ಅದ್ನಾನ್ ಸಾಮಿ 
ದೇಶ

ಖ್ಯಾತ ಗಾಯಕ ಅದ್ನಾನ್ ಸಾಮಿ ತಂಡವನ್ನು 'ಇಂಡಿಯನ್ ಡಾಗ್ಸ್' ಎಂದ ಕುವೈತ್ ಅಧಿಕಾರಿಗಳು

ಕುವೈತ್ ವಿಮಾನ ನಿಲ್ದಾಣದಲ್ಲಿ ಖ್ಯಾತ ಗಾಯ ಅದ್ನಾನ್ ಸಾಮಿ ತಂಡವನ್ನು ಕುವೈತ್ ಅಧಿಕಾರಿಗಳು ಇಂಡಿಯನ್ ಡಾಗ್ಸ್ ಎಂದು ಜರಿದಿದ್ದಾಗಿ ಸಾಮಿ ಟ್ವೀಟ್ ಮಾಡಿದ್ದು ಭಾರತೀಯ ರಾಯಭಾರಿ...

ಕುವೈತ್: ಕುವೈತ್ ವಿಮಾನ ನಿಲ್ದಾಣದಲ್ಲಿ ಖ್ಯಾತ ಗಾಯ ಅದ್ನಾನ್ ಸಾಮಿ ತಂಡವನ್ನು ಕುವೈತ್ ಅಧಿಕಾರಿಗಳು ಇಂಡಿಯನ್ ಡಾಗ್ಸ್ ಎಂದು ಜರಿದಿದ್ದಾಗಿ ಸಾಮಿ ಟ್ವೀಟ್ ಮಾಡಿದ್ದು ಭಾರತೀಯ ರಾಯಭಾರಿ ಕಚೇರಿಗೆ ಟ್ಯಾಗ್ ಮಾಡಿ ತಿಳಿಸಿದ್ದಾರೆ. 
ಸಾಮಿ ತಮ್ಮ ಟ್ವೀಟ್ ನಲ್ಲಿ ನಾವು ನಿಮ್ಮ ನಗರಕ್ಕೆ ಬಂದಿದ್ದು ಪ್ರೀತಿಯಿಂದ ಮತ್ತು ಭಾರತೀಯ ಸಹೋದರರ ಆಲಿಂಗನಕ್ಕಾಗಿ. ಆದರೆ ನೀವು ಅದಕ್ಕೆ ಸಹಕರಿಸಲಿಲ್ಲ. ಕುವೈತ್ ವಲಸೆ ಅಧಿಕಾರಿಗಳು ಅನುಚಿತವಾಗಿ ನಡೆದುಕೊಂಡರು. ಯಾವುದೇ ಕಾರಣ ಇಲ್ಲದೆ ನಮ್ಮ ತಂಡವನ್ನು ಇಂಡಿಯನ್ ಡಾಗ್ಸ್ ಎಂದು ಜರಿದಿದ್ದಾರೆ. 
ಈ ಬಗ್ಗೆ ಭಾರತೀಯ ರಾಯಭಾರಿ ಕಚೇರಿಗೆ ತಿಳಿಸಿದರೂ ಏನು ಕ್ರಮಕೈಗೊಳ್ಳಲಿಲ್ಲ. ಕುವೈತ್ ನವರಿಗೆ ಎಷ್ಟು ಸೊಕ್ಕಿರಬೇಕು ಎಂದು ಸಾಮಿ ಟ್ವೀಟಿಸಿದ್ದಾರೆ.
ಈ ಬಗ್ಗೆ ಕೇಂದ್ರ ಸಚಿವ ಕಿರಣ್ ರಿಜಿಜು ಸಹ ಪ್ರತಿಕ್ರಿಯಿಸಿ, ಈ ರೀತಿ ಆಗಬಾರದಿತ್ತು. ಅದಕ್ಕೆ ವಿಶಾದಿಸುತ್ತೇವೆ. ನಮ್ಮ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಕೂಡಲೇ ಸಂಪರ್ಕಿಸಿ ಎಂದು ಟ್ವೀಟ್ ನಲ್ಲೇ ತಿಳಿಸಿದರು. ಈ ವಿಚಾರವಾಗಿ ಸುಷ್ಮಾ ಸ್ವರಾಜ್ ಅವರನ್ನು ಸಾಮಿ ಸಂಪರ್ಕಿಸಿದ್ದಾರೆ. 
ಸುಷ್ಮಾ ಸ್ವರಾಜ್ ಅವರೇ ನಿಮ್ಮ ಕಾಳಜಿಗೆ ಧನ್ಯವಾದಗಳು. ಅವರನ್ನು ನಾನು ಸಂಪರ್ಕಿಸಿದೆ. ನಮ್ಮ ತಂಡಕ್ಕೆ ಅವರು ನೆರವಾಗಿದ್ದಾರೆ. ಇಂತಹವರು ನಮ್ಮ ವಿದೇಶಾಂಗ ಸಚಿವರಾಗಿದ್ದಕ್ಕೆ ಹೆಮ್ಮೆ ಪಡುತ್ತಿದ್ದೇನೆ ಎಂದು ರಿಜಿಜು ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ ಸಾಮಿ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT