ಮೇನಕಾ ಗಾಂಧಿ 
ದೇಶ

ತೃತೀಯ ಲಿಂಗಿಗಳನ್ನು 'ಇತರ'ರು’ ಎಂದು ಕರೆದದ್ದಕ್ಕಾಗಿ ಮೇನಕಾ ಗಾಂಧಿ ಕ್ಷಮೆ ಯಾಚನೆ

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಮನೇಕಾ ಗಾಂಧಿ ತಾವು ತೃತೀಲ ಲಿಂಗಿಗಳಿಗೆ ’ಇತರರು’ ಎಂದು ತಪ್ಪಾಗಿ ಪದ ಬಳಕೆ ಮಾಡಿದುದಕ್ಕೆ ಲೋಕಸಭೆಯಲ್ಲಿ ಕ್ಷಮಾಪಣೆ ಕೇಳಿದ್ದಾರೆ

ನವದೆಹಲಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ  ಮನೇಕಾ ಗಾಂಧಿ ತಾವು ತೃತೀಲ ಲಿಂಗಿಗಳಿಗೆ ’ಇತರರು’ ಎಂದು ತಪ್ಪಾಗಿ ಪದ ಬಳಕೆ ಮಾಡಿದುದಕ್ಕೆ ಲೋಕಸಭೆಯಲ್ಲಿ ಕ್ಷಮಾಪಣೆ ಕೇಳಿದ್ದಾರೆ. "ನಾನು ಉದ್ದೇಶಪೂರ್ವಕವಾಗಿ ಹೇಳಿಲ್ಲ, ನನ್ನ ಅಜ್ಞಾನದ ಕಾರಣ ಈ ತಪ್ಪು ಸಂಭವಿಸಿದೆ ಎಂದು ಅವರು ಹೇಳಿದರು.
ಶಾಲಾ ಪಠ್ಯಪುಸ್ತಕಗಳಲ್ಲಿ ಮಾನವ ಕಳ್ಳಸಾಗಣೆ ತಡೆಗಟ್ಟುವ ಬಗ್ಗೆ ಮಾಹಿತಿಯನ್ನು ಸೇರಿಸುವುದರ ಕುರಿತು ಲೋಕಸಭೆಯಲ್ಲಿ ಮಾತನಾಡುವ ವೇಳೆ ಮೇನಕಾ ಗಾಂಧಿ ತಾವು ತೃತೀಯ ಲಿಂಗಿಗಳನ್ನು ’ಇತರರು’ ಎಂದು ಸಂಬೋಧಿಸಿದ್ದರು. 
ಇದಕ್ಕೂ ಮುನ್ನ ನ್ಯಾಷನಲ್ ಅಲೆಯನ್ಸ್ ಫಾರ್ ಪೀಪಲ್ಸ್ ಮೂಮೆಂಟ್ ಆಂಡ್ ಟ್ರಾನ್ಸ್ ವುಮನ್ ಸಂಘಟನೆಯ ಸದಸ್ಯೆ ಮೇರಾ ಸಂಘಮಿತ್ರ  ಸೇರಿ ಅನೆಕ ಸಂಸದರು ಮೇನಕಾ ಅವರ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದರು.
"ಇತರರು ಎಂದು ಪದ ಬಳಕೆ ಮಾಡಿದುದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ' ಮಾನವ ಕಳ್ಳ ಸಾಗಣೆ ತಡೆಗಟ್ಟುವಿಕೆ ವಿಧೇಯಕ ಕುರಿತ ಚರ್ಚೆ ಸಮಯದಲ್ಲಿ ನಾನುಈ ಪದ ಬಳಸಿದ್ದಕ್ಕಾಗಿ  ನಾನು ಕ್ಷಮೆ ಬೇಡುತ್ತೇನೆ. ಆದರೆ ಈ ಸಮುದಾಯಕ್ಕೆ ಅಧಿಕೃತವಾಗಿ ಏನೆನ್ನುತ್ತಾರೆ ಎನ್ನುವುದು ನನಗೆ ತಿಳಿದಿಲ್ಲ. ಆದರೆ ಭವಿಷ್ಯದಲ್ಲಿ ನಾನು ಈ ಸಮುದಾಯಕ್ಕಾಗಿರುವ ಅಧಿಕೃತ ಪದವನ್ನು ಉಲ್ಲೇಖಿಸಿ ಅವರನ್ನು ಹೆಸರಿಸುತ್ತೇನೆ" ಅವರು  ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿಕೆಶಿಗೆ ಸಿಎಂ ಆಗಲು ಅವಕಾಶ ಕೊಡಬೇಡಿ, ಇನ್ನೂ ಎರಡೂವರೆ ವರ್ಷ ನೀವೇ ಮುಂದುವರೆಯಿರಿ: ಸಿದ್ದು ಪರ ಜನಾರ್ಧನ ರೆಡ್ಡಿ ಬ್ಯಾಟಿಂಗ್..!

ಚಲನಚಿತ್ರೋತ್ಸವದಲ್ಲಿ ‘Palestinian’ ಸಿನೆಮಾಗಳಿಗೆ ನಿರ್ಬಂಧ: ಪ್ರಕಾಶ್‌ ರಾಜ್‌ ಪ್ರತಿರೋಧ, ಗಟ್ಟಿ ನಿಲುವು ತೆಗೆದುಕೊಳ್ಳುವಂತೆ ಸಿಎಂಗೆ ಆಗ್ರಹ

ಸಿಎಂ ಸಿದ್ದರಾಮಯ್ಯ ಅಸಹಾಯಕರಾಗಲು ಕಾರಣ ಪುತ್ರ ವ್ಯಾಮೋಹವೊ, ಸ್ವಪಕ್ಷೀಯರ ಬೆದರಿಕೆಯೊ?: ಸುನಿಲ್‌ಕುಮಾರ್

vbgramg ಕಾಯ್ದೆ ಮೂಲಕ ಗಾಂಧಿ, ಕಾರ್ಮಿಕರ ಬದುಕಿನ ಹತ್ಯೆ: ಆಡಳಿತದಲ್ಲಿ ಯತ್ರೀಂದ್ರ ಹಸ್ತಕ್ಷೇಪ ನೋಡಿಲ್ಲ; ಡಿಕೆ ಶಿವಕುಮಾರ್

ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು: ಮನುಷ್ಯತ್ವ ಮೋಕ್ಷಕ್ಕೆ ಮೂಲ; ಡಿಕೆಶಿ

SCROLL FOR NEXT