ಸಾಂದರ್ಭಿಕ ಚಿತ್ರ 
ದೇಶ

ಸೀತೆಯನ್ನು ರಾಮನು ಅಪರಹಿಸಿದ್ದ! ಗುಜರಾತ್ ಪಠ್ಯಪುಸ್ತಕದಲ್ಲಿ ಮುದ್ರಣದೋಷದ ಎಡವಟ್ಟು

ಸೀತೆಯನ್ನು ರಾಮನು ’ಅಪಹರಿಸಿ’ ಕರೆದೊಯ್ದಿದ್ದ! ಹೀಗೊಂದು ವಿಚಾರ ಗುಜರಾತ್ ಪಠ್ಯಪುಸ್ತಕದಲ್ಲಿದೆ.

ಅಹಮದಾಬಾದ್(ಗುಜರಾತ್): ಸೀತೆಯನ್ನು ರಾಮನು ’ಅಪಹರಿಸಿ’ ಕರೆದೊಯ್ದಿದ್ದ! ಹೀಗೊಂದು ವಿಚಾರ ಗುಜರಾತ್ ಪಠ್ಯಪುಸ್ತಕದಲ್ಲಿದೆ. 
ಗುಜರಾತಿನ 12ನೇ ತರಗತಿ ಪಠ್ಯಪುಸ್ತಕದಲ್ಲಿ "ರಾಮನೇ ಸೀತೆಯನ್ನು ಅಪಹರಣ ಮಾಡಿದ’ ಎಂದು ತಪ್ಪಾಗಿ ಮುದ್ರಿತವಾಗಿರುವ ಅಂಶ ಇದೀಗ ಬೆಳಕಿಗೆ ಬಂದಿದೆ.
ಸಂಸ್ಕೃತ ಭಾಷಾ ಪಠ್ಯಕ್ರಮದ ಇಂಗ್ಲಿಷ್ ಅನುವಾದದದಲ್ಲಿ ಈ ಪ್ರಮಾದ ಪತ್ತೆಯಾಗಿದ್ದು ಇದೊಂದು ಭಾಷಾಂತರ ದೋಷ.ಎಂದಿರುವ ಗುಜರಾತ್ ರಾಜ್ಯ ಶಾಲ್ಲಾ ಪಠ್ಯಪುಸ್ತಕ ರಚನಾ ಮಂಡಳಿ (ಜಿಎಸ್ಎಸ್ಟಿಬಿ) ಈ ಕುರಿತಂತೆ ತನಿಖೆ ಕೈಗೊಳ್ಳಲಾಗುತ್ತದೆ ಎಂದಿದೆ.
ಕಾಳಿದಾಸನ  ಮಹಾಕಾವ್ಯ 'ರಘುವಂಶಂ' ಬಗ್ಗೆ ಮೂಲಭೂತ ತಿಳುವಳಿಕೆಯನ್ನು ನೀಡುವ ಪಾಠದಲ್ಲಿ "ಸೀತೆಯನ್ನು ರಾಮ ಅಪಹರಿಸಿದಾಗ ಲಕ್ಷ್ಮಣ ರಾಮನಿಗೆ ತಿಳಿಸಿದ ಸಂದೇಶದ ವಿವರಣೆ ಹೃದಯಸ್ಪರ್ಶಿಯಾಗಿದೆ" ಎಂದು ಪಠ್ಯದಲ್ಲಿ ಬರೆಯಲಾಗಿದೆ.
ಈ ದೋಷಪೂರಿತ ಪಠ್ಯವು 12ನೇ ತರಗತಿ ಆಂಗ್ಲ ಮಾದ್ಯಮ ವಿದ್ಯಾರ್ಥಿಗಳ ಅಭ್ಯಾಸಕ್ಕೆ ನೀಡಿದ ಪಠ್ಯಪುಸ್ತಕದಲ್ಲಿದೆ.
''ತ್ಯಾಗ’ ಎನ್ನುವ ಪದಕ್ಕೆ”ಕಳೆದುಕೊಂಡ’ ಎಂದು ಅನುವಾದಿಸುವ ಬದಲು ’ಅಪಹರಿಸಿದ’ ಎಂದು ತಪ್ಪಾಗಿ ಅನುವಾದಿಸಲಾಗಿದೆ ಎಂದು ಜಿಎಸ್ಎಸ್ಟಿಬಿ ಕಾರ್ಯಕಾರಿ ಅಧ್ಯಕ್ಷ ನಿತಿನ್ ಪಠಾನಿ ಹೇಳಿದ್ದಾರೆ. ’ಸೀತೆಯನ್ನು ರಾಮನು ಕಳೆದುಕೊಂಡ’ ಎಂದು ವಾಕ್ಯರಚನೆ ಆಗಬೇಕಾಗಿತ್ತು ಆದರೆ ’ರಾಮನಿಂದ ಸೀತೆ ಅಪಹರಿಸಲ್ಪಟ್ಟಳು’ ಎಂದು ಮುದ್ರಿತವಾಗಿದೆ ಎಂದು ಅವರು ವಿವರಿಸಿದರು.
ಈ ಕುರಿತಂತೆ ವಿವರವಾದ ತನಿಖೆ ನಡೆಸಲಾಗುತ್ತದೆ, ತಪ್ಪಿತಸ್ಥರೆಂದು ಕಂಡುಬಂದರೆ ಭಾಷಾಂತರ ಕಾರ್ಯ ಮಾಡಿದ್ದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಜತೆಗೆ ಈ ಅಧ್ಯಾಯವನ್ನು ತರಗತಿಯಲ್ಲಿ ಬೋಧಿಸುವ ಶಿಕ್ಷಕರಿಗೆ ಈ ತಪ್ಪನ್ನು ತಿದ್ದಿಕೊಂಡು ಬೋಧಿಸಲು ಹೇಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

SCROLL FOR NEXT