ಸಾಂದರ್ಭಿಕ ಚಿತ್ರ 
ದೇಶ

ಚೆನ್ನೈ: ಈ ಮಗುವಿನ ಜನ್ಮ ದಾಖಲೆಯಲ್ಲಿ ತಂದೆಯ ಹೆಸರೇ ಇಲ್ಲ!

ಭಾರತದಲ್ಲಿ ಹುಟ್ಟುವ ಪ್ರತಿ ಮಗುವಿಗೆ ಜನನ ಪ್ರಮಾಣಪತ್ರ ಮಾಡಿಸುವುದು ಕಡ್ಡಾಯವಿದೆ. ಹಾಗೆಯೇ ಈ ಜನನ ಪ್ರಮಾಣಪತ್ರದಲಿ ಮಗುವಿನ ತಂದೆಯ ಹೆಸರು ಇರಬೇಕಾಗುತ್ತದೆ.

ಚೆನ್ನೈ: ಭಾರತದಲ್ಲಿ ಹುಟ್ಟುವ ಪ್ರತಿ ಮಗುವಿಗೆ ಜನನ ಪ್ರಮಾಣಪತ್ರ ಮಾಡಿಸುವುದು ಕಡ್ಡಾಯವಿದೆ. ಹಾಗೆಯೇ ಈ ಜನನ ಪ್ರಮಾಣಪತ್ರದಲಿ ಮಗುವಿನ ತಂದೆಯ ಹೆಸರು ಇರಬೇಕಾಗುತ್ತದೆ. ಆದರೆ ಇದೀಗ ಚಿಅನ್ನೈನ ಒಂದು ಮಗು ತಂದೆಯ ಹೆಸರು ಉಲ್ಲೇಖಿಸದೆ ಜನನ ಪ್ರಮಾಣ ಪತ್ರ ಪಡೆದುಕೊಂಡಿದೆ.
ಕೃತಕ ಗರ್ಭಧಾರಣೆ ಮೂಲಕ ಜನಿಸಿದ ಮಗು ಇದಾಗಿದ್ದು ತಾಯಿಯ ಕೋರಿಕೆಯಂತೆ ಜನನ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರನ್ನು ಕೈಬಿಡಲಾಗಿದೆ.
ದಾನಿಯೊಬ್ಬರ ವೀರ್ಯಾಣುವಿನಿಂದ ಜನಿಸಿದ ಮಗುವಿಗೆ ಅದರ ತಂದೆಯ ಹೆಸರು ಉಲ್ಲೇಖಿಸುವ ಅಗತ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್‌ ಸೂಚಿಸಿದ್ದ ಹಿನ್ನೆಲೆಯಲ್ಲಿ ಅರ್ಜಿಯಲ್ಲಿನ ತಂದೆಯ ಹೆಸರಿನ ಜಾಗವನ್ನು ಖಾಲಿ ಬಿಡಲಾಗಿದೆ.
ತಮಿಳು ನಾಡಿನ ಮಧುಮಿತಾ ತನ್ನ ಪತಿಯಿಂದ ವಿಚ್ಚೇದನ ಪಡೆದುಕೊಂಡಿದ್ದರು. ಹೀಗೆ ವಿಚ್ಚೇದನ ಪಡೆದ ಬಳಿಕ ಆಕೆ  ಕೃತಕ ಗರ್ಭದಾರಣೆ ಮೂಲಕವಾಗಿ 2017ರ ಏಪ್ರಿಲ್ ನಲ್ಲಿ ಹೆಣ್ಣು ಮಗುವಿನ ತಾಯಿಯಾದರು. ಮಗುವಿಗೆ  ತಾವಿಶಿ ಪೆರಾರ ಎಂದು ನಾಮಕರಣ ಮಾಡಲಾಗಿತ್ತು. ಆ ವೇಳೆ ತಿರುಚ್ಚಿಯ ನಗರಪಾಲಿಕೆ ಅಧಿಕಾರಿಗಳು ಮಗುವಿನ ಜನನ ಪ್ರಮಾಣ ಪತ್ರದಲ್ಲಿ ಮಧುಮಿತಾ ಅವರ ಹೆರಿಗೆ ಸಂದರ್ಭ ಸಹಕಾರ ನೀಡಿದ್ದ ಮನೀಶ್ ಎನ್ನುವವರ ಹೆಸರನ್ನು ನಮೂದಿಸಿದ್ದರು. ಆದರೆ ಮಧುಮಿತಾ ಮಗುವಿನ ತಂದೆ ಹೆಸರಿರುವ ಜಾಗದಲ್ಲಿ ಮನೀಶ್ ಹೆಸರು ಬೇಡ, ಅದನ್ನು ತೆಗೆದುಹಾಕಬೇಕೆಂದು ಅಧಿಕಾರಿಗಳಿಗೆ ಮನವಿ ಮಾಡಿದರು. ಅಧಿಕಾರಿಗಳು ಂಆತ್ರ ಈ ಮನವಿಯನ್ನು ನಿರಾಕರಿಸಿದ್ದರು. ಈ ಕಾರಣಕ್ಕಾಗಿ ಮಧುಮಿತಾ ನ್ಯಾಯಾಲಯದ ಮೊರೆ ಹೊಕ್ಕರು.
ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಅರ್ಜಿಯಲ್ಲಿರುಅ ಮನೀಶ್ ಹೆಆರನ್ನು ತೆಗೆದು ಹಾಕುವಂತೆ ಸೂಚಿಸಿತ್ತು. ಇದೇ ವೇಳೆ ಮಧುಮಿತಾ ಅವರ ಮಾಜಿ ಪತಿ ಮತ್ತು ಮನೀಶ್ ಇಬ್ಬರೂ ತಾವು ಈ ಮಗುವಿನ ತಂದೆ ಅಲ್ಲವೆಂದು ನ್ಯಾಯಾಲಯಕ್ಕೆ ಲಿಖಿತ ಉತ್ತರ ನೀಡಿದ್ದರು. ಮಧುಮಿತಾ ತಾವು ಕೃತಕ ಗರ್ಭದಾರಣೆ ಮೂಲಕ ತಾಯಿಯಾಗಿದ್ದಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಸಿದ್ದರು. ಹೀಗಾಗಿ ನ್ಯಾಯಾಲಯವು ಪ್ರಮಾಣಪತ್ರದಲ್ಲಿನ ತಂದೆ ಹೆಸರನ್ನು ಅಳಿಸಿ ಹಾಕಿ ತಾಯ್ತಿ ಹೆಸರು ಮಾತ್ರ ಇರಿಸುವಂತೆ ಸೂಚನೆ ನಿಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

