ರಾಕೇಶ್ ಸಿನ್ಹಾ, 
ದೇಶ

ರಾಜ್ಯಸಭೆಯ ಮೂವರು ನಾಮನಿರ್ದೇಶಿತ ಸದಸ್ಯರು ಪ್ರಮಾಣ ವಚನ ಸ್ವೀಕಾರ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ನಾಮನಿರ್ದೇಶಿತಗೊಂಡಿದ್ದ ಕವಿ ರಾಕೇಶ್ ಸಿನ್ಹಾ, ನೃತ್ಯಗಾರ್ತಿ ಸೊನಾಲ್ ಮಾನ್ ಸಿಂಗ್ ಹಾಗೂ ಶಿಲ್ಪಕಲೆ ಕಲಾವಿದ ರಘುನಾಥ್ ಮೊಹಾಪಾತ್ರ ಇಂದು ರಾಜ್ಯಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ನವದೆಹಲಿ : ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ  ನಾಮನಿರ್ದೇಶಿತಗೊಂಡಿದ್ದ ಕವಿ ರಾಕೇಶ್ ಸಿನ್ಹಾ, ನೃತ್ಯಗಾರ್ತಿ ಸೊನಾಲ್ ಮಾನ್ ಸಿಂಗ್ ಹಾಗೂ ಶಿಲ್ಪಕಲೆ ಕಲಾವಿದ  ರಘುನಾಥ್ ಮೊಹಾಪಾತ್ರ ಇಂದು ರಾಜ್ಯಸಭೆಯ ಸದಸ್ಯರಾಗಿ  ಪ್ರಮಾಣ ವಚನ ಸ್ವೀಕರಿಸಿದರು.

ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯನಾಯ್ಡು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.

ಜುಲೈ 14 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್,  ಮಾಜಿ ನಾಯಕ ರಾಕೇಶ್ ಶಕಲ್ ಸೇರಿದಂತೆ ನಾಲ್ವರನ್ನು  ರಾಜ್ಯಸಭೆಗೆ ನಾಮನಿರ್ದೇಶನಗೊಳಿಸಿದ್ದರು. ಆದರೆ. ಇಂದು  ರಾಕೇಶ್ ಸಿನ್ಹಾ, ನೃತ್ಯಗಾರ್ತಿ ಸೊನಾಲ್ ಮಾನ್ ಸಿಂಗ್ ಹಾಗೂ ಶಿಲ್ಪಕಲೆ ಕಲಾವಿದ  ರಘುನಾಥ್ ಮೊಹಾಪಾತ್ರ  ಪ್ರಮಾಣ ವಚನ ಸ್ವೀಕರಿಸಿದರು.

 ಒಡಿಶಾದ್ದ ಪ್ರಖ್ಯಾತ ಶಿಲ್ಪಕಲಾವಿದರಾಗಿರುವ ರಘುನಾಥ್ ಮೊಹಾಪಾತ್ರ ಪದ್ಮ ವಿಭೂಷ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. 1959 ರಿಂದಲೂ 2000 ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಪ್ರಸಿದ್ಧ ತೀರ್ಥಕ್ಷೇತ್ರ ಪುರಿ ಜಗನ್ನಾಥ ದೇವಾಲಯದಲ್ಲೂ ಸುಂದರ ಕೆತ್ತನೆ ಕೆಲಸ ಮಾಡಿದ್ದಾರೆ.

ರಾಕೇಶ್ ಸಿನ್ಹಾ, ಆರ್ ಎಸ್ ಎಸ್ ನಾಯಕರಾಗಿದ್ದು,  ದೆಹಲಿ ಮೂಲಕ ಭಾರತೀಯ ನೀತಿ ಪೌಂಢೇಷನ್ ನ   ಗೌರವಾನ್ವಿತ ನಿರ್ದೇಶಕರು ಹಾಗೂ ಚಿಂತಕರಾಗಿದ್ದಾರೆ.  ದೆಹಲಿ ವಿಶ್ವವಿದ್ಯಾಲಯದ ಮೊತಿಲಾಲ್ ನೆಹರೂ ಕಾಲೇಜಿನಲ್ಲಿ ಪ್ರೋಫೆಸರ್ ಆಗಿದ್ದಾರೆ. ಅಲ್ಲದೇ ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಸಮಿತಿಯ ಸದಸ್ಯರಾಗಿದ್ದಾರೆ.

ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿಯರಲ್ಲಿ ಒಬ್ಬರಾಗಿದ್ದಾರೆ. ಆರು ದಶಕಗಳಿಗೂ ಹೆಚ್ಚು ಕಾಲ ಭರತನಾಟ್ಯ ಹಾಗೂ ಒಡಿಶಿ ನೃತ್ಯ ಪ್ರದರ್ಶಿಸಿದ್ದಾರೆ. ಇವರು ಉತ್ತಮ ನೃತ್ಯ ಶಿಕ್ಷಕರು ಹಾಗೂ ಸಾಮಾಜಿಕ ಹೋರಾಟಗಾರರೂ ಆಗಿದ್ದಾರೆ.   1977ರಲ್ಲಿ ದೆಹಲಿಯಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ ಕೇಂದ್ರವನ್ನು ಸ್ಥಾಪಿಸಿದ್ದಾರೆ..

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT