ನವದೆಹಲಿ: ಆಂಗ್ಲ ಮಾಧ್ಯಮವೊಂದು ಈ ಬಗ್ಗೆ ವರದಿ ಪ್ರಕಟಿಸಿದ್ದು, ಗಡಿಯಲ್ಲಿ ನಿರಂತರ ಕದನ ವಿರಾಮ ಉಲ್ಲಂಘನೆ ಮಾಡುವ ಪಾಕಿಸ್ತಾನ ಜಮ್ಮು ಪ್ರದೇಶದಿಂದ ಭಯೋತ್ಪಾದಕರನ್ನು ಭಾರತದೊಳಗೆ ನುಗ್ಗಿಸಲು ತಯಾರಿ ನಡೆಸಿದೆ ಎಂದು ಭದ್ರತಾ ಸಿಬ್ಬಂದಿ ಪಡೆಗಳು ಮಾಹಿತಿ ನೀಡಿವೆ. ಪಾಕಿಸ್ತಾನದ ಸೇನಾ ಪಡೆಯ ವಿಶೇಷ ತಂಡ ಜಮ್ಮುವಿನ ಮೂಲಕ ಲಷ್ಕರ್-ಎ-ತೊಯ್ಬಾ, ಜೈಶ್-ಎಮೊಹಮ್ಮದ್, ಉಗ್ರ ಸಂಘಟನೆಗಳ ಉಗ್ರರು ಭಾರತದೊಳಗೆ ಪ್ರವೇಶಿಸುವುದಕ್ಕೆ ಸಹಕಾರ ನೀಡುತ್ತಿದೆ ಎಂದು ವರದಿ ಪ್ರಕಟವಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಪಾಕಿಸ್ತಾನಿ ಪೋಸ್ಟ್ ಗಳಿಂದ ಪಾಕಿಸ್ತಾನದ ಗಡಿ ಕಾರ್ಯ ಪಡೆ ಭಯೋತ್ಪಾದಕರಿಗೆ ಭಾರತದೊಳಗೆ ನುಗ್ಗಲು ಸಹಕಾರ ನೀಡುತ್ತಿದೆ ಎಂದು ತಿಳಿದುಬಂದಿದೆ. 2017 ರಲ್ಲಿ ಕಾಶ್ಮೀರದಲ್ಲಿ ನಡೆದಿದ್ದ ಭಾರತೀಯ ಯೋಧರ ಶಿರಚ್ಛೇದ ಪ್ರಕರಣದಲ್ಲಿಯೂ ಪಾಕಿಸ್ತಾನದ ಬಾರ್ಡರ್ ಆಕ್ಷನ್ ಟೀಮ್ ವಿರುದ್ಧ ಕೇಳಿಬಂದಿತ್ತು