ವೇತನ ಸಂಹಿತೆ ಮಸೂದೆಯ ಅಂಶಗಳಿಗೆ ಕಾಂಗ್ರೆಸ್ ವಿರೋಧ: ಸಮಗ್ರ ಕಾನೂನಿಗೆ ಒತ್ತಾಯ 
ದೇಶ

ವೇತನ ಸಂಹಿತೆ ಮಸೂದೆಯ ಅಂಶಗಳಿಗೆ ಕಾಂಗ್ರೆಸ್ ವಿರೋಧ: ಸಮಗ್ರ ಕಾನೂನಿಗೆ ಒತ್ತಾಯ

ಕಾರ್ಮಿಕರಿಗೆ ಕನಿಷ್ಠ ವೇತನ ಮಾನದಂಡವನ್ನು ನಿಗದಿಪಡಿಸಲು ಸಾಧ್ಯವಾಗು ವೇತನ ಸಂಹಿತೆ ಮಸೂದೆಯಲ್ಲಿನ ಕೆಲವು ಅಂಶಗಳಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.

ನವದೆಹಲಿ: ಕಾರ್ಮಿಕರಿಗೆ ಕನಿಷ್ಠ ವೇತನ ಮಾನದಂಡವನ್ನು ನಿಗದಿಪಡಿಸಲು ಸಾಧ್ಯವಾಗು ವೇತನ ಸಂಹಿತೆ ಮಸೂದೆಯಲ್ಲಿನ ಕೆಲವು ಅಂಶಗಳಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. 
ಮಸೂದೆಯಲ್ಲಿನ ಅಂಶಗಳನ್ನು ಪರಿಶೀಲಿಸಲು ನೀಡಲಾಗಿದ್ದ ಸಮಿತಿಯ ವರದಿ ಅಂತಿಮಗೊಂಡಿರುವುದರ ಬೆನ್ನಲ್ಲೆ ಕಾಂಗ್ರೆಸ್ ನಿಂದ ವಿರೋಧ ವ್ಯಕ್ತವಾಗಿದ್ದು,  ಏಕಕಾಲಿಕ ಪೀಳಿಗೆ ಹಾಗೂ ಅವರಿಗೆ ಯೋಗ್ಯ ಉದ್ಯೋಗದ ರಕ್ಷಣೆಯ ಭರವಸೆಯ ಅಂಶಗಳಿಲ್ಲದೇ ಮಸೂದೆ ಅಪೂರ್ಣವಾಗಲಿದೆ ಎಂದು ಕಾಂಗ್ರೆಸ್ ವಾದಿಸಿದೆ. 
ಪ್ರಸ್ತಾವಿತ ಸಂಹಿತೆಗೆ ಕಾಂಗ್ರೆಸ್ ಏ.30 ರಂದೇ ಕಾರ್ಮಿಕ ಸಚಿವ ಸಂತೋಶ್ ಕುಮಾರ್ ಗಂಗ್ವಾರ್ ಗೆ ಆಕ್ಷೇಪಣೆ ಸಲ್ಲಿಸಿದ್ದು, ಅಸಂಘಟಿತ ವಲಯದ ಬೇಡಿಕೆಗಳಿಗೆ ಸಂಹಿತೆಯಲ್ಲಿ ಗಮನ ಹರಿಸಲಾಗಿಲ್ಲ, ಆದ್ದರಿಂದ ಸಮಗ್ರವಾದ ಮಸೂದೆ ಜಾರಿಗೆ ಬರಬೇಕೆಂದು ಸಚಿವರಿಗೆ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಕಾಂಗ್ರೆಸ್ ಆಗ್ರಹಿಸಿದೆ. 
2 ನೇ ಕಾರ್ಮಿಕ ಆಯೋಹ ಹಾಗೂ ಅನೌಪಚಾರಿಕ ವಲಯದಲ್ಲಿ ಉದ್ಯಮಗಳ ರಾಷ್ಟ್ರೀಯ ಯೋಗದ ಶಿಫಾರಸ್ಸುಗಳ ಪ್ರಕಾರವಾಗಿ ಅಸಂಘಟಿತ ವಲಯದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಮಗ್ರವಾದ ಕಾನೂನು ಜಾರಿಯಾಗಬೇಕು ಎಂದು ಭಾರತ ಅಸಂಘಟಿತ ನೌಕರರ ಕಾಂಗ್ರೆಸ್ ನ ಅಧ್ಯಕ್ಷ ಅರವಿಂದ್ ಸಿಂಗ್ ಹೇಳಿದ್ದಾರೆ. 
ಭಾರತ ಅಸಂಘಟಿತ ನೌಕರರ ಕಾಂಗ್ರೆಸ್ ಕಾಂಗ್ರೆಸ್ ಪಕ್ಷದ ಅಂಗವಾಗಿದ್ದು, ಇತ್ತೀಚಿಗೆಷ್ಟೇ ರಾಹುಲ್ ಗಾಂಧಿ ಈ ಸಂಘಟನೆಯನ್ನು ಉದ್ಘಾಟಿಸಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ಶಿವಮೊಗ್ಗ: 10 ಕಿಲೋ ವ್ಯಾಟ್ FM ಟ್ರಾನ್ಸ್ಮಿಟರ್ ಕೇಂದ್ರ ಉದ್ಘಾಟನೆ! ಆಕಾಶವಾಣಿ, ದೂರದರ್ಶನ ಅಭಿವೃದ್ದಿಗೆ 2,500 ಕೋಟಿ ಹಣ ವೆಚ್ಚ- ಡಾ. ಎಲ್ ಮುರುಗನ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

SCROLL FOR NEXT