ರೂ.1 ಲಕ್ಷ ಲಂಚ ಪಡೆದು ಕೈದಿಯ ಬರ್ತ್'ಡೇ ಆಚರಿಸಿದ ಜೈಲು ಅಧಿಕಾರಿಗಳು; ವಿಡಿಯೋ ವೈರಲ್ 
ದೇಶ

ರೂ.1 ಲಕ್ಷ ಲಂಚ ಪಡೆದು ಕೈದಿಯ ಬರ್ತ್'ಡೇ ಆಚರಿಸಿದ ಜೈಲು ಅಧಿಕಾರಿಗಳು: ವಿಡಿಯೋ ವೈರಲ್

ಕೈದಿಯೊಬ್ಬನಿಂದ ರೂ.1 ಲಕ್ಷ ಪಡೆದ ಜೈಲಿನ ಅಧಿಕಾರಿಗಳು, ಆತನ ಹುಟ್ಟುಹಬ್ಬವನ್ನು ಆಚರಿಸಿರುವ ಆರೋಪವೊಂದು ಉತ್ತರಪ್ರದೇಶದ ಫೈಜಾಬಾದ್ ಜೈಲಿನ ವಿರುದ್ಧ ಕೇಳಿ ಬಂದಿದೆ...

ಫೈಜಾಬಾದ್: ಕೈದಿಯೊಬ್ಬನಿಂದ ರೂ.1 ಲಕ್ಷ ಪಡೆದ ಜೈಲಿನ ಅಧಿಕಾರಿಗಳು, ಆತನ ಹುಟ್ಟುಹಬ್ಬವನ್ನು ಆಚರಿಸಿರುವ ಆರೋಪವೊಂದು ಉತ್ತರಪ್ರದೇಶದ ಫೈಜಾಬಾದ್ ಜೈಲಿನ ವಿರುದ್ಧ ಕೇಳಿ ಬಂದಿದೆ. 
ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಿವೇಂದ್ರ ಸಿಂಗ್ ಫೈಜಾಬಾದ್ ಜೈಲಿನಲ್ಲಿದ್ದು. ಜು.23 ರಂದು ಈತನ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೈರಲ್ ಆಗಿದೆ.
ವಿಚಾರಣೆ ಹಿನ್ನಲೆಯಲ್ಲಿ ಶಿವೇಂದ್ರ ಅವರನ್ನು ಇಂದು ವಿಚಾರಣೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಜೈಲರ್ ವಿನಯ್ ಕುಮಾರ್ ಅವರೇ ಹುಟ್ಟುಹಬ್ಬದ ಆಚರಣೆಗೆ ಸಿದ್ಧತೆ ಮಾಡಿದ್ದರು. ಇದಕ್ಕಾಗಿ ಜೈಲು ಸಿಬ್ಬಂದಿಗೆ ರೂ.1 ಲಕ್ಷ ಹಣ ನೀಡಲಾಗಿತ್ತು ಎಂದು ಆರೋಪಿಸಿದ್ದಾನೆ. 
ಎಲ್ಲವೂ ಆಗಿದ್ದು ಜೈಲರ್ ವಿನಯ್ ಕುಮಾರ್ ಅವರಿಂದ. ವಿನಯ್ ಅವರ ಸಿಬ್ಬಂದಿ ವಿಡಿಯೋ ಮಾಡಿ ಇದನ್ನು ಬಹಿರಂಗ ಪಡಿಸುವುದಿಲ್ಲ ಎಂದು ಮಾತು ಕೊಟ್ಟಿದ್ದರು. ಆದರೆ, ಇದೀಗ ವಿಡಿಯೋ ಲೀಕ್ ಆಗಿದೆ ಎಂದು ತಿಳಿಸಿದ್ದಾರೆ. 
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಜೈಲಿನ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ನನ್ನ ಬಳಿಯಿದ್ದ ಎಲ್ಲಾ ವಸ್ತುಗಳನ್ನು ಜೈಲು ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದರು ಶಿವೇಂದ್ರ ಸಿಂಗ್ ಹೇಳಿದ್ದಾನೆ.
ಘಟನೆ ಕುರಿತಂತೆ ವಕೀಲ ಮರ್ತಾಂಡ್ ಪ್ರಸಾದ್ ಸಿಂಗ್ ಅವರು ಮಾತನಾಡಿ, ಹುಟ್ಟುಹಬ್ಬ ಆಚರಣೆ ನಡೆದಿರುವುದು ನಿಜ. ಜೈಲಿನ ಹೊರಾಂಗಣದಲ್ಲಿ ಆಚರಣೆ ನಡೆದಿದೆ ಎಂದಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

SCROLL FOR NEXT