ಸಂಗ್ರಹ ಚಿತ್ರ 
ದೇಶ

ಲಗೇಜ್ ಹೆಚ್ಚಿದ್ದರೆ 6 ಪಟ್ಟು ದಂಡ: ಆಕ್ರೋಶಕ್ಕೆ ಮಣಿದು ನಿರ್ಧಾರ ಹಿಂಪಡೆದ ರೈಲ್ವೆ ಇಲಾಖೆ

ಪ್ರಯಾಣಿಕರ ಲಗೇಜ್ ಹೆಚ್ಚಾಗಿದ್ದರೆ 6 ಪಟ್ಟು ದಂಡ ವಿಧಿಸುವುದಾಗಿ ಹೇಳಿದ್ದ ರೈಲ್ವೇ ಇಲಾಖೆ ಇದೀಗ ಯೂಟರ್ನ್ ಹೊಡೆದಿದ್ದು, ದಂಡ ವಿಧಿಸುವ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ತಿಳಿಸಿದೆ.

ನವದೆಹಲಿ: ಪ್ರಯಾಣಿಕರ ಲಗೇಜ್ ಹೆಚ್ಚಾಗಿದ್ದರೆ 6 ಪಟ್ಟು  ದಂಡ ವಿಧಿಸುವುದಾಗಿ ಹೇಳಿದ್ದ ರೈಲ್ವೇ ಇಲಾಖೆ ಇದೀಗ ಯೂಟರ್ನ್ ಹೊಡೆದಿದ್ದು, ದಂಡ ವಿಧಿಸುವ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ತಿಳಿಸಿದೆ.
ಈ ಹಿಂದೆ ಪ್ರಯಾಣಿಕರು ತಮ್ಮೊಂದಿಗೆ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ಲಗೇಜ್ ಗಳನ್ನು ರೈಲಿನಲ್ಲಿ​ ಕೊಂಡೊಯ್ದರೆ ಲಗೇಜ್​ ಶುಲ್ಕದ 6 ಪಟ್ಟು ದಂಡ ವಿಧಿಸಲಾಗುವುದು  ಎಂದು ರೈಲ್ವೆ ಇಲಾಖೆ ಇತ್ತೀಚೆಗೆ ತಿಳಿಸಿತ್ತು. ಇಲಾಖೆಯ ಈ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ರೈಲ್ವೆ ಇಲಾಖೆ ದಂಡ ವಿಧಿಸುವ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ತಿಳಿಸಿದೆ.
ಇನ್ನು ಈ ಹಿಂದೆ ಜೂನ್​ 1 ರಿಂದ ಹೆಚ್ಚುವರಿ ಲಗೇಜ್​ ಕೊಂಡೊಯ್ಯುವವರನ್ನು ಪತ್ತೆ ಹಚ್ಚಲು ವಿಶೇಷ ಕಾರ್ಯಾಚರಣೆ ಆರಂಭಿಸಿತ್ತು. ಈ ಸಂದರ್ಭದಲ್ಲಿ ಸ್ಲೀಪರ್ ಬೋಗಿ ಪ್ರಯಾಣಿಕರು 40 ಕೆ.ಜಿ. ಮತ್ತು ಎರಡನೇ ದರ್ಜೆ ಬೋಗಿಗಳಲ್ಲಿ ಪ್ರಯಾಣಿಸುವವರು 35 ಕೆ.ಜಿ. ತೂಕದ ಲಗೇಜನ್ನು ಶುಲ್ಕವಿಲ್ಲದೇ ಮತ್ತು ಎಸಿ ಕೋಚ್ ನ ಪ್ರಯಾಣಿಕರು 70 ಕೆಜಿ ವರೆಗಿನ ಶುಲ್ಕ ರಹಿತ ಲಗೇಜನ್ನು ಗರಿಷ್ಟ 150 ಕೆಜಿ ವರಿಗಿನ ಶುಲ್ಕ ಸಹಿತ ಲಗೇಜನ್ನು ಕೊಂಡೊಯ್ಯಬಹುದು. 30 ವರ್ಷಗಳ ಹಿಂದೆಯೇ ಈ ನಿಯಮ ರೂಪಿಸಲಾಗಿದ್ದು, ಇನ್ಮುಂದೆ ಇದನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದರು.
ರೈಲ್ವೆ ಇಲಾಖೆ ಹೆಚ್ಚಿನ ಲಗೇಜ್​ ಕೊಂಡೊಯ್ಯದಂತೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನ ನಡೆಸಿತ್ತು. ಈ ಮೂಲಕ ಹೆಚ್ಚಿನ ಲಗೇಜ್​ ತೆಗೆದುಕೊಂಡು ಹೋಗುವುದರಿಂದ ಸಹ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬುದನ್ನು ಪ್ರಯಾಣಿಕರಿಗೆ ಮನದಟ್ಟು ಮಾಡಿಕೊಡುವುದು ನಮ್ಮ ಉದ್ದೇಶವಾಗಿತ್ತು ಎಂದು ರೈಲ್ವೆ ಇಲಾಖೆಯ ವಕ್ತಾರ ರಾಜೇಶ್​ ಬಾಜಪೇಯಿ ತಿಳಿಸಿದ್ದಾರೆ. 
ಇಲಾಖೆಯ ಈ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇಲಾಖೆ ಇದೀಗ ಈ ನಿರ್ಧಾರದಿಂದ ಹಿಂದೆ ಸರಿದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT