ಬಾಂಬೆ ಹೈಕೋರ್ಟ್ 
ದೇಶ

ಮುಂಬೈ: ಪತ್ನಿಯ ಕಿರುಕಳದಿಂದ ಬೇಸತ್ತ ಪತಿಗೆ ವಿಚ್ಚೇದನದೊಡನೆ 50 ಸಾವಿರ ಪರಿಹಾರ

ಸುಳ್ಳು ವರದಕ್ಷಿಣೆ ಪ್ರಕರಣ, ಕಿರುಕುಳ, ಕ್ರಿಮಿನಲ್ ಪ್ರಕರಣ ಸೇರಿ ಹಲವು ಪ್ರಕರಣಗಳನ್ನು ದಾಖಲಿಸಿದ್ದ ಪತ್ನಿಯೊಬ್ಬಳಿಂದ ಅಮಾಯಕ ಪತಿಗೆ ಬಾಂಬೆ ಹೈಕೋ....

ಮುಂಬೈ: ಸುಳ್ಳು ವರದಕ್ಷಿಣೆ ಪ್ರಕರಣ, ಕಿರುಕುಳ, ಕ್ರಿಮಿನಲ್ ಪ್ರಕರಣ ಸೇರಿ ಹಲವು ಪ್ರಕರಣಗಳನ್ನು ದಾಖಲಿಸಿದ್ದ ಪತ್ನಿಯೊಬ್ಬಳಿಂದ ಅಮಾಯಕ ಪತಿಗೆ ಬಾಂಬೆ ಹೈಕೋರ್ಟ್ ಬಿಡುಗಡೆ ನೀಡಿದೆ. ಜತೆಗೆ  50,000 ರೂ. ಪರಿಹಾರವನ್ನೂ ಒದಗಿಸಿದೆ.
ಉದ್ಯಮಿಯಾಗಿದ್ದ  ಪತಿಯ ತಾಯಿಗೆ ಕ್ಯಾನ್ಸರ್ ಇದ್ದು ಆಕೆಗೆ ನಿತ್ಯವೂ ನಾನಾ ಬಗೆಯ ಕಷ್ಟಗಳನ್ನು ನೀಡುತ್ತಿದ್ದ ಪತ್ನಿಯಿಂದ ಬಿಡುಗಡೆ ಕೋರಿ ಪತಿ ನ್ಯಾಯಾಲಯದ ಮೊರೆ ಹೊಕ್ಕಿದ್ದರು.
ಕಮಲ್ ಕಿಶೋರ್ ತಾತೇಡ್ ಮತ್ತು ಬರ್ಗೆಸ್ ಕೊಲಬವಲ್ಲಾ  ಅವರನ್ನೊಳಗೊಂಡ ಪೀಠವು  ಕ್ರೌರ್ಯದ ಆಧಾರದ ಮೇಲೆ ಹಿಂದೂ ವಿವಾಹ ಕಾಯಿದೆಯಡಿ ಪ್ರಕರಣದ ವಿಚಾರಣೆ ನಡೆಸಿ ವಿಚ್ಚೇದನ ನಿಡಿದೆ. ಅಲ್ಲದೆ ವಿಚ್ಚೇದನಕ್ಕೆ ತಡೆ, ಪತ್ನಿಗೆ ಜೀವನ ನಿರ್ವಹಣಾ ವೆಚ್ಚವಾಗಿ ಮಾಸಿಕ 15,000 ರೂ ನೀಡಬೇಕೆಂಬ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು  ತಳ್ಳಿ ಹಾಕಿದೆ.
ಆದರೆ ಪತ್ನಿಯ ಜತೆಗೆ ವಾಸಿಸುವ ಮಗನ ನಿರ್ವಹಣೆಗೆ ವೆಚ್ಚ ಪಾವತಿಸಲು ನ್ಯಾಯಾಲಯ ಆದೇಶಿಸಿದೆ. 
"ಪ್ರಕರಣವನ್ನು ಸರಿಯಾಗಿ ವಿಮರ್ಶಿಸದೆ ಕೆಳ ನ್ಯಾಯಾಲಯವು ತಪ್ಪಾಗಿ ತೀರ್ಪು ನೀಡಿಎ" ಎಂದು ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT