ಭಾರತ-ಚೀನಾ-ಪಾಕ್ ಸಹಕಾರದ ಪರಿಕಲ್ಪನೆಯಿಂದ ಅಂತರ ಕಾಯ್ದುಕೊಂಡ ಚೀನಾ 
ದೇಶ

ಭಾರತ-ಚೀನಾ-ಪಾಕ್ ಸಹಕಾರದ ಪರಿಕಲ್ಪನೆಯಿಂದ ಅಂತರ ಕಾಯ್ದುಕೊಂಡ ಚೀನಾ

ಭಾರತ-ಚೀನಾ-ಪಾಕ್ ತ್ರಿಪಕ್ಷೀಯ ಸಹಕಾರದ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ್ದ ಚೀನಾದ ರಾಯಭಾರಿ ಕಚೇರಿ ಅಧಿಕಾರಿಯ ಹೇಳಿಕೆಯಿಂದ ಸ್ವತಃ ಚೀನಾ ಸರ್ಕಾರ ಅಂತರ ಕಾಯ್ದುಕೊಂಡಿದೆ.

ಬೀಜಿಂಗ್: ಭಾರತ-ಚೀನಾ-ಪಾಕ್ ತ್ರಿಪಕ್ಷೀಯ ಸಹಕಾರದ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ್ದ ಚೀನಾದ ರಾಯಭಾರಿ ಕಚೇರಿ ಅಧಿಕಾರಿಯ ಹೇಳಿಕೆಯಿಂದ ಸ್ವತಃ ಚೀನಾ ಸರ್ಕಾರ ಅಂತರ ಕಾಯ್ದುಕೊಂಡಿದೆ. 
ಶಾಂಘೈ ಸಹಕಾರ ಒಕ್ಕೂಟದ ಅಡಿಯಲ್ಲಿ ತ್ರಿಪಕ್ಷೀಯ ಸಹಕಾರದ ಕುರಿತು  ಭಾರತದಲ್ಲಿರುವ ಚೀನಾದ ರಾಯಭಾರಿ ಕಚೇರಿ ಅಧಿಕಾರಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಚೀನಾ ಅಂತರ ಕಾಯ್ದುಕೊಂಡಿದ್ದರೂ ಭಾರತ-ಪಾಕಿಸ್ತಾನದ ನಡುವೆ ಮಾತುಕತೆಯನ್ನು ಬಲಪಡಿಸುವುದು ಮುಖ್ಯವಾಗಿದೆ, ಇದರಿಂದಾಗಿ ಉಭಯ ರಾಷ್ಟ್ರಗಳ ಹಿತಾಸಕ್ತಿಗಳೂ ಸುಧಾರಣೆಯಾಗಲಿವೆ ಎಂದು ಹೇಳಿದೆ. 
ಭಾರತ-ಪಾಕಿಸ್ತಾನದ ನಡುವೆ ಶಾಂತಿ ಮೂಡಿಸಲು ಶಾಂಘೈ ಸಹಕಾರ ಒಕ್ಕೂಟದ ಅಡಿಯಲ್ಲಿ ಭಾರತ-ಚೀನಾ-ಪಾಕ್ ತ್ರಿಪಕ್ಷೀಯ ಸಹಕಾರದ ಅಗತ್ಯವಿದೆ ಎಂದು ಚೀನಾ ರಾಯಭಾರಿ ಕಚೇರಿ ಅಧಿಕಾರಿ ಜೂ.18 ರಂದು ಹೇಳಿದ್ದರು. 
ಭಾರತ, ಪಾಕಿಸ್ತಾನ ಎರಡೂ ಚೀನಾದ ಮಿತ್ರ ರಾಷ್ಟ್ರಗಳು, ಮಿತ್ರರಾಷ್ಟ್ರಗಳ ನಡುವೆ ಉತ್ತಮ, ಸೌಹಾರ್ದಯುತ ವಾತಾವರಣವನ್ನುಂಟುಮಾಡಲು ಚೀನಾ ಬಯಸುತ್ತಿದೆ, ಈ ಮೂಲಕ ಪ್ರಾದೇಶಿಕವಾಗಿ ಸ್ಥಿರತೆ ಸಾಧ್ಯವಿದೆ ಎಂದು ಚೀನಾ ರಾಯಭಾರಿ ಕಚೇರಿ ಅಧಿಕಾರಿಗಳು ಹೇಳಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

SCO Summit: ಒಂದೇ ವೇದಿಕೆಯಲ್ಲಿ ಚೀನಾ- ಭಾರತ- ರಷ್ಯಾ; ಕೆರಳಿದ Trump ಭಾರತದ ಬಗ್ಗೆ ಹೇಳಿದ್ದೇನು?

ಎಲ್ಲರನ್ನೂ ಕಾಯಿಸುತ್ತಿದ್ದ ಪುಟಿನ್ ಪ್ರಧಾನಿ ಮೋದಿಗಾಗಿ 10 ನಿಮಿಷಗಳ ಕಾಲ ಕಾರಿನಲ್ಲಿ ಕಾದು ಕುಳಿತ್ತಿದ್ದರು, Video!

ಧರ್ಮಸ್ಥಳದ ವಿರುದ್ಧ ಬಿಜೆಪಿಯಿಂದಲೇ ಷಡ್ಯಂತ್ರ: ಡಿಕೆ ಶಿವಕುಮಾರ್

ಸರ್ಕಾರಿ ಬಂಗಲೆ ಖಾಲಿ ಮಾಡಿದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧಂಖರ್!

ಸೌಜನ್ಯ ಹೆಸರು ಹೇಳಿ ದುಡ್ಡು ಮಾಡಿದೆ ಎಂದು ನಿಮ್ಮ ಪಕ್ಷದವರೇ ಟೀಕಿಸಿದರು: ವಿಜಯೇಂದ್ರಗೆ ಸೌಜನ್ಯ ತಾಯಿ ತರಾಟೆ

SCROLL FOR NEXT