ವಡೋದರಾ: ಶಾಲೆಯನ್ನು ಮುಚ್ಚಿಸಬೇಕೆಂದು ತನ್ನ ಕಿರಿಯ ಸಹಪಾಠಿಯನ್ನೇ ಕೊಂದ 
ದೇಶ

ವಡೋದರಾ: ಶಾಲೆಯನ್ನು ಮುಚ್ಚಿಸಬೇಕೆಂದು ತನ್ನ ಕಿರಿಯ ಸಹಪಾಠಿಯನ್ನೇ ಕೊಂದ

ಶಾಲೆಯ ಶೌಚಗೃಹದಲ್ಲಿ ಒಂಭತ್ತನೇ ತರಗತಿ ವಿದ್ಯಾರ್ಥಿಯ ಹತ್ಯೆ ಸಂಬಂಧ ತನಿಖೆ ನಡೆಸಿರುವ ಪೋಲೀಸರು ಅದೇ ಶಾಲೆಯ ಇನ್ನೋರ್ವ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.

ವಡೋದರಾ (ಗುಜರಾತ್): ಶಾಲೆಯ ಶೌಚಗೃಹದಲ್ಲಿ ಒಂಭತ್ತನೇ ತರಗತಿ ವಿದ್ಯಾರ್ಥಿಯ ಹತ್ಯೆ ಸಂಬಂಧ ತನಿಖೆ ನಡೆಸಿರುವ ಪೋಲೀಸರು  ಅದೇ ಶಾಲೆಯ ಇನ್ನೋರ್ವ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.
ಶಾಲೆಯ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ತಾನು ಈ ದುಷ್ಕೃತ್ಯ ಎಸಗಿದ್ದೆ ಎಂದು ಆರೋಪಿಯಾದ ಹತ್ತನೇ ತರಗತಿ ವಿದ್ಯಾರ್ಥಿ ಹೇಳಿದ್ದಾನೆಂದು ಪೋಲೀಸರು ಮಾಹಿತಿ ಒದಗಿಸಿದ್ದಾರೆ.
ಮೃತ ವಿದ್ಯಾರ್ಥಿ ತಾದ್ವಿ ​ ಕೇವಲ ಒಂದು ವಾರದ ಹಿಂದೆ ಶಾಲೆಗೆ ನೂತನ ವಿದ್ಯಾರ್ರ್ಥಿಯಾಗಿ ದಾಖಲಾಗಿದ್ದ. ಆರೋಪಿಗೆ ತಾನು ಕೊಲ್ಲುವ ವಿದ್ಯಾರ್ಥಿಯ ಪರಿಚಯವೂ ಇರಲಿಲ್ಲ ಎನ್ನುವ ಅಚ್ಚರಿಯ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ. 
ಶಿಕ್ಷಕರು ನಿಂದಿಸಿದರೆನ್ನುವ ಒಂದೇ ಕಾರಣಕ್ಕೆ ಶಾಲೆಯನ್ನು ಮುಚ್ಚಿಸುವ ಸಲುವಾಗಿ ಆರೋಪಿ ಈ ಕ್ರೂರ ಕೆಲಸಕ್ಕೆ ಕೈ ಹಾಕಿದ್ದಾನೆ. ಆರೊಪಿ ವಿದ್ಯಾರ್ಥಿಯು ಒಳ್ಳೆಯ ನಡತೆ ಹೊಂದಿರಲಿಲ್ಲ, ಶಿಕ್ಷಕರು ನಿಂದಿಸಿದ್ದಕ್ಕಾಗಿ ಶಾಲೆ ವಿರುದ್ಧ ದ್ವೇಷ ಸಾಧಿಸಿದ್ದ ವಿದ್ಯಾರ್ಥಿ ಶಾಲೆಯನ್ನು ಮುಚ್ಚಿಸಲು ಓರ್ವ ವಿದ್ಯಾರ್ಥಿಯನ್ನು ಕೊಲೆ ಮಾಡಲು ಮುಂದಾಗಿದ್ದಾಗಿ ಪೋಲೀಸರು ಹೇಳಿದ್ದಾರೆ.
