ದೇಶ

ಇದೇ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ಬೃಹತ್ ನಮಾಜ್, ಕುರಾನ್ ಪಠಣ: ಆರ್ ಎಸ್ ಎಸ್ ಆಯೋಜನೆ

Raghavendra Adiga
ನವದೆಹಲಿ: ಅಯೋಧ್ಯೆ  ಪಟ್ಟಣದ ಇತಿಹಾಸದಲ್ಲಿ ಮೊದಲ ಬಾರಿಗೆ ಸರಯೂ ನದಿ ದಂಡೆಯಲ್ಲಿ ಬೃಹತ್ ಸಾಮೂಹಿಕ ನಮಾಜ್ ಹಾಗು ಇಸ್ಲಾಂ ಪವಿತ್ರ  ಗ್ರಂಥ ಕುರಾನ್ ಪಠಣ ಕಾರ್ಯಕ್ರಮ ನಡೆಯಲಿದೆ.
ವಿಶೇಷವೆಂದರೆ ರಾಷ್ಟ್ರೀಯ ಸ್ವಯಂಸೇವಾ ಸಂಘ ಹಾಗೂ ಅದರ ಮುಸ್ಲಿಮ್ ವಿಭಾಗ - ರಾಷ್ಟ್ರೀಯ ಮುಸ್ಲಿಂ ಮಂಚ್ ಈ ಕಾರ್ಯಕ್ರಮ ಆಯೋಜನೆ ಮಾಡಲಿದೆ. ಈ ಬೃಹತ್ ಪ್ರಾರ್ಥನೆ, ಕುರಾನ್ ಪಠಣ ಕಾರ್ಯಕ್ರಮವು ಇದೇ ಜುಲೈ 12 ನಡೆಯಲಿದೆ.
 ಹಿಂದೂ ಭಕ್ತರ ಜೊತೆಗೆ ಸುಮಾರು 1,500 ಮುಸ್ಲಿಮ್ ಉಲೇಮಾಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಸೂಫಿ ಸಂತರ ಸಮಾಧಿಗಳಿಗೆ ಸಹ ಅವರು ತೆರಳಲಿದ್ದಾರೆ.
ಉಲೇಮಾಗಳು ಮೊದಲಿಗೆ ವಾಝು (ಶುದ್ಧೀಕರಣ) ನಡೆಸಿ ನಂತರ ನಮಾಜ್ ನೆರವೇರಿಸುವರು. ಬಳಿಕ ಪವಿತ್ರ ಕುರಾನ್ ನ ಶ್ಲೋಕಗಳನ್ನು 5 ಲಕ್ಷ ಬಾರಿ ಪಠಿಸಲಾಗುವುದು. ಸರಯೂ ನದಿ ದಂಡೆಯ  ರಾಮ್ ಕಿ ಪೈದಿ ಘಾಟ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮವು ಶಾಂತಿ ಮತ್ತು ಸಹೋದರತ್ವದ ಸಂದೇಶವನ್ನು ಸಾರಲಿದೆ. ಹಾಗೆಯೇ ಆರ್ ಎಸ್ ಎಸ್ ತಾನು ಮುಸ್ಲಿಂ ವಿರೋಧಿ ಎನ್ನುವ ಹಣೆಪಟ್ಟಿಯಿಂದ ಹೊರಬರಲು ಸಹಕಾರಿಯಾಗಿದೆ ಎಂದು ಭಾವಿಸಲಾಗುತ್ತಿದೆ.
SCROLL FOR NEXT