ದೇಶ

ಉತ್ತರ ಪ್ರದೇಶದ ಹಿಂದೂ ಕುಟುಂಬಗಳ ವಲಸೆ ಬಗ್ಗೆ ಮಾಹಿತಿ ಇಲ್ಲ: ಕೇಂದ್ರ ಸ್ಪಷ್ಟನೆ

Raghavendra Adiga
ನವದೆಹಲಿ: ಉತ್ತರ ಪ್ರದೇಶದ ಪಶ್ಚಿಮ ಭಾಗದ ಹಿಂದೂಗಳ ವಲಸೆ ಸಂಬಂಧ ಯಾವ ಅಧಿಕೃತ ವರದಿಗಳಿಲ್ಲ ಎಂದು  ಕೇಂದ್ರ ಸಚಿವ ಹಂಸರಾಜ್ ಗಂಗರಾಮ್ ಅಹಿರ್ ರಾಜ್ಯಸಭೆಗೆ ತಿಳಿಸಿದ್ದಾರೆ.
ಹಿಂದೂ ಕುಟುಂಬಗಳ ವಲಸೆ ಕುರಿತಂತೆ ಪರಿಶೀಲಿಸಲು ಸರಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಕೇಳಲಾದ  ಲಿಖಿತ ಪ್ರಶ್ನೆಗೆ ಅಹೀರ್ ಈ ಉತ್ತರ ನೀಡಿದ್ದಾರೆ.
ಉತ್ತರ ಪ್ರದೇಶದ ಸರ್ಕಾರದಿಂದ ಈ ವರದಿ ಬಂದಿದೆ. ವರದಿ ಪ್ರಕಾರ, ಉತ್ತರ ಪ್ರದೇಶದ ದಿಯೋಬಾಂದ್-ಸಹ್ರಾಮ್ ಪುರ ಪ್ರದೇಶದ ಬನ್ಹೇರಾ ಖಾಸ್ ಗ್ರಾಮದಲ್ಲಿರುವ ಯಾವ ಹಿಂದೂ ಕುಟುಂಬವೂ ವಲಸೆಗೆ ಮುಂದಾಗಿಲ್ಲ ಎಂದು ಅಹೀರ್ ಹೇಳಿದ್ದಾರೆ.
SCROLL FOR NEXT