ಮೃತ ವಿದ್ಯಾರ್ಥಿಯ ದೇಹದ ವಿವಿಧೆಡೆ 31 ಬಾರಿ ಇರಿದು ಆತನನ್ನು ಕೊಲ್ಲಲಾಗಿತ್ತು. ಅಲ್ಲಎ ದೇಹದ ಪಕ್ಕದಲ್ಲಿ ಕೃತ್ಯಕ್ಕೆ ಬಳಸಿದ್ದ ಚಾಕು ಪತ್ತೆಯಾಗಿತ್ತು. ಚಾಕು ಸೇರಿ ಹತ್ಯೆ ನಡೆಸಲು ಬೇಕಾದ ಎಲ್ಲಾ ಸಾಧನ ಸಲಕರಣೆಯನ್ನು ಆರೋಪಿಯು ಸಂಗ್ರಹ ಮಾಡಿದ್ದ . ಸಿಸಿಟಿವಿ ದೃಶ್ಯಗಳನ್ನು ಕಂಡು ಪೋಲೀಸರು ಆರೋಪಿಯನ್ನು ಬಂಧಿಸಿದ್ದು ಕೇವಲ 90 ಸೆಕೆಂಡ್ ನಲ್ಲಿ ಕೊಲೆ ನಡೆದಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.
17 ವರ್ಷದ ಆರೋಪಿಯನ್ನು ಪೋಲೀಸರು ಶುಕ್ರವಾರ ವಲ್ಸಾಡ್ ನಲ್ಲಿ ಬಂಧಿಸಿದ್ದಾರೆ.ಆರೋಪಿ ವಡೋದರಾದವನಾಗಿದ್ದು ಕೃತ್ಯ ನಡೆಸಿದ ಬಳಿಕ ಬೇರೆ ಸ್ಥಳಕ್ಕೆ ತೆರಳೀದ್ದನು. ಅಪರಾಧ ನಡೆಸುವಾಗ ಆರೋಪಿ ಧರಿಸಿದ್ದ ಉಡುಪುಗಳನ್ನು ಪೋಲೀಸರು ವಶಕ್ಕೆ ಪಡೆದಿದ್ದು  ಜುವೆನೈಲ್ ಜಸ್ಟಿಸ್ ಮಂಡಳಿ ಮುಂದೆ ಆರೋಪಿಯನ್ನು ಹಾಜರು ಪಡಿಸಿದ್ದಾರೆ. ಇದೀಗ ಆರೋಪಿಯನ್ನು ಅಬ್ಸರ್ವೇಷನ್ ಹೋಂ ಗೆ ಸೇರಿಸಲಾಗಿದೆ.
ಜೂನ್ 22 ರಂದು ಶಾಲೆಯ ವಾಷ್ ರೂಮ್ನಲ್ಲಿ 14 ವರ್ಷದ ಹುಡುಗನೊಬ್ಬನ ಮ್ತದೇಹವು ಪತ್ತೆಯಾಗಿತ್ತು. ಸತ್ತ ವಿದ್ಯಾರ್ಥಿಯ ದೇಹದ ನಾನಾ ಭಾಗಗಳಲ್ಲಿ ಗಾಯಗಳು ಕಂಡುಬಂದಿದ್ದವು. 
ಕಳೆದ ವರ್ಷ ಸೆಪ್ಟೆಂಬರ್‌ ನಲ್ಲಿ ಗುರುಗ್ರಾಮದ ರಿಯಾನ್‌ ಅಂತಾರಾಷ್ಟ್ರೀಯ ಶಾಲೆಯ ಶೌಚಗೃಹದಲ್ಲಿ ಏಳು ವರ್ಷದ ಪ್ರದ್ಯುಮ್ನನ ಹತ್ಯೆಯಾಗಿದ್ದು ಇಡೀ ದೇಶ ಬೆಚ್ಚಿ ಬಿದ್ದಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಮುಂದಿನ CM ಡಿಕೆ.ಶಿವಕುಮಾರ್; ಸಚಿವರಿಗೆ ಸಿದ್ದರಾಮಯ್ಯ ಮಾಹಿತಿ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT