜಿಲ್ಲಾಡಳಿತ ಕಡ್ಡಾಯ ಮಾಡಿತ್ತು. ಆದರೆ ಭಾಗವಹಿಸುವವರಿಂದ ತೀವ್ರ ಪ್ರತಿಭಟನೆ ಕೇಳಿಬಂದ ಹಿನ್ನೆಲೆಯಲ್ಲಿ ಆದೇಶವನ್ನು ಹಿಂತೆಗೆದುಕೊಳ್ಳಲಾಗಿತ್ತು. 
ತಮಿಳು ನಾಡಿನಾದ್ಯಂತ ಇಂದು ಜನರು ಪೊಂಗಲ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಮಳೆ, ಸೂರ್ಯದೇವರು ಮತ್ತು ಎತ್ತುಗಳನ್ನು ಪೂಜಿಸುತ್ತಿದ್ದಾರೆ.
ಜನರು ಬೆಳಗ್ಗೆಯೇ ಎದ್ದು ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ.
ಗೇರು ಬೀಜವನ್ನು ತುಪ್ಪದಲ್ಲಿ ಹುರಿದು, ಬಾದಾಮಿ ಮತ್ತು ಏಲಕ್ಕಿಯ ಘಮ ಮನೆಯಿಡೀ ಪಸರಿಸುತ್ತಿದೆ. ಅನ್ನ, ಬೆಲ್ಲ ಮತ್ತು ಕಡಲೆಯನ್ನು ತಯಾರಿಸಲಾಗಿದೆ.
ಮಣ್ಣಿನ ಮಡಕೆ ಅಥವಾ ಸ್ಟೈನ್ ಲೆಸ್ ಸ್ಟೀಲ್ ನ್ನು ಖಾದ್ಯ ತಯಾರಿಸಲು ಇಂದು ಬಳಸುತ್ತಿದ್ದು, ಪಾತ್ರವನ್ನು ಹೊರಗಿನಿಂದ ಶುಂಠಿ, ಅರಶಿನ, ಕಬ್ಬು ಮತ್ತು ಬಾಳೆಹಣ್ಣುಗಳಿಂದ ಅಲಂಕರಿಸಲಾಗುತ್ತದೆ.
ಸೂರ್ಯದೇವರಿಗೆ ಪೊಂಗಲ್ ನ್ನು ನೇವೇದ್ಯ ಮಾಡಿ ಪ್ರಸಾದವೆಂದು ಸ್ವೀಕರಿಸಲಾಗುತ್ತದೆ. ಜನರು ತಮ್ಮ ಮನೆಯಲ್ಲಿ ಮಾಡಿರುವ ಎಳ್ಳು, ಬೆಲ್ಲ, ನೇವೇದ್ಯ ಪ್ರಸಾದಗಳನ್ನು ನೆರೆಹೊರೆಯವರೊಂದಿಗೆ ಹಂಚಿ ತಿನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT