ಉಜ್ಜೈನಿ : ಇತ್ತೀಚಿಗೆ ಮಾಂಡಸೂರ್ ನ ರೈತರನ್ನು ಭೇಟಿ ಮಾಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ವಾಗ್ದಾಳಿ ನಡೆಸಿದ್ದಾರೆ. ಈರುಳ್ಳಿ ಹೇಗೆ ಬೆಳೆಯುತ್ತದೆ ಎಂಬ ಬಗ್ಗೆಯೂ ರಾಹುಲ್ ಗಾಂಧಿ ಅವರಿಗೆ ಗೊತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಸಮಾರಂಭವೊಂದರಲ್ಲಿ ಮಾತನಾಡಿದ ಶಿವರಾಜ್ ಸಿಂಗ್ ಚೌಹ್ಹಾಣ್ , ರಾಹುಲ್ ಗಾಂಧಿ ತಮ್ಮಷ್ಟಕ್ಕೆ ತಾವೇ ಪ್ರಧಾನಿಯಾಗಲು ಸಿದ್ಧವಿರುವುದಾಗಿ ಹೇಳುತ್ತಿದ್ದಾರೆ. ಆದರೆ. ಅವರನ್ನು ಪ್ರಧಾನಿಯನ್ನಾಗಿ ಯಾರು ಮಾಡುತ್ತಾರೆ ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿಗೆ ಮೆಣಸಿನ ಕಾಯಿ ಹೇಗೆ ಬೆಳೆಯುತ್ತದೆ, ಮೇಲೆನಾ ಅಥವಾ ಕೆಳಗೆ ಬೆಳೆಯುತ್ತಾ ಅನ್ನೋ ಬಗ್ಗೆ ಅರಿವಿಲ್ಲ. ಈರುಳ್ಳಿ ನೆಲದ ಒಳಗೆ ಬೆಳೆಯುತ್ತಾ ಅಥವಾ ಮೇಲೆ ಬೆಳೆಯುತ್ತಾ ಎಂಬ ಬಗ್ಗೆ ರಾಹುಲ್ ಗಾಂಧಿ ಗೆ ಗೊತ್ತೇ ಇಲ್ಲ ಎಂದು ಟೀಕಿಸಿದರು.