ಅಸಿಸ್ಟೆಂಟ್ ಪ್ರೋಫೆಸರ್ ನಿರ್ಮಲಾ ದೇವಿ, ಕಾಲೇಜು 
ದೇಶ

ಮಧುರೈ ಕಾಮರಾಜ ವಿವಿ ಲೈಂಗಿಕ ಹಗರಣ: ಜಾರ್ಜ್ ಶೀಟ್ ದಾಖಲು

ದೇವಾಂಗ ಕಲಾ ಕಾಲೇಜಿನ ಸಹಾಯಕ ಪ್ರೋಫೆಸರ್ ನಿರ್ಮಲಾ ದೇವಿ ಕೆಲ ಯುವತಿಕರಿಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿ- ಸಿಐಡಿ ಘಟಕ ಇಲ್ಲಿನ ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ 1160 ಪುಟಗಳ ಜಾರ್ಜ್ ಶೀಟ್ ದಾಖಲಿಸಿದೆ.

ವಿರುದ್ ನಗರ್ : ಹಿರಿಯ ಅಧಿಕಾರಿಗಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ದೇವಾಂಗ ಕಲಾ ಕಾಲೇಜಿನ  ಸಹಾಯಕ ಪ್ರೋಫೆಸರ್  ನಿರ್ಮಲಾ ದೇವಿ ಕೆಲ ಯುವತಿಕರಿಗೆ  ಪ್ರಚೋದನೆ  ನೀಡಿದ   ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿ- ಸಿಐಡಿ ಘಟಕ  ಇಲ್ಲಿನ  ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ 1160 ಪುಟಗಳ ಜಾರ್ಜ್ ಶೀಟ್ ದಾಖಲಿಸಿದೆ.
ಈ ಪ್ರಕರಣ ಸಂಬಂಧ ನಿರ್ಮಲಾ ದೇವಿ ದೂರವಾಣಿ ಮೂಲಕ ನಡೆಸಿದ ಸಂಭಾಷಣೆ ತಮಿಳುನಾಡು ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಏಪ್ರಿಲ್ 16 ರಂದು ನಿರ್ಮಲಾ ದೇವಿಯನ್ನು ಬಂಧಿಸಿದ ಪೊಲೀಸರು , ಪ್ರಕರಣವನ್ನು ಸಿಬಿ- ಸಿಐಡಿ ಘಟಕಕ್ಕೆ ವಹಿಸಿದ್ದರು.
ಸಿಬಿ-ಸಿಐಡಿ ಘಟಕದ ಎಸ್ಪಿ ರಾಜೇಶ್ವರಿ ನೇತೃತ್ವದ ತಂಡ ಏ.19 ರಂದು ತನಿಖೆ ನಡೆಸುತ್ತಿದೆ. ನಿರ್ಮಲಾ ದೇವಿ  ತಪ್ಪೊಪ್ಪಿಕೆ ಹೇಳಿಕೆ ಆಧಾರದ ಮೇಲೆ  ಮಧುರೈ ಕಾಮರಾಜ ಕಾಲೇಜಿನ  ವಿದ್ಯಾರ್ಥಿ ಕರುಪ್ಪಯ್ಯ  ಹಾಗೂ ಅಸ್ಟಿಸ್ಟೆಂಟ್ ಪ್ರೊಫೆಸರ್  ವಿ. ಮುರುಗನ್ ಎಂಬವರನ್ನು  ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಸಿಬಿ- ಸಿಐಡಿ ತಂಡ ಮಧುರೈ ಕಾಮರಾಜ ಕಾಲೇಜಿನ ಅಧಿಕಾರಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ದೇವಾಂಗ ಕಲಾ, ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದ್ದು,  ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.
ನಿರ್ಮಲಾ ದೇವಿ, ಮುರುಗನ್, ಕುರುಪ್ಪಯ್ಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅವರು ಜಾಮೀನಿಗಾಗಿ  ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ.
ಚೆನ್ನೈನಲ್ಲಿ ನಿರ್ಮಲಾ ದೇವಿ ಧ್ವನಿ ಪರೀಕ್ಷೆ ನಡೆಸಲಾಗಿದ್ದು,  ಆಡಿಯೋದಲ್ಲಿರುವ  ಧ್ವನಿ ನಿರ್ಮಲಾ ದೇವಿಯದ್ದೇ ಎಂದು ಮದ್ರಾಸ್ ಹೈಕೋರ್ಟಿನ ಮಧುರೈ ಪೀಠ, ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಪಷ್ಟಪಡಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

JPSC-PT ರದ್ದುಗೊಳಿಸಲು ಜಾರ್ಖಂಡ್ ಸರ್ಕಾರ ಒಪ್ಪಿದರೂ 6ನೇ ಸುತ್ತಿನ ಮಾತುಕತೆ ವಿಫಲ; ಪ್ರತಿಭಟನೆ ಮುಂದುವರಿಕೆ!

"ಹಮಾಸ್ ನಿಶ್ಯಸ್ತ್ರಗೊಳಿಸುವುದೇ ಅಂತಿಮ ಗುರಿ": ಟ್ರಂಪ್ ಗಾಜಾ ಶಾಂತಿ ಯೋಜನೆ ತಿರಸ್ಕರಿಸಿದ ಇಸ್ರೇಲ್!

ಪಾಕಿಸ್ತಾನಿಗಳು ಭಾರತೀಯರ ಸಂಪೂರ್ಣ ಬದ್ಧ ವೈರಿಗಳಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್

ಆಗಸ್ಟ್ 13ರಿಂದ ವಿಧಾನಮಂಡಲ ಅಧಿವೇಶನ: ಟಿ.ಬಿ ಜಯಚಂದ್ರ ಹಂಗಾಮಿ ಸಭಾಧ್ಯಕ್ಷ

ರಷ್ಯಾ-ಭಾರತ ನಡುವೆ ನೇರ ರೈಲು ಸಂಪರ್ಕ? ರಷ್ಯಾದಿಂದ ಮಹತ್ವದ ಪ್ರಸ್ತಾವನೆ!