ವಿಮಾನದ ಅವಶೇಷಗಳು 
ದೇಶ

ನಾಸಿಕ್ ಬಳಿ ಸುಖೋಯ್ ವಿಮಾನ ಅಪಘಾತ : ಪೈಲಟ್ ಗಳು ಸುರಕ್ಷಿತ

ಮಹಾರಾಷ್ಟ್ರದ ನಾಸಿಕ್ ಬಳಿ ಇಂದು ಬೆಳಿಗ್ಗೆ ಸುಖೋಯ್ ವಿಮಾನ ಅಪಘಾತಕ್ಕೀಡಾಗಿದೆ. ಆದರೆ, ಯಾವುದೇ ಪ್ರಾಣಪಾಯವಾಗಿಲ್ಲ. ವಿಮಾನ ಭೂಮಿಗೆ ಸ್ಪರ್ಶಿಸುವ ಮುನ್ನವೇ ಇಬ್ಬರು ಪೈಲಟ್ ಗಳು ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಸಿಕ್ : ಮಹಾರಾಷ್ಟ್ರದ ನಾಸಿಕ್ ಬಳಿ ಇಂದು ಬೆಳಿಗ್ಗೆ ಸುಖೋಯ್  ವಿಮಾನ ಅಪಘಾತಕ್ಕೀಡಾಗಿದೆ.  ಆದರೆ, ಯಾವುದೇ ಪ್ರಾಣಪಾಯವಾಗಿಲ್ಲ. ವಿಮಾನ ಭೂಮಿಗೆ ಸ್ಪರ್ಶಿಸುವ ಮುನ್ನವೇ ಇಬ್ಬರು ಪೈಲಟ್ ಗಳು ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ ಎಎಲ್  ಉಪ ಉತ್ಪಾದಿತ   ಸುಖೋಯ್ -30 ಎಂಕೆಐ ಅವಳಿ ಬಹುಹಂತದ ವಿಮಾನ ಹಾರಾಟ ನಡೆಸುತ್ತಿದ್ದಾಗ   ನಾಸಿಕ್ ನಿಂದ 25 ಕಿಲೋಮೀಟರ್ ದೂರದಲ್ಲಿರುವ  ಪಿಂಪಾಲ್ಗಾನ್  ವಾವಿ ತುಸಿ ಗ್ರಾಮದ ಬಳಿ ಭೂಮಿಗೆ ಅಪ್ಪಳಿಸಿದ್ದು,  ಅವಶೇಷಗಳು ಬಿದ್ದಿವೆ ಎಂದು  ಪೊಲೀಸರು ಹೇಳಿದ್ದಾರೆ.

ಬೆಳಿಗ್ಗೆ 11-05 ರ ಸುಮಾರಿನಲ್ಲಿ ಈ ಅಪಘಾತ ಸಂಭವಿಸಿದೆ. ಈ ಬಗ್ಗೆ 11-15ಕ್ಕೆ ಪಿಂಪ್ಲಾಗನ್ ಪೊಲೀಸ್ ಠಾಣೆಗೆ ಮಾಹಿತಿ ಬಂದಿತ್ತು ಎಂಬುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ  ಯುದ್ದವಿಮಾನವನ್ನು ರಷ್ಯಾದ ಸುಖೋಯ್ ಅಭಿವೃದ್ದಿಪಡಿಸಿದ್ದು, ಎಚ್ ಎಎಲ್ ಅನುಮತಿಯಿಂದ ತಯಾರಿಸಲಾಗಿತ್ತು. ನಾಸಿಕ್ ಬಳಿಯ ಹೆಚ್ ಎಎಲ್ ವಾಯುನಿಲ್ದಾಣದಿಂದ ಟೆಕ್ ಆಪ್ ಆಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಸುದ್ದಿ ತಿಳಿದ ತಕ್ಷಣ ಒಜಹಾರ್ ವಾಯುನೆಲೆಯ ವಾಯುಪಡೆ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾಗಿ ಪೊಲೀಸರು ಹೇಳಿದ್ದಾರೆ.

 ಇದೇ ತಿಂಗಳು ಗುಜರಾತ್ ನ ಕಚ್ ಪ್ರದೇಶದ ಮುಂದ್ರಾ ಜಿಲ್ಲೆಯಲ್ಲಿ ವಾಯುಪಡೆಯ ಜಾಗ್ವರ್ ಯುದ್ದ ವಿಮಾನ ಅಪಘಾತವಾಗಿತ್ತು.  ಕಳೆದ ವರ್ಷ ಮೇ ತಿಂಗಳಲ್ಲಿ  ಚೀನಾದ  ಗಡಿ ಪ್ರದೇಶದಲ್ಲಿ ತಾಂತ್ರಿಕ ದೋಷದಿಂದ  ಸುಖೋಯ್ ವಿಮಾನ ಅಪಾಘತಕ್ಕೀಡಾಗಿತ್ತು. ಈ ಅಪಘಾತಗಳ ಬಗ್ಗೆ  ತನಿಖೆಗೆ ವಾಯುಪಡೆ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿದೆ.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೈಸೂರಿನಲ್ಲಿ ರಾಹುಲ್ ಗಾಂಧಿ ಜತೆ ಸಿದ್ದರಾಮಯ್ಯ, ಡಿಕೆಸಿ ಮಹತ್ವದ ಚರ್ಚೆ; ಬಳಿಕ ಸಿಎಂ ಹೇಳಿದ್ದೇನು? Video

ಬ್ಲಿಂಕಿಟ್, ಸ್ವಿಗ್ಗಿ, ಜೆಪ್ಟೊಗೆ 10 ನಿಮಿಷಗಳ ಡೆಲಿವರಿ ಸೇವೆ ನಿಲ್ಲಿಸುವಂತೆ ಸರ್ಕಾರ ಸೂಚನೆ; ಯಾಕೆ ಗೊತ್ತಾ?

'ಹಾವು ಕಚ್ಚಿದೆ ಬೇಗ ಚಿಕಿತ್ಸೆ ಕೊಡಿ'; ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂದ ಆಟೋ ಚಾಲಕ, Video

ಜಮ್ಮು-ಕಾಶ್ಮೀರ: ಇದೇ ಮೊದಲು, ಮಸೀದಿಯ ಇಮಾಮ್ ಸೇರಿದಂತೆ ಎಲ್ಲರ ವೈಯಕ್ತಿಕ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು! ಕಾರಣವೇನು ಗೊತ್ತಾ?

ಉಗ್ರ ನಂಟು: ಜಮ್ಮು ಮತ್ತು ಕಾಶ್ಮೀರದ ಐವರು ಸರ್ಕಾರಿ ನೌಕರರು ವಜಾ

SCROLL FOR NEXT