ದೇಶ

ಮತಾಂತರಗೊಳ್ಳುವ ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ನಿಷೇಧಿಸಬೇಕು; ಬಿಜೆಪಿ ಸಂಸದ

Manjula VN
ಜಗ್ದಾಲ್ಪುರ: ಮತಾಂತರಗೊಂಡು ಧರ್ಮ ಬದಲಿಸಿಕೊಳ್ಳುವ ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ನಿಷೇಧಿಸಬೇಕೆಂದು ಬಿಜೆಪಿ ಸಂಸದ ದಿನೇಶ್ ಕಶ್ಯಪ್ ಅವರು ಸೋಮವಾರ ಹೇಳಿದ್ದಾರೆ. 
ಸಾರ್ವಜನಿಕ ರ್ಯಾಲಿಯೊಂದರಲ್ಲಿ ಮಾತನಾಡಿರುವ ಅವನರು, ಮತಾಂತರಗೊಳ್ಳುತ್ತಿರುವುದೇ ದೊಡ್ಡ ಸಮಸ್ಯೆಯಾದಿ ಪರಿಣಮಿಸಿದೆ. ಮತಾಂತರಗೊಳ್ಳುವ ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ನಿಷೇಧಿಸಬೇಕು ಎಂದು ಹೇಳಿದ್ದಾರೆ. 
ಪ್ರಮುಖವಾಗಿ ಧರ್ಮ ಬದಲಿಸಿಕೊಳ್ಳುವ ಆದಿವಾಸಿಗಳಿಗೆ ಸರ್ಕಾರಿ ಸೌಲಭ್ಯಗಳನ್ನು ನಿಷೇಧಿಸಬೇಕು ಎಂದು ತಿಳಿಸಿದ್ದಾರೆ. 
ಈ ಹೇಳಿಕೆಗೆ ಕೆಲ ಪರ ಹಾಗೂ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾದ ಬಳಿಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಕಶ್ಯಪ್ ಅವರು, ಇದು ನನ್ನ ವೈಯಕ್ತಿಕ ಅಭಿಪ್ರಾಯ. ಮತಾಂತರಗೊಳ್ಳುವ ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ನಿಷೇಧಿಸಬೇಕು. ಇದನ್ನು ಅನುಸರಿಸುವುದು ಉತ್ತಮವಾಗಿರುತ್ತದೆ. ಈ ರೀತಿಯ ನಿರ್ಧಾರದಿಂದ ಮತಾಂತರಗೊಳ್ಳುವ ಸಂಖ್ಯೆಗಳೂ ಕೂಡ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ. 
SCROLL FOR NEXT