ದೇಶ

ಕೇರಳದ ಮಹಾರಾಜ ಕಾಲೇಜ್ ಆವರಣದಲ್ಲಿ ಎಸ್ಎಫ್ಐ ಮುಖಂಡನ ಬರ್ಬರ ಹತ್ಯೆ, ಪ್ರಕ್ಷುಬ್ಧ ವಾತಾವರಣ!

Vishwanath S
ಕೊಚ್ಚಿ: ಕೇರಳದ ಮಹಾರಾಜ ಕಾಲೇಜಿನಲ್ಲಿ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಸದಸ್ಯರು ಭಾರತ ವಿದ್ಯಾರ್ಥಿ ಒಕ್ಕೂಟ(ಎಸ್ಎಫ್ಐ)ದ ಮುಖಂಡನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. 
ಎಸ್ಎಫ್ಐ ಮುಖಂಡನ ಹತ್ಯೆ ಸಂಬಂಧ ಪಿಎಫ್ಐನ ಮೂವರು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಹಲ್ಲೆ ವೇಳೆ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಆ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. 
ಎಸ್ಎಫ್ಐ ಮುಖಂಡ 20 ವರ್ಷದ ಅಭಿಮನ್ಯು ಹತ್ಯೆ ಖಂಡಿಸಿ ಎಸ್ಎಫ್ಐ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿವೆ. 
ಮೃತ ಅಭಿಮನ್ಯು ಇಡುಕಿ ಜಿಲ್ಲೆಯ ವಟ್ಟವಾಡದ ನಿವಾಸಿಯಾಗಿದ್ದು ಕಾಲೇಜಿನಲ್ಲಿ ದ್ವಿತೀಯ ವರ್ಷದ ಡಿಗ್ರಿ ವಿದ್ಯಾರ್ಥಿಯಾಗಿದ್ದರು. 
SCROLL FOR NEXT