2013ರ ಲೈಂಗಿಕ ದೌರ್ಜನ್ಯ ಪ್ರಕರಣ: Tehelka ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ ಸುಪ್ರೀಂ ಕೋರ್ಟ್‌ ಶಾಕ್‌; 2 ವಾರಗಳಲ್ಲಿ ಶರಣಾಗುವಂತೆ ಖಡಕ್ ಸೂಚನೆ..!

ವಿಮಾನ ಸುರಕ್ಷತೆಯಲ್ಲಿ ರಾಜಿಯಿಲ್ಲ: ಪೈಲಟ್‌ಗಳ ಡ್ರಗ್‌ ಟೆಸ್ಟ್‌ ನಿಯಮದಲ್ಲಿ ಮಹತ್ವದ ಬದಲಾವಣೆ, ವರ್ಷವಿಡೀ ಯಾದೃಚ್ಛಿಕ ತಪಾಸಣೆಗೆ ಕೇಂದ್ರ ಸರ್ಕಾರ ಮುಂದು..!

ಮೊಜ್ತಾಬಾ ಖಮೇನಿ ಜೀವಂತವಾಗಿ ಇದ್ದಾರೋ ಅಥವಾ ಇಲ್ಲವೋ? ಆತಂಕದ ಹಳೆಯ Video ಬಿಡುಗಡೆ ಮಾಡಿದ ಇರಾನ